Your cart is currently empty!
ಧನ ಸಂಪತ್ತು ವೃದ್ಧಿ,ಪ್ರೇಮ ವಿಚಾರಕ್ಕೆ ಸೂಕ್ತ ಪರಿಹಾರ ವೀಳ್ಯದೆಲೆ ಹಾಗೂ ಗಂಧ…
ಧನ ಸಂಪತ್ತು ವೃದ್ಧಿ,ಪ್ರೇಮ ವಿಚಾರಕ್ಕೆ ಸೂಕ್ತ ಪರಿಹಾರ ವೀಳ್ಯದೆಲೆ ಹಾಗೂ ಗಂಧ…ನಮ್ಮ ಮನಸ್ಸಿನಲ್ಲಿರುವ ಕೋರಿಕೆಗಳಾದ ಪ್ರೇಮ ವಿಚಾರ, ಧನ ಸಂಪತ್ತು ವೃದ್ಧಿ, ವಿವಾಹದ ಸಮಸ್ಯೆ, ಉದ್ಯೋಗದ ಸಮಸ್ಯೆಗೆ ಸೂಕ್ತ ಪರಿಹಾರ ತಾಂಬೂಲ ಪರಿಹಾರ. ಹಾಗಾದರೆ ಈ ತಾಂಬೂಲ ಪರಿಹಾರವನ್ನು ಯಾವ ಸಮಯದಲ್ಲಿ ಹಾಗೂ ಯಾವ ರೀತಿ ಮಾಡಬೇಕೆಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಮೊದಲಿಗೆ ಗಂಧಕ್ಕೆ ಸ್ವಲ್ಪ ನೀರನ್ನು ಹಾಕಿ ವೀಳ್ಯದೆಲೆಯ ಮೇಲೆ ಉಂಗುರದ ಬೆರಳಿನಿಂದ ರೀ ಎಂದು ಬರೆಯಬೇಕು. ಈ ರೀತಿ ವೀಳ್ಯದೆಲೆಯ ಮೇಲೆ ಬರೆದನಂತರ ಒಂಬತ್ತು ದಿನಗಳ ಕಾಲ ದೇವರಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ಪೂಜೆ ಮಾಡಿದ ವೀಳ್ಯದೆಲೆಯನ್ನು ಜೇಬಿನಲ್ಲಿ ಅಥವಾ ವ್ಯಾನಿಟಿ ಪರ್ಸಿನಲ್ಲಿ ಇಟ್ಟುಕೊಳ್ಳಬಹುದು.
ಮುಂಜಾನೆ ಎದ್ದ ತಕ್ಷಣ ಸ್ನಾನವನ್ನು ಮಾಡಿ ಶುದ್ದಿಯಾಗಿ ಲಕ್ಷ್ಮಿ ಅಥವಾ ಗಣಪತಿಯ ಫೋಟೋ ಮುಂದೆ ಉಪಾಯವನ್ನು ಮಾಡಬೇಕು.ವೀಳ್ಯದೆಲೆಯ ಮೇಲೆ ಎರಡು ಲವಂಗವನ್ನು ಇಟ್ಟು ಬಲ ಕೈಯಿಯ ಮೇಲೆ ವೀಳ್ಯದೆಲೆಯನ್ನು ಇಟ್ಟುಕೊಂಡು ಅದರ ಕೆಳಗೆ ಎಡಕೈಯನ್ನು ಇಟ್ಟುಕೊಂಡು ಮನಸ್ಸಿನಲ್ಲಿರುವ ನಿಮ್ಮ ಮುಖ್ಯವಾದ ಕೋರಿಕೆಯಾನ್ನು ಹೇಳಿಕೊಳ್ಳಬೇಕು. ಕೋರಿಕೆಯನ್ನು ಹೇಳಿದ ನಂತರ ವೀಳ್ಯದೆಲೆಯನ್ನು ದೇವರ ಫೋಟೋ ಮುಂದೆ ಇಡಬೇಕು. ವೀಳ್ಯದೆಲೆಯನ್ನು ಇಟ್ಟ ನಂತರ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು.ಸಾಯಂಕಾಲ ಮತ್ತೊಮ್ಮೆ ಕೈ ಕಾಲುಗಳನ್ನು ತೂಳೆದುಕೊಂಡು ಶುದ್ಧವಾಗಿ ದೇವರ ಮುಂದೆ ಹೋಗಿ ಮುಂಜಾನೆ ಲಕ್ಷ್ಮಿ ಅಥವಾ ಗಣಪತಿಯ ಫೋಟೋ ಮುಂದೆ ಇಟ್ಟಿರುವ ವೀಳ್ಯದೆಲೆಯನ್ನು ತೆಗೆದುಕೊಂಡು ಮಡಿಚಿ ವೀಳ್ಯದೆಲೆಯ ಮೇಲೆ ಎರಡು ಕರ್ಪೂರವನ್ನು ಇಟ್ಟು ಹಚ್ಚಬೇಕು. ಈ ಚಿಕ್ಕ ಕೆಲಸವನ್ನು ಯುಗಾದಿ ಹಬ್ಬದ ದಿನ ಮಾಡಿದರೆ ತುಂಬಾ ಉತ್ತಮವಾದದ್ದು. ಯುಗಾದಿ ಹಬ್ಬದ ದಿನ ಈ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಮಂಗಳವಾರ ಅಥವಾ ಶುಕ್ರವಾರದ ದಿನದಂದು ಮಾಡಬಹುದು. ನಂತರ ಯಾರೂ ತುಳಿಯದ ಜಾಗದಲ್ಲಿ ಕರ್ಪೂರದಿಂದ ಹಚ್ಚಿದ ವೀಳ್ಯದೆಲೆಯನ್ನು ಹಾಕಬೇಕು.
ಈ ಪರಿಹಾರವನ್ನು ಶ್ರದ್ಧೆಯಿಂದ, ಭಕ್ತಿಯಿಂದ, ನಂಬಿಕೆಯಿಟ್ಟು ಮಾಡಿದರೆ ಖಚಿತವಾದ ಫಲಗಳು ಲಭಿಸುತ್ತದೆ. ಈ ಉಪಾಯವನ್ನು ಗರ್ಭಿಣಿ ಸ್ತ್ರೀಯರು ಹಾಗೂ ಹೆಂಗಸರು ಮುಟ್ಟಾದ ಸಮಯದಲ್ಲಿ ಮಾಡಬಾರದು.ಈ ಪರಿಹಾರದಿಂದ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ಈಡೇರುತ್ತವೆ.