Your cart is currently empty!
Category: ಜ್ಯೋತಿಷ್ಯ
ಆಷಾಢ ಮಾಸದಲ್ಲಿ ಮಣ್ಣಿನ ದೀಪದಿಂದ ಅಮ್ಮನವರಿಗೆ ದೀಪಾರಾಧನೆ ಏಕೆ ಮಾಡುತ್ತಾರೆ ತಿಳಿದಿದೆಯೇ ನಿಮಗೆ ?
ಆಷಾಢಮಾಸ ಹಾಗೂ ಶ್ರಾವಣಮಾಸ ಹತ್ತಿರ ಬರುತ್ತಿರುವುದರಿಂದ ಅಮ್ಮನವರಿಗೆ ವಿಶೇಷವಾದ ದೀಪಾರಾಧನೆಯನ್ನು ಮಾಡುವುದರಿಂದ ಸಾಕಷ್ಟು ಲಾಭವಿರುತ್ತದೆ. ಈ ದೀಪಾರಾಧನೆಗೆ ಎರಡು ಮಣ್ಣಿನ ದೀಪವನ್ನು ತೆಗೆದುಕೊಳ್ಳಬೇಕು. ಎರಡು ದೀಪಕ್ಕೂ ಅರಿಶಿನವನ್ನು ಹಚ್ಚಬೇಕು. ಅದರಲ್ಲಿ ಒಂದು ದೀಪಕ್ಕೆ ಮಾತ್ರ ಒಳಭಾಗ ಒಂದನ್ನು ಬಿಟ್ಟು ಉಳಿದ ಎಲ್ಲಾ ಭಾಗಕ್ಕೂ ಅರಿಶಿಣವನ್ನು ಹಚ್ಚಬೇಕು. ಒಂದು ಹಿತ್ತಾಳೆಯ ಅಥವಾ ತಾಮ್ರದ ತಟ್ಟೆಯನ್ನು ತೆಗೆದುಕೊಂಡು ತಟ್ಟೆಯೊಳಗೆ ರಂಗೋಲಿಯನ್ನು ಹಾಕಬೇಕು. ರಂಗೋಲಿಯನ್ನು ಬಿಡಿಸಿದ ನಂತರ ಅರಿಶಿನದಿಂದ ಅಲಂಕಾರವನ್ನು ಮಾಡಿ ಕುಂಕುಮವನ್ನು ಇಡಬೇಕು. ನಂತರ ಪಚ್ಚ ಕರ್ಪೂರವನ್ನು ಪುಡಿಮಾಡಿಕೊಂಡು ಅದರ ಮೇಲೆ ಹಾಕಬೇಕು. ಹಿತ್ತಾಳೆ,ತಾಮ್ರದ ತಟ್ಟೆ ಮಾತ್ರ ಉಪಯೋಗಿಸಬೇಕು ಅದರ ಬದಲು ಸ್ಟೀಲ್ ತಟ್ಟೆಯನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು.
ರಂಗೋಲಿ ಇಂದ ಅಲಂಕಾರವನ್ನು ಮಾಡಿದ ನಂತರ ಬೇವಿನ ಸೊಪ್ಪನ್ನು ರಂಗೋಲಿಯ ಮೇಲೆ ಇಡಬೇಕು. ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದದ್ದು ಬೇವಿನ ಸೊಪ್ಪು ಹಾಗೂ ಗ್ರಾಮದೇವತೆಗೆ ಕೂಡ ಬೇವಿನ ಸೊಪ್ಪು ತುಂಬ ಪ್ರಿಯವಾದದ್ದು. ಬೇವಿನ ಸೊಪ್ಪನ್ನು ರಂಗೋಲಿಯ ಮೇಲೆ ಇಟ್ಟ ನಂತರ ಅದರ ಮೇಲೆ ಸ್ವಲ್ಪ ಅರಿಶಿನವನ್ನು ಹಾಕಿ ಸಂಪೂರ್ಣವಾಗಿ ಎಲ್ಲಾ ಭಾಗಕ್ಕೂ ಹಾಕಿದ್ದ ಅರಿಶಿಣದ ದೀಪವನ್ನು ಮೊದಲಿಗೆ ಇಡಬೇಕು. ದೀಪದ ಒಳಗೆ ಸ್ವಲ್ಪ ಅಕ್ಷತೆಯನ್ನು ಹಾಕಿ ಅದರ ಮೇಲೆ ಉಳಿದಿರುವ ಮತ್ತೊಂದು ದೀಪವನ್ನು ಇಡಬೇಕು. ಎರಡನೆಯ ದೀಪಕ್ಕೂ ಅರಿಶಿನ-ಕುಂಕುಮವನ್ನು ಹಚ್ಚಿ ಅಕ್ಷತೆಯನ್ನು ಹಾಕಬೇಕು.
ದೀಪಕ್ಕೆ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು. 6 ಬತ್ತಿಯನ್ನು ತೆಗೆದುಕೊಂಡು ಎಲ್ಲಾ ಬತ್ತಿಯನ್ನು ಒಗ್ಗೂಡಿಸಿ ಒಂದು ಬತ್ತಿಯನ್ನಾಗಿ ಮಾಡಿ ದೀಪವನ್ನು ಹಚ್ಚಬೇಕು. ಮಣ್ಣಿನ ದೀಪವನ್ನು ಹೆಚ್ಚಾಗಿ ಬಳಸುವುದರಿಂದ ಮನೆಗೆ ಯಾವ ಕೆಟ್ಟ ದೃಷ್ಟಿಯು ಬೀಳುವುದಿಲ್ಲ ಹಾಗೂ ಮನೆಯಲ್ಲಿ ಒಂದರ ಮೇಲೆ ಒಂದರಂತೆ ಶುಭ ಕಾರ್ಯಗಳು ನಡೆಯುತ್ತಿರುತ್ತವೆ. ಒಂದು ವೇಳೆ ಮಣ್ಣಿನ ದೀಪ ಇಲ್ಲವೆಂದರೆ ಹಿತ್ತಾಳೆಯ ಅಥವಾ ಬೆಳ್ಳಿಯ ದೀಪವನ್ನು ಹಚ್ಚಿ ದೀಪಾರಾಧನೆ ಮಾಡಬಹುದು.ದೀಪಾರಾಧನೆಯನ್ನು ಅಮ್ಮನವರ ದಿನವಾದ ಮಂಗಳವಾರ ಅಥವಾ ಶುಕ್ರವಾರ ಮಾಡಿದರೆ ತುಂಬಾ ಒಳ್ಳೆಯದು. ಮುಂಜಾನೆ 6 ಘಂಟೆಯ ಒಳಗೆ ಅಥವಾ ಸಾಯಂಕಾಲ 6 ಘಂಟೆಯ ನಂತರ ದೀಪಾರಾಧನೆ ಮಾಡಬಹುದು. ಈ ರೀತಿಯಾಗಿ ದೀಪಾರಾಧನೆಯನ್ನು ಮಾಡುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ಸಾಂಬ್ರಾಣಿ ಧೂಪವನ್ನು ಮನೆಯಲ್ಲಿ ಹಚ್ಚುವುದರಿಂದ ಆಗುವ ಪ್ರಯೋಜನಗಳು ತಿಳಿದಿದೆಯೇ ನಿಮಗೆ ?
ಹಿಂದೂ ಧರ್ಮದಲ್ಲಿ ಪೂಜೆಗೆ ಎಷ್ಟು ಮಹತ್ವವನ್ನು ಕೊಟ್ಟಿದ್ದಾರೋ ಅಷ್ಟೇ ಮಹತ್ವವನ್ನು ಸಾಂಬ್ರಾಣಿ ಧೂಪಕ್ಕು ಸಹ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಲೆಗೆ ಸ್ನಾನ ಮಾಡಿದಾಗ ನಂತರ ಸಾಂಬ್ರಾಣಿ ಧೂಪವನ್ನು ಕೊಡುತ್ತಿದ್ದರು. ಈಗಿನ ಕಾಲದಲ್ಲಿ ಬಾಣಂತಿಯರಿಗೆ, ಪುಟ್ಟ ಮಕ್ಕಳಿಗೆ ತಲೆಗೆ ಸ್ನಾನವನ್ನು ಮಾಡಿಸಿದ ನಂತರ ಸಾಂಬ್ರಾಣಿ ಧೂಪವನ್ನು ಕೊಡುವುದು ಸರ್ವೇಸಾಮಾನ್ಯವಾಗಿದೆ. ವೈಜ್ಞಾನಿಕವಾಗಿಯೂ ಸಾಂಬ್ರಾಣಿ ಧೂಪವನ್ನು ಮನೆಯ ಒಳಗಡೆ ಹಚ್ಚುವುದರಿಂದ ಯಾವುದೇ ಕ್ರಿಮಿಕೀಟಗಳು ಬರುವುದಿಲ್ಲ ಎಂದು ಸಾಬೀತಾಗಿದೆ.
ಸಾಂಬ್ರಾಣಿ ಧೂಪವನ್ನು ಅಮಾವಾಸ್ಯೆ ದಿನ, ಹುಣ್ಣಿಮೆಯ ದಿನ, ಮಂಗಳವಾರ, ಶುಕ್ರವಾರದ ದಿನದಂದು ಹಚ್ಚಬೇಕು. ಮುಂಜಾನೆ ಸಾಂಬ್ರಾಣಿ ಧೂಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯು ಶಾಶ್ವತವಾಗಿ ನೆಲೆಸುತ್ತಾಳೆ ಹಾಗೂ ದುಷ್ಟಶಕ್ತಿಗಳು ಮನೆಗೆ ಪ್ರವೇಶವನ್ನು ಮಾಡುವುದಿಲ್ಲ.
ಸಾಂಬ್ರಾಣಿ ಧೂಪವನ್ನು ಹಾಕಬೇಕಾದರೆ ಮೊದಲಿಗೆ ಇಜ್ಜಲು ಬೇಕು, ಒಂದು ಹಿತ್ತಾಳೆಯ ಬಟ್ಟಲು ಅಥವಾ ಮಣ್ಣಿನ ಬಟ್ಟಲು, ಸಾಂಬ್ರಾಣಿ, ಪಚ್ಚಕರ್ಪೂರ, ಜವಾದ್ ಪೌಡರ್ ತೆಗೆದುಕೊಳ್ಳಬೇಕು. ಎರಡು ಪೀಸ್ ಇಜ್ಜಳನ್ನು ಬೆಂಕಿ ಮಾಡಿಕೊಂಡು ನಂತರ ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು ತದನಂತರ ಪಚ್ಚ ಕರ್ಪೂರವನ್ನು ಹಾಕಬೇಕು ಕೊನೆಯದಾಗಿ ಸ್ವಲ್ಪ ಜಾವದ್ ಪೌಡರನ್ನು ಹಾಕಬೇಕು. ನಂತರದಲ್ಲಿ ಕೈಯಲ್ಲಿ ಹಿತ್ತಾಳೆ ಬಟ್ಟಲು ಇಟ್ಟುಕೊಂಡು ಮನೆಯ ಮೂಲೆ ಮೂಲೆಗೂ ಸಾಂಬ್ರಾಣಿಯ ಹೊಗೆಯನ್ನು ಹಾಕಬೇಕು. ಇದರಿಂದ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚಾಗುತ್ತದೆ.
ಸಾಂಬ್ರಾಣಿ ಧೂಪವನ್ನು ಮನೆಯಲ್ಲಿ ಹಾಕುವುದರಿಂದ ಲಕ್ಷ್ಮೀದೇವಿಯು ಬಹಳ ಬೇಗ ಆಕರ್ಷಿತಳಾಗುತ್ತಾಳೆ ಹಾಗೂ ಮನೆಯಲ್ಲಿರುವ ಕುಟುಂಬದ ಸದಸ್ಯರಿಗೆ ಆರೋಗ್ಯವೃದ್ಧಿಯಾಗುತ್ತದೆ ಮತ್ತು ಹಣಕಾಸಿನ ಸಮಸ್ಯೆಯು ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ ಹಾಗೂ ಲಕ್ಷ್ಮೀದೇವಿ ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾಳೆ.
ಪದೇಪದೇ ಕಂಕಣಭಾಗ್ಯ ಕೂಡಿ ಬರುತ್ತಿಲ್ಲ ಎಂದರೆ ಏನು ಮಾಡಬೇಕೆಂಬುದು ಗೊತ್ತೇ ನಿಮಗೆ ?
ಪ್ರತಿಯೊಬ್ಬ ತಂದೆ ತಾಯಂದಿರಿಗೆ ತಮ್ಮ ಮಕ್ಕಳಿಗೆ ಮದುವೆಯನ್ನು ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ, ಆದರೆ ಕೆಲವೊಂದು ಬಾರಿ ಮಕ್ಕಳಿಗೆ 35 ಅಥವಾ 40 ವರ್ಷವಾದರೂ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ. ಪದೇಪದೇ ವಿವಾಹಕ್ಕೆ ಸಂಬಂಧಪಟ್ಟ ಕಾರ್ಯಗಳು ಬಂದಾಗ ಅಡಚಣೆ ಉಂಟಾಗುವುದು ಅಥವಾ ಮನೆಗೆ ವಿವಾಹದ ಪ್ರಸ್ತಾಪವನ್ನು ಇಟ್ಟುಕೊಂಡು ಬಂದಾಗ ತೊಂದರೆ ಉಂಟಾಗುವುದು,ಕೆಲವೊಂದು ಬಾರಿ ಮಕ್ಕಳಿಗೆ ವಿವಾಹವನ್ನು ಮಾಡಿಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಕೆಲವೊಂದು ದಾರಿದ್ರತೆಗಳಿಂದ ತಂದೆ-ತಾಯಿಯೇ ಮಾಡಲಿ ಬಿಡು ಎಂದು ಅವರ ಮೇಲೆ ಜವಾಬ್ದಾರಿಯನ್ನು ಹಾಕಿ ಅವರು ಸುಮ್ಮನಾಗಿ ಬಿಡುತ್ತಾರೆ. ನಂತರ ತಂದೆ-ತಾಯಿಗಳು ಮದುವೆ ಮಾಡುವುದಕ್ಕೆ ಸಾಕಷ್ಟು ಪ್ರಯತ್ನಪಟ್ಟರೂ ಆಗುತ್ತಿಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ಕಂಕಣಭಾಗ್ಯ ಅತಿ ಶೀಘ್ರದಲ್ಲಿ ಕೂಡಿಬರಲಿದೆ. ಒಂದು ವೇಳೆ ಹೆಣ್ಣುಮಕ್ಕಳಿಗೆ ವಿವಾಹ ತಡವಾಗಿ ಆಗುತ್ತಿದ್ದರೆ ಅಥವಾ ವಿಳಂಬವಾಗುತ್ತಿದ್ದರೆ ತಂದೆ-ತಾಯಂದಿರಿಗೆ ಮಡಿಲಿನಲ್ಲಿ ಕೆಂಡವನ್ನು ಇಟ್ಟುಕೊಂಡಂತೆ ಆಗುತ್ತದೆ. ಅಕ್ಕಪಕ್ಕದವರು ಮದುವೆ ಆಯಿತಾ ಎಂದು ಕೇಳುವುದರಿಂದ ಬೇಸರವಾಗುತ್ತದೆ.
ಹೆಣ್ಣುಮಕ್ಕಳು 5 ಸೋಮವಾರ ಶಿವನ ದೇವಸ್ಥಾನಕ್ಕೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಿ ಅಲ್ಲಿಯ ಅರ್ಚಕರಿಗೆ ಅಥವಾ ಪುರೋಹಿತರಿಗೆ ಕೊಟ್ಟು ವಿವಾಹಕ್ಕೆ ಸಂಬಂಧಪಟ್ಟಂತ ಪೂಜೆಯನ್ನು ಮಾಡಿಕೊಡಿ ಎಂದು ಕೇಳಬೇಕು. ಇದಕ್ಕೂ ಮುಂಚೆ ಮೊದಲು ಮುಂಜಾನೆ ಶಿವನಿಗೆ ಜಲಾಭಿಷೇಕವನ್ನು ಮಾಡಿಸಬೇಕು ನಂತರ ತೆಂಗಿನಕಾಯಿಯಿಂದ ಪೂಜೆಯನ್ನು ಮಾಡಿಸಿ ಮನೆಗೆ ತರಬೇಕು. ಪೂಜೆ ಮಾಡಿಸಿಕೊಂಡು ತಂದ ತೆಂಗಿನಕಾಯಿಯಿಂದ ಮನೆಯಲ್ಲಿ ಯಾವುದಾದರೂ ಒಂದು ತಿಂಡಿಯನ್ನು ಮಾಡಿ ಸೇವಿಸಬೇಕು.ಈ ರೀತಿಯಾಗಿ ಪ್ರತಿ ಸೋಮವಾರ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿಸಿ ಸಾಯಂಕಾಲದ ಊಟದಲ್ಲಿ ಪೂಜೆಮಾಡಿಸಿದ ತೆಂಗಿನಕಾಯಿಯಿಂದ ಯಾವುದಾದರೂ ತಿಂಡಿಯನ್ನು ಮಾಡಿ ಸೇವಿಸುವುದರಿಂದ ಕಂಕಣ ಭಾಗ್ಯ ಕೂಡಿ ಬರಲಿದೆ.
ಗಂಡು ಮಕ್ಕಳು 3 ಗುರುವಾರ ಮನೆಯಲ್ಲಿ 3 ಚಪಾತಿಯನ್ನು ಮಾಡಿಸಿ ಅದಕ್ಕೆ ಸಂಪೂರ್ಣವಾಗಿ ಅರಿಶಿಣವನ್ನು ಹಚ್ಚಿ ನಂತರ ಆ ಚಪಾತಿಯನ್ನು ಹಸುವಿಗೆ ತಿನ್ನಿಸಬೇಕು. ಈ ರೀತಿಯಾಗಿ 3 ಗುರುವಾರ ಮಾಡಿದ ನಂತರ 4 ನೇ ಗುರುವಾರದಿಂದ ಹುಡುಗಿಯನ್ನು ಹುಡುಕಲು ಪ್ರಾರಂಭ ಮಾಡಿದರೆ ಖಂಡಿತವಾಗಿಯೂ ವಿವಾಹವು ಅತಿ ಶೀಘ್ರದಲ್ಲಿ ಆಗುತ್ತದೆ.
ನಾಯಿಯ ಜನ್ಮ ದೊರಕುವುದಕ್ಕೆ ಏನು ಕಾರಣ ಎಂದು ತಿಳಿದಿದೆಯೇ ನಿಮಗೆ ?
ಮನುಷ್ಯನ ಸಾವಿನ ನಂತರ ಅವನ ಕರ್ಮಗಳ ಅನುಸಾರವಾಗಿ ಮುಂದಿನ ಜನ್ಮದಲ್ಲಿ ಯಾವುದಾದರೂ ಒಂದು ರೂಪದಲ್ಲಿ ಜನ್ಮವು ದೊರಕುತ್ತದೆ. ಯಾವ ಮನುಷ್ಯನು ಜೀವಿತಕಾಲದಲ್ಲಿ ಬಹಳಷ್ಟು ಪಾಪದ ಕೆಲಸಗಳನ್ನು ಮಾಡುತ್ತಾನೋ ಆ ವ್ಯಕ್ತಿಗೆ ಮುಂದಿನ ಜನ್ಮದಲ್ಲಿ ತನ್ನ ನೋವನ್ನು ಬೇರೆಯವರೊಂದಿಗೆ ಹೇಳಿಕೊಳ್ಳುವುದಕ್ಕೂ ಸಾಧ್ಯವಾಗದ ರೀತಿ ಜನ್ಮವು ಸಿಗುತ್ತದೆ.
ಭವಂತ ಶ್ರೀರಾಮನಿಗೆ ಸಭೆಯಲ್ಲಿ ಕೂತಿರುವಾಗ ಒಂದು ನಾಯಿಯು ಅಳುತ್ತಿರುವ ಶಬ್ದವು ಕೇಳಿಬರುತ್ತದೆ, ಆದರೆ ದ್ವಾರಪಾಲಕರು ಆ ನಾಯಿಯನ್ನು ಓಡಿಸುತ್ತಾರೆ. ಆದರೆ ಮರುದಿನ ಮತ್ತೆ ನಾಯಿಯು ಸಭೆಯ ಹತ್ತಿರ ಬಂದು ಅಳುವುದಕ್ಕೆ ಪ್ರಾರಂಭಿಸುತ್ತದೆ, ಆದರೆ ದ್ವಾರಪಾಲಕರು ಮತ್ತೆ ಅದನ್ನು ಓಡಿಸುತ್ತಾರೆ. ಸಭೆಯ ಮೂರನೇ ದಿನವೂ ರಾಮನಿಗೆ ನಾಯಿಯು ಅಳುವ ಶಬ್ದ ಕೇಳಿಬರುತ್ತದೆ. ಆಗ ಶ್ರೀರಾಮರು ದ್ವಾರಪಾಲಕರಿಗೆ ನಾಯಿಯನ್ನು ಸಭೆಯ ಒಳಗೆ ಬರಲು ಬಿಡುವುದಕ್ಕೆ ಹೇಳುತ್ತಾರೆ.
ನಾಯಿಯು ದ್ವಾರಪಾಲಕರಿಗೆ ಹಿಂದಿನ ಜನ್ಮದಲ್ಲಿ ಮಾಡಿದ್ದ ಪಾಪ ಕರ್ಮದಿಂದ ನನಗೆ ಈ ಜನ್ಮದಲ್ಲಿ ನಾಯಿಯ ರೂಪ ದೊರಕಿದೆ ಆದ್ದರಿಂದ ದೇವಾಲಯಗಳಲ್ಲಿ ಅಥವಾ ಯಜ್ಞವನ್ನು ಮಾಡುವ ಸ್ಥಳಗಳಲ್ಲಿ , ರಾಜ ಸಭೆಗಳಲ್ಲಿ ಹೋಗುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪ್ರಭು ಶ್ರೀರಾಮರಿಗೆ ಇಲ್ಲೇ ಬಂದು ಭೇಟಿ ಮಾಡಲು ಹೇಳಿ ಎಂದು ಹೇಳಿತು ನಾಯಿ.ದ್ವಾರಪಾಲಕರು ಈ ವಿಷಯವನ್ನು ಶ್ರೀರಾಮನಿಗೆ ತಿಳಿಸಿದಾಗ ಶ್ರೀರಾಮರು ನಾಯಿ ಇರುವ ಸ್ಥಳಕ್ಕೆ ಬರುತ್ತಾರೆ, ಆಗ ನಾಯಿ ಶ್ರೀರಾಮನಿಗೆ ನಾನು ಯಾವುದೇ ತಪ್ಪನ್ನು ಮಾಡಿಲ್ಲ ಹಾಗಿದ್ದರೂ ಒಬ್ಬ ಸನ್ಯಾಸಿ ನನ್ನ ಕಾಲಿಗೆ ಕಲ್ಲಿನಿಂದ ಹೊಡೆದಿದ್ದಾರೆ ಅದರಿಂದ ಕಾಲಿಗೆ ಪೆಟ್ಟಾಗಿ ತುಂಬಾ ನೋವಾಗುತ್ತಿದೆ ಎಂದು ಹೇಳುತ್ತದೆ.
ನಾಯಿಯ ಮಾತನ್ನು ಆಲಿಸಿದ ಶ್ರೀರಾಮರು ಸನ್ಯಾಸಿಯನ್ನು ಕರೆಸುತ್ತಾರೆ. ಸನ್ಯಾಸಿಯು ಶ್ರೀರಾಮರಿಗೆ ಈ ರೀತಿ ಹೇಳುತ್ತಾರೆ, ನಾನು ಭಿಕ್ಷೆಯನ್ನು ಬೇಡುತ್ತಿದ್ದಾಗ ಈ ನಾಯಿ ನನ್ನ ಅನ್ನವನ್ನು ಸ್ಪರ್ಶ ಮಾಡಿತ್ತು. ಆಗ ಮಧ್ಯಾಹ್ನ ವಾಗಿದ್ದರಿಂದ ತುಂಬಾ ಹಸಿವಾಗಿತ್ತು ಆ ಕ್ಷಣದಲ್ಲಿ ಈ ನಾಯಿ ಸ್ಪರ್ಶ ಮಾಡಿದ್ದರಿಂದ ಕೋಪ ಬಂದು ಹೊಡೆದೆ ಎಂದು ಹೇಳಿದರು. ಆಗ ಶ್ರೀರಾಮರು ನಾಯಿ ಹತ್ತಿರ ಸನ್ಯಾಸಿಯು ತಪ್ಪು ಮಾಡಿದ್ದಾರೆ ನೀನು ಯಾವ ಶಿಕ್ಷೆಯನ್ನು ಬೇಕಾದರೂ ಕೊಡಬಹುದು ಎಂದು ಹೇಳುತ್ತಾರೆ.ನಾಯಿಯು ಶ್ರೀ ರಾಮರಿಗೆ ಆ ಸನ್ಯಾಸಿಯನ್ನು ಯಾವುದಾದರೂ ಸೇವಾ ಮಂದಿರದ ಮಾಲೀಕನಾಗಿ ಮಾಡಿ ಎಂದು ಹೇಳುತ್ತದೆ. ನಂತರ ಶ್ರೀರಾಮರು ನಾಯಿಯ ಮಾತಿನ ಪ್ರಕಾರ ಸನ್ಯಾಸಿಯನ್ನು ಒಂದು ಸೇವಾ ಮಂದಿರದ ಮಾಲೀಕನಾಗಿ ಮಾಡುತ್ತಾರೆ. ಇದನ್ನು ಕಂಡ ಜನರು ನಿಮಗೆ ಸನ್ಯಾಸಿ ಹೊಡೆದಿದ್ದರು ಈ ರೀತಿಯ ವರ ದಾನವನ್ನು ಯಾಕೆ ಕೇಳಿದಿರಿ ಎಂದಾಗ ನಾಯಿಯು ಯಾರೂ ಬ್ರಾಹ್ಮಣರಿಗೆ ಕೊಡುವ ವಸ್ತುಗಳನ್ನು ಕಳವು ಮಾಡುತ್ತಾರೆ, ಕೆಟ್ಟ ದಾರಿಯಲ್ಲಿ ಹೋಗಿ ಧನ ಸಂಪತ್ತನ್ನು ಗಳಿಸುತ್ತಾರೆ ಈ ರೀತಿ ವ್ಯಕ್ತಿಗಳು ಸತ್ತು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತಾರೆ. ಆಗ ನಾಯಿಯು ಹಿಂದಿನ ಜನ್ಮದಲ್ಲಿ ನಾನು ಮಠದ ಋಷಿಯಾಗಿದ್ದೆ, ಆದರೆ ನಾನು ಮಾಡಿದ ಪಾಪ ಕರ್ಮಗಳಿಂದ ನನಗೆ ಈ ಜನ್ಮದಲ್ಲಿ ನಾಯಿಯ ರೂಪ ದೊರೆತಿದೆ. ಆದ್ದರಿಂದ ಹಿಂದಿನ ಜನ್ಮದಲ್ಲಿ ಮಾಡಿದ ಪಾಪದ ಕೆಲಸಗಳಿಗಾಗಿ ಪ್ರಾಯಶ್ಚಿತವಾಗಿ ಆ ಸನ್ಯಾಸಿಗೆ ಸೇವಾಮಂದಿರದ ಮಾಲೀಕನಾಗಿ ಪಶುಪಕ್ಷಿಗಳಿಗೆ ಹಾಗೂ ಕಡುಬಡವರಿಗೆ ಎಲ್ಲಾ ತರಹದ ದಾನವನ್ನು ಮಾಡಲಿ ಎಂದು ಇಚ್ಛೆ ಪಟ್ಟೆ ಎಂದು ಹೇಳುತ್ತದೆ.
ವಾರದ ಏಳು ದಿನ ಯಾವ ಯಾವ ಮಂತ್ರವನ್ನು ಜಪಿಸಬೇಕು ಎಂಬುದು ತಿಳಿದಿದೆಯೇ ನಿಮಗೆ ?
ಒಂದು ವೇಳೆ ಪ್ರತಿದಿನವೂ ನಾವು ಚೆನ್ನಾಗಿರಬೇಕು ಎಂದರೆ ಮೊದಲಿಗೆ ನಮ್ಮ ಮನಸ್ಸು ಸ್ವಚ್ಛವಾಗಿರಬೇಕು, ಶಾಂತಿಯಿಂದ ಇರಬೇಕು. ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಬೇಕೆಂದರೆ ದೈವಬಲ ಎಂಬುದು ನಮ್ಮ ಜೊತೆ ಇರಬೇಕು. ದೇವರನ್ನು 24 ಗಂಟೆಗಳ ಕಾಲ ಪೂಜಿಸಬೇಕು ಎಂಬುದು ಇಲ್ಲ, ಆದರೆ ಮುಂಜಾನೆ ಸ್ನಾನವನ್ನು ಮಾಡಿ ಕೆಲವು ಸಮಯ ದೇವರ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ಸಾಕು ಭಗವಂತನು ಸಂತುಷ್ಟನಾಗುತ್ತಾನೆ. ಹಾಗಾದರೆ ವಾರದ ಏಳು ದಿನ ಯಾವ ಯಾವ ಮಂತ್ರವನ್ನು ಜಪಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.
ಭಾನುವಾರ ಶಕ್ತಿದೇವತೆ ಹಾಗೂ ಸೂರ್ಯದೇವನ ದಿನ ಎಂದು ಕರೆಯಲಾಗುತ್ತದೆ. ಹಾಗಾಗಿ ಭಾನುವಾರದಂದು ದುರ್ಗಾದೇವಿಯನ್ನು ಸ್ಮರಿಸಿಕೊಂಡು ಓಂ ದುರ್ಗಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸುವುದರಿಂದ ದುರ್ಗಾದೇವಿಯ ಅನುಗ್ರಹಕ್ಕೆ ಪ್ರಾಪ್ತಿಯಾಗಬಹುದು. ಹಾಗೆಯೇ ಭಾನುವಾರದಂದು ಓಂ ಸೂರ್ಯದೇವಾಯ ನಮಃ ಎಂಬ ಮಂತ್ರವನ್ನು ಜಪಿಸುವುದು ಒಳ್ಳೆಯದು. ಸೂರ್ಯದೇವನ ಏಳು ಕುದುರೆಗಳು ವಾರದ ಏಳು ದಿನಗಳನ್ನು ಸೂಚಿಸುತ್ತದೆ.
ಸೋಮವಾರ ಶಿವನ ಆರಾಧನೆಯ ದಿನವಾಗಿದೆ ಹಾಗಾಗಿ ಶಿವನ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಜಪಿಸುವುದರಿಂದ ಕಷ್ಟಗಳೆಲ್ಲ ಕರಗಿ ಹೋಗುತ್ತದೆ. ಯಾವ ವ್ಯಕ್ತಿಯು ಈ ಮಂತ್ರವನ್ನು ಪ್ರತಿನಿತ್ಯ ಜಪಿಸುತ್ತಾನೋ ಅವನಿಗೆ ಕಷ್ಟಗಳು ಹತ್ತಿರವೂ ಸುಳಿಯುವುದಿಲ್ಲ. ಶಿವನ ಈ ಮಂತ್ರವು 5 ಅಕ್ಷರಗಳಿಂದ ಕೂಡಿದೆ. ಈ 5 ಅಕ್ಷರವೂ ಭೂಮಿ,ನೀರು, ಬೆಂಕಿ, ಗಾಳಿ ಹಾಗೂ ಆಕಾಶವನ್ನು ಸೂಚಿಸುತ್ತದೆ ಮತ್ತು ಇವುಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ.
ಮಂಗಳವಾರ ಆಂಜನೇಯಸ್ವಾಮಿಗೆ ಅರ್ಪಿತವಾದ ದಿನವಾಗಿದೆ. ಮಂಗಳವಾರದಂದು ಓಂ ಶ್ರೀ ಹನುಮತೇ ನಮಃ ಹಾಗೂ ಹನುಮನ್ ಗಾಯತ್ರಿ ಮಂತ್ರವನ್ನು ಯಾರು ಜಪಿಸುತ್ತಾರೋ ಅವರೇ ಪುಣ್ಯವಂತರು ಹಾಗೂ ಅವರು ಮಾಡುವ ಕೆಲಸಕಾರ್ಯಗಳಲ್ಲಿ ಯಶಸ್ಸು ಎಂಬುದು ಕಟ್ಟಿಟ್ಟ ಬುತ್ತಿ.
ಬುದುವಾರ ವಿಘ್ನವಿನಾಶಕ ಗಣೇಶನನ್ನು ನೆನೆಯುವ ದಿನ. ಓಂ ಶ್ರೀ ಗಣೇಶಾಯ ನಮಃ ಎಂಬ ಮಂತ್ರವನ್ನು ಹೇಳಿಕೊಂಡು ಭಗವಂತನನ್ನು ಪೂಜಿಸಬೇಕು. ಯಾರ ಮನೆಯಲ್ಲಿ ಪ್ರತಿನಿತ್ಯ ಈ ಮಂತ್ರವನ್ನು ಜಪಿಸುತ್ತಾರೋ ಅಂತವರು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ಜೀವನವನ್ನು ನಡೆಸಬಹುದು.
ಗುರುವಾರ ಮಹಾವಿಷ್ಣು, ರಾಘವೇಂದ್ರ ಸ್ವಾಮಿಯ ಹಾಗೂ ಸಾಯಿಬಾಬಾ ದೇವರ ಪೂಜಿಸುವ ದಿನ. ಮಹಾವಿಷ್ಣುವನ್ನು ಸ್ಮರಿಸಿಕೊಂಡು ಓಂ ನಮೋ ನಾರಾಯಣಾಯ ನಮಃ ಮಂತ್ರ ಹೇಳಬೇಕು. ಗುರುರಾಯರನ್ನು ನೆನಪಿಸಿಕೊಂಡು ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಮಂತ್ರವನ್ನು ಹೇಳಬೇಕು. ಸಾಯಿಬಾಬಾರನ್ನು ನೆನಪಿಸಿಕೊಂಡು ಶಾಂತಚಿತ್ತ ಮಹಾ ಪ್ರಜ್ಞೆ ಸಾಯಿನಾಥ ದಯಾ ಧನ ದಯಾಸಿಂಧು ಸತ್ಯ ಸ್ವರೂಪ ಮಾಯಾತಮವಿನಾಶನ ಎಂಬ ಶ್ಲೋಕವನ್ನು ಸ್ಮರಣೆ ಮಾಡಬೇಕು.
ಶುಕ್ರವಾರ ಮಹಾಲಕ್ಷ್ಮಿಯ ದಿನ. ಓಂ ಶ್ರೀ ಮಹಾಲಕ್ಷ್ಮಿಚ ವಿದ್ಮಹೆ ವಿಷ್ಣು ಪತ್ನೈಚ ಧೀಮಹಿ ತನ್ನೋ ಲಕ್ಷ್ಮಿ ಪ್ರಚೋದಯಾತ್ ಎಂಬ ಮಂತ್ರವನ್ನು ಹೇಳುವುದರಿಂದ ಮನಸ್ಸು ಹಾಗೂ ಮನೆಯೂ ಬೆಳಗುತ್ತದೆ.
ಶನಿವಾರ ಶನಿದೇವರಿಗೆ ಅರ್ಪಿತವಾದ ದಿನ. ಹಂ ಹನುಮತೇ ರುದ್ರಾತ್ಮಕಾಯ ಹುಂ ಘಟ್ ಓಂ ಶನಿದೇವಾಯ ನಮಃ ಓಂ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ಎಂಬ ಮಂತ್ರವನ್ನು ಜಪಿಸುವುದರಿಂದ ಶನೇಶ್ವರ ಹಾಗೂ ಆಂಜನೇಯನ ಕೃಪಾಕಟಾಕ್ಷವೂ ಲಭಿಸುತ್ತದೆ.
ದೇವರ ಪೂಜೆಯನ್ನು ಹೇಗೆ ಮಾಡಬೇಕೆಂದು ತಿಳಿದಿದೆಯೇ ನಿಮಗೆ ?
ಕೆಲವೊಂದು ಅಪಾರ್ಟ್ಮೆಂಟ್ ಮನೆಗಳಲ್ಲಿ ದೇವರನ್ನ ಪೂಜಿಸುವುದಕ್ಕೆ ಎಂದು ಪ್ರತ್ಯೇಕವಾದ ಕೊಠಡಿ ಇರುವುದಿಲ್ಲ, ಇನ್ನು ಕೆಲವರ ಮನೆಯಲ್ಲಿ ದೇವರ ಕೋಣೆಯನ್ನು ಪ್ರತ್ಯೇಕವಾಗಿ ಕಟ್ಟುವುದಕ್ಕೆ ಜಾಗವಿರುವುದಿಲ್ಲ ಎಂದರೆ ಆಗ ಆ ಮನೆಯಲ್ಲಿ ವಾಸಿಸುವುದು ಎಷ್ಟು ಯೋಗ್ಯ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಮೊಟ್ಟಮೊದಲಿಗೆ ಹೊಸದಾಗಿ ಮನೆಯನ್ನು ಕಟ್ಟುವುದಾದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟಲೇಬೇಕು. ಮನೆಗೆ ಯಜಮಾನನು ಕಷ್ಟಪಟ್ಟು ದುಡಿಯುವ ಗಂಡನಲ್ಲ, ಮನೆಗೆ ಯಜಮಾನನು ಕುಲದೇವರು ಅಥವಾ ಮನೆದೇವರು. ಯಾವಾಗ ಮನೆದೇವರು ತೃಪ್ತಿಯಿಂದ ಇರುತ್ತಾರೆ ಆಗ ಮಾತ್ರ ಯಜಮಾನನು ತೃಪ್ತಿಯಿಂದ ಜೀವನವನ್ನು ನಡೆಸಬಹುದು. ಆದ್ದರಿಂದ ಸ್ವಂತ ಮನೆಯನ್ನು ಕಟ್ಟುತ್ತಿದ್ದರೆ ಪ್ರತ್ಯೇಕವಾಗಿ ದೇವರ ಕೋಣೆಯನ್ನು ಕಟ್ಟುವುದು ಅತಿಮುಖ್ಯ.
ಒಂದು ವೇಳೆ ಯಾರಾದರೂ ಬಾಡಿಗೆ ಮನೆಯಲ್ಲಿದ್ದು ಅಲ್ಲಿ ದೇವರ ಮನೆಯು ಇಲ್ಲವೆಂದರೆ ಪ್ಲೇವುಡ್ನಲ್ಲಿ ಮಾಡಿಸಿ ಯಾವುದೋ ಒಂದು ಗೋಡೆ ಮೇಲೆ ನೇತು ಹಾಕಬೇಡಿ ಅದರ ಬದಲು ಕೆಳಗಿನ ಹಂತದಿಂದ ಬರುವಹಾಗೆ ದೇವರನ್ನು ಪೂಜಿಸಬೇಕು. ಯಾವತ್ತೂ ಕೂಡ ಪೂಜೆಯನ್ನು ನಿಂತುಕೊಂಡು ಮಾಡಬಾರದು. ಕೇವಲ ಮಂಗಳಾರತಿ, ಪ್ರದಕ್ಷಿಣೆ, ನಮಸ್ಕಾರ ಹಾಗೂ ಪ್ರಾರ್ಥನೆಯ ಸಮಯದಲ್ಲಿ ಮಾತ್ರ ನಿಂತುಕೊಳ್ಳಬೇಕು. ಪೂಜೆಯನ್ನು ಯಾವಾಗಲೂ ಕುಳಿತುಕೊಂಡು ನಿಧಾನವಾಗಿ, ನಿಸ್ಸಂದೇಹವಾಗಿ, ಸಂತೃಪ್ತಿಯಿಂದ, ಭಕ್ತಿಯಿಂದ ದೇವರ ಪೂಜೆಯನ್ನು ಮಾಡಬೇಕು.
ಯಾವ ರೀತಿ ಮನುಷ್ಯನಿಗೆ ಏಕಾಂತ ಬೇಕೋ ಅದೇ ರೀತಿ ದೇವರನ್ನು ಪೂಜೆ ಮಾಡುವುದಕ್ಕೂ ಒಂದು ಪ್ರತ್ಯೇಕವಾದ ಸ್ಥಳವಿರಬೇಕು. ಹಾಗಾಗಿ ಪ್ರತ್ಯೇಕವಾದ ದೇವರ ಕೊಠಡಿಯನ್ನು ಕಟ್ಟಿ ಅಲ್ಲಿ ಕುಲದೇವರು ಅಥವಾ ಮನೆ ದೇವರನ್ನು ಪೂಜೆ ಮಾಡುವುದರಿಂದ ಜೀವನದಲ್ಲಿ ಏಳಿಗೆಯನ್ನು ಕಾಣಬಹುದು.
ಈ ಒಂದು ವಸ್ತುವನ್ನು ದಾನವಾಗಿ ನೀಡುವುದರಿಂದ ಶನಿಕಾಟ ಕಡಿಮೆಯಾಗುತ್ತಾ ಬರುತ್ತದೆ.
ಪ್ರತಿಯೊಬ್ಬ ಮನುಷ್ಯನಿಗೂ ಐಷಾರಾಮಿ ಜೀವನವನ್ನು ನಡೆಸಬೇಕೆಂಬ ಆಸೆ ಇರುತ್ತದೆ. ಆದರೆ ನಾವು ಮಾಡುವ ಪಾಪ-ಪುಣ್ಯದ ಕೆಲಸಗಳನ್ನು ಬರೆದಿಡುವುದು ಶನಿಮಹಾತ್ಮ. ನಾವು ಮಾಡಿದ ಕೆಲಸಗಳ ಅನುಸಾರವಾಗಿ ಶನಿ ದೇವರು ಪ್ರತಿಯೊಂದು ಸಮಯದಲ್ಲಿ ಯಾರಿಗೆ ಏನು ಲಭಿಸಬೇಕು ಎಂಬುದನ್ನು ತಿಳಿದುಕೊಂಡು ಆ ವ್ಯಕ್ತಿಗೆ ಕಷ್ಟವನ್ನು ಆಗಲಿ ಅಥವಾ ಸುಖವನ್ನು ಆಗಲಿ ನೀಡುತ್ತಿರುತ್ತಾರೆ. ಆದರೆ ಕೆಲವರು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರು ಅವರಿಗೆ ಯಶಸ್ಸು ದೊರೆಯುತ್ತಿರುವುದಿಲ್ಲ ಹಾಗೂ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿರುತ್ತದೆ ಇದಕ್ಕೆಲ್ಲ ಕಾರಣವೇನೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ ಕರ್ಮಗಳು ಈ ಜನ್ಮದಲ್ಲಿ ಅವರಿಗೆ ಕಷ್ಟ ಪಡುವಂತೆ ಮಾಡಿರುತ್ತದೆ.
ನವಗ್ರಹದಲ್ಲಿ ಶನಿಮಹಾತ್ಮನಿಗೆ ಅಧಿಪತಿ ಯಾಗಿರುವುದು ಎಳ್ಳು. ಹಾಗಾಗಿ ಎಳ್ಳನ್ನು ದಾನವಾಗಿ ಕೊಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ಬ್ರಾಹ್ಮಣರಿಗೆ ಶನಿವಾರದ ದಿನದಂದು ಎಲೆ,ಅಡಿಕೆ, ಬಾಳೆ ಹಣ್ಣು ಹಾಗೂ ಎಳ್ಳನ್ನು ದಾನ ಕೊಡುವ ಸಮಯದಲ್ಲಿ ನಾಣ್ಯವನ್ನು ಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ.
ಒಂದು ವೇಳೆ ನಿಮಗೆ ಮೇಲೆ ಹೇಳಿರುವ ಪದಾರ್ಥಗಳಿಂದ ಬ್ರಾಹ್ಮಣರಿಗೆ ದಾನವನ್ನು ಕೊಡುವುದಕ್ಕೆ ಸಾಧ್ಯವಾಗದಿದ್ದರೆ ಶನಿವಾರದಂದು ಕಪ್ಪು ಬಟ್ಟೆಯಲ್ಲಿ ಕಪ್ಪು ಎಳ್ಳನ್ನು ನಿಮ್ಮ ಕೈಯಿಂದ ತೆಗೆದುಕೊಂಡು ಹೋಗಿ ಹರಿಯುವ ನೀರಿಗೆ ಬಿಟ್ಟರೆ ಬಹಳ ಒಳ್ಳೆಯದಾಗುತ್ತದೆ. ಆದ್ದರಿಂದ ಶನಿ ದೋಷವಿದ್ದವರು ಮೇಲೆ ತಿಳಿಸಲಾಗಿರುವ ಯಾವುದಾದರೂ ಒಂದು ದಾನವನ್ನು ಮಾಡುವುದರಿಂದ ಶನಿ ದೋಷವು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.
ನವಗ್ರಹಗಳ ದೋಷ ನಿವಾರಣೆಗೆ ಈ ಉಪಾಯವನ್ನು ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ
ಪ್ರತಿಯೊಬ್ಬರಿಗೂ ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಉನ್ನತಿಯನ್ನು ಪಡೆದುಕೊಳ್ಳಬೇಕು ಹಾಗೂ ಜೀವನದಲ್ಲಿ ಏಳಿಗೆಯನ್ನು ಸಾಧಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ಒಂದು ವೇಳೆ ನವಗ್ರಹಗಳ ಸಹಾಯವು ಇದ್ದರೆ ನಾವು ಮಾಡುವ ಕೆಲಸ ಕಾರ್ಯಗಳಲ್ಲಿ ಅಖಂಡ ಯಶಸ್ಸನ್ನು ಕಾಣಬಹುದು.
ನವರತ್ನದ ಉಂಗುರವನ್ನು ಹಾಕಿಕೊಂಡರೆ ನವಗ್ರಹಗಳ ಬೆಂಬಲವೂ ದೊರೆಯುತ್ತದೆ. ಆದರೆ ಕೆಲವೊಂದು ರಾಶಿಯವರಿಗೆ ಈ ಉಂಗುರವು ಸರಿ ಬರುವುದಿಲ್ಲ. ಕೆಲವರು ನವರತ್ನದ ಉಂಗುರವನ್ನು ಚಿನ್ನದಿಂದ ಮಾಡಿಸಿಕೊಳ್ಳುತ್ತಾರೆ ಇನ್ನೂ ಕೆಲವರು ಅವರ ಶಕ್ತಿಯನುಸಾರ ಯಾವುದರಲ್ಲಿ ಆಗುತ್ತದೆಯೋ ಅದರಲ್ಲಿ ಮಾಡಿಸಿಕೊಳ್ಳುತ್ತಾರೆ.
ನವಗ್ರಹಗಳ ದೋಷ ನಿವಾರಣೆಗೆ ಮಣ್ಣಿನಿಂದ ಮಾಡಿದ ಮಡಕೆಯನ್ನು ತೆಗೆದುಕೊಂಡು ಅದರಲ್ಲಿ ನವಗ್ರಹಗಳ ಧಾನ್ಯವನ್ನು ಹಾಕಿಕೊಳ್ಳಬೇಕು.ಸೂರ್ಯ ಗ್ರಹಕ್ಕೆ ಗೋಧಿಯನ್ನು, ಚಂದ್ರಗ್ರಹಕ್ಕೆ ಅಕ್ಕಿಯನ್ನು, ಕುಜನಿಗೆ ತೊಗರಿಬೇಳೆ, ಬುದನಿಗೆ ಹೆಸರುಕಾಳು, ಗುರುವಿಗೆ ಕಡಲೆಕಾಳು, ಶುಕ್ರನಿಗೆ ಅವರೆಕಾಳು, ಶನಿ ಗ್ರಹಕ್ಕೆ ಎಳ್ಳು, ರಾಹುವಿಗೆ ಉದ್ದಿನ ಕಾಳು, ಕೇತುವಿಗೆ ಹುರುಳಿಕಾಳನ್ನು ಇಡಲಾಗುತ್ತದೆ. ಈ ರೀತಿಯಾಗಿ 9 ದಾನ್ಯಗಳನ್ನು ಹಾಗೂ ನವ ತೈಲವನ್ನು ಅಥವಾ ಎಳ್ಳೆಣ್ಣೆಯನ್ನು ಅಥವಾ ಹಸುವಿನ ತುಪ್ಪ ವನ್ನು ಮಣ್ಣಿನಿಂದ ಮಾಡಿದ ಮಡಿಕೆಯಲ್ಲಿ ಹಾಕಬೇಕು.
ನಂತರ ಮಣ್ಣಿನ ಮಡಕೆ ಒಳಗೆ ನವ ಬತ್ತಿಯನ್ನು ಹಾಕಿ ನಿಮ್ಮ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ನವಗ್ರಹದ ಮುಂದೆ ಸೂರ್ಯ ಉದಯಿಸುವ ದಿಕ್ಕಿನಲ್ಲಿ ದೀಪಾರಾಧನೆಯನ್ನು ಮಾಡಬೇಕು. ಶಕ್ತಿ ಅನುಸಾರ ದೇವರಿಗೆ ನೈವೇದ್ಯವನ್ನು ಇಡಬೇಕು. ದೀಪಾರಾಧನ ಮಾಡಬೇಕಾದರೆ ಓಂ ಭಗವತೇ ಗ್ರಹಾದಿಪತಿಯೇ ಸೂರ್ಯಗ್ರಹಾಯೇ ನಮಃ ಎಂಬ ಮಂತ್ರವನ್ನು ಪಠಿಸಿದರೆ ತುಂಬಾ ಒಳ್ಳೆಯದು.
ಗೋಮತಿ ಚಕ್ರವನ್ನು ಕೊರಳಿನಲ್ಲಿ ಧರಿಸಿದರೆ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಪ್ರತಿಯೊಬ್ಬರಿಗೂ ತಾವು ಮಾಡುವ ಉದ್ಯೋಗದಲ್ಲಿ ಉನ್ನತಿಯನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇರುತ್ತದೆ.ಇನ್ನು ಕೆಲವರಿಗೆ ಎಷ್ಟು ವರ್ಷದಿಂದ ಕಷ್ಟ ಪಟ್ಟು ದುಡಿದರು ಬಡ್ತಿಯನ್ನು ಪಡೆದುಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದು ಕೊರಗುತ್ತಿರುತ್ತಾರೆ. ಗೋಮತಿ ಚಕ್ರದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣಬಹುದು. ಒಟ್ಟಾರೆಯಾಗಿ ಗೋಮತಿ ಚಕ್ರದಿಂದ ನಾವು ಮಾಡುವ ಕೆಲಸದಲ್ಲಿ ಉನ್ನತಿಯನ್ನು ಹಾಗೂ ಯಶಸ್ಸನ್ನು ಕಾಣಬಹುದು.
ಶುಕ್ರವಾರ ದಿನ ಲಕ್ಷ್ಮಿಯ ಅನುಗ್ರಹವಿರುವುದರಿಂದ ಗೋಮತಿ ಚಕ್ರವನ್ನು ಶುಕ್ರವಾರದ ದಿನದಂದು ಖರೀದಿ ಮಾಡಿ ಮನೆಗೆ ತರಬೇಕು. ಗೋಮತಿ ಚಕ್ರವನ್ನು ತಂದ ನಂತರ ಶುದ್ಧವಾದ ನೀರಿನಿಂದ ತೊಳೆದು ಪ್ರತಿನಿತ್ಯ ದೇವರಿಗೆ ಹೇಗೆ ಪೂಜೆ ಮಾಡುತ್ತೇವೆ ಹಾಗೆ ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕು. ಒಂದರ ಮೇಲಂತೆ ಒಂದು ಹೀಗೆ ಮೂರು ಗೋಮತಿ ಚಕ್ರವನ್ನು ಇಟ್ಟು ಪೂಜೆ ಮಾಡಿ ನಂತರ ಕೊರಳಿಗೆ ಹಾಕಿಕೊಳ್ಳಬೇಕು. ಒಂದು ವೇಳೆ ಕೊರಳಲ್ಲಿ ಹಾಕಿಕೊಳ್ಳಲು ಸಾಧ್ಯವಾಗದಿದ್ದರೆ ಪರ್ಸ್ ಅಲ್ಲೂ ಕೂಡ ಇಟ್ಟುಕೊಳ್ಳಬಹುದು.
ಗೋಮತಿ ಚಕ್ರವನ್ನು ಹಾಕಿಕೊಳ್ಳುವುದಕ್ಕೆ ಮುಂಚೆ ಬುದ್ದಿಮಾಂದ್ಯ ಮಕ್ಕಳಿಗೆ ಅಥವಾ ನೆನಪಿನ ಶಕ್ತಿ ಕಮ್ಮಿ ಇರುವಂತಹ ಮಕ್ಕಳಿಗೆ ಹಾಲನ್ನು ಅಥವಾ ಹಾಲಿನಿಂದ ಮಾಡಿದ ಪದಾರ್ಥವನ್ನು ಅಥವಾ ಅನ್ನವನ್ನು ದಾನದ ರೂಪದಲ್ಲಿ ಕೊಟ್ಟರೆ ತುಂಬಾ ಒಳ್ಳೆಯದು. ಮಾಂಸಾಹಾರ ಸೇವನೆ ಮಾಡುವವರು ಮಾಂಸಾಹಾರವನ್ನು ತಿನ್ನುವ ದಿನ ಗೋಮತಿ ಚಕ್ರವನ್ನು ಕೊರಳಿನಿಂದ ತೆಗೆದು ಒಂದು ಕಡೆ ಇಟ್ಟು ನಂತರ ಮಾಂಸ ಆಹಾರ ಸೇವನೆ ಮಾಡಬೇಕು. ಅದೇ ರೀತಿ ರಾತ್ರಿ ಮಲಗುವ ಮುನ್ನ ಗೋಮತಿ ಚಕ್ರವನ್ನು ತೆಗೆದು ಇಟ್ಟು ಮರುದಿನ ಸ್ನಾನವನ್ನು ಮಾಡಿ ಪೂಜೆಯನ್ನು ಮಾಡಿ ನಂತರ ಗೋಮತಿ ಚಕ್ರವನ್ನು ಕೊರಳಿನಲ್ಲಿ ಧರಿಸಿಕೊಳ್ಳಬೇಕು.
ಗೋಮತಿ ಚಕ್ರವನ್ನು ಧರಿಸುವುದರಿಂದ ಲಕ್ಷ್ಮೀದೇವಿಯ ಕೃಪೆಯು ನಮ್ಮ ಮೇಲಿರಲಿದ್ದು ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಾಯಕವಾಗುತ್ತದೆ ಎಂದರೆ ತಪ್ಪಾಗಲಾರದು. ಇದರಿಂದ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ ಹಾಗೂ ಉದ್ಯೋಗದಲ್ಲಿ ಉನ್ನತಿಯನ್ನು ಪಡೆದುಕೊಳ್ಳುತ್ತಾರೆ.
ಆತ್ಮಗಳು ಎಲ್ಲಿ ವಾಸವಾಗಿರುತ್ತದೆ ಹಾಗೂ ಯಾರಿಗೆ ತೊಂದರೆ ಕೊಡುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಕೆಲವೊಬ್ಬರು ಸ್ಮಶಾನಕ್ಕೆ ಹೋಗುವುದಕ್ಕೆ ಹೆದರುತ್ತಾರೆ ಹಾಗೂ ಸತ್ತ ಹೆಣವನ್ನು ನೋಡುವುದಕ್ಕೂ ಭಯಪಡುತ್ತಾರೆ, ಮತ್ತೆ ಇನ್ನು ಕೆಲವರಿಗೆ ಸತ್ತವರನ್ನು ಕೊನೆಯ ಬಾರಿ ಕಣ್ತುಂಬ ನೋಡಿಕೊಳ್ಳಬೇಕು ಹಾಗೂ ಅವಕಾಶ ಸಿಕ್ಕರೆ ಅವರ ಕಾರ್ಯಗಳನ್ನು ಮಾಡಬೇಕು ಎಂಬ ಆಸೆ ಇರುತ್ತದೆ. ಈ ರೀತಿಯ ಗುಣವನ್ನು ಹೊಂದಿರುವ ವ್ಯಕ್ತಿಯು ದೈವಾಂಶವನ್ನು ಹೊಂದಿರುತ್ತಾನೆ ಹಾಗೂ ಶಿವ ಗಣದಲ್ಲಿ ಇರುವಂತಹ ಒಂದು ಗಣ ಆ ವ್ಯಕ್ತಿಯಲ್ಲಿ ಇರುತ್ತದೆ.
ಸ್ಮಶಾನದ ಒಳಭಾಗದಲ್ಲಿ ಯಾವುದೇ ಆತ್ಮವು ವಾಸವಾಗಿ ಇರುವುದಿಲ್ಲ. ಸ್ಮಶಾನದ ಒಳಗಡೆ ಶಿವನ ತತ್ವ ಹಾಗೂ ಶಿವಗಣಗಳು ಇರುತ್ತವೆ. ಶಿವನ ಸ್ವರೂಪವಾಗಿರುವ ಕಾಲಭೈರವ, ಮಹಾಮುನಿಗಳು, ಮಹಾಋಷಿಗಳು ಹಾಗೂ ಶಿವನಿರುವ ಸ್ಥಳವಾಗಿರುವುದರಿಂದ ಅಮಾವಾಸ್ಯೆ ದಿನ ಮಾತ್ರ ಕಾಳಿಯು ಸ್ಮಶಾನ ಪ್ರವೇಶ ಮಾಡುತ್ತಾಳೆ. ಆತ್ಮಗಳು ಎಂದಿಗೂ ಸ್ಮಶಾನದ ಒಳಗಡೆ ವಾಸ ಮಾಡುವುದಿಲ್ಲ.
ಆತ್ಮಗಳು ಸ್ಮಶಾನದಿಂದ ಹೊರಗಡೆ ಜನರ ಅಕ್ಕಪಕ್ಕದಲ್ಲೇ ಇರುತ್ತದೆ. ಆತ್ಮಗಳು ವಾಸಮಾಡುವುದು ಮನೆಯಲ್ಲಿ, ಮನೆಯ ಮೆಟ್ಟಿಲಿನ ಕೆಳಗಡೆ, ಉಪಯೋಗ ಮಾಡದಂತಹ ಜಾಗದಲ್ಲಿ, ಹಳೆಯ ಕಟ್ಟಡವಾಗಿ ನಿಂತಿರುವ ಮನೆಗಳಲ್ಲಿ, ತುಂಬಾ ಇಷ್ಟವಾದ ಮರಗಳಲ್ಲಿ ಹಾಗೂ ಮರದ ಪೊಟರೆಗಳಲ್ಲಿ ವಾಸವಾಗಿರುತ್ತದೆ. ಹಸು, ಎಮ್ಮೆಯನ್ನು ಕಟ್ಟುವ ಜಾಗವಾದ ಕೊಠಕೆಯಲ್ಲಿ, ಮನೆಯ ಅಟ್ಟದ ಮೇಲೆ ಈ ರೀತಿ ಗೌಪ್ಯವಾದ ಸ್ಥಳದಲ್ಲಿ ಮನುಷ್ಯರನ್ನು ನೋಡಿ ಹೆದರಿ ವಾಸವಾಗಿರುತ್ತವೆ. ಈ ರೀತಿಯಾದ ಆತ್ಮಗಳು ಮನುಷ್ಯನಿಗೆ ಯಾವ ತೊಂದರೆಯನ್ನು ಕೊಡುವುದಿಲ್ಲ.
ಕೆಲವೊಂದು ಆತ್ಮಗಳು ಕೆಲವರಿಗೆ ಉದ್ದೇಶಪೂರ್ವಕವಾಗಿಯೇ ತೊಂದರೆಯನ್ನು ಕೊಡಬೇಕೆಂದು ಬಂದಿರುತ್ತದೆ ಹಾಗೂ ಆ ಸಂದರ್ಭದಲ್ಲಿ ಆ ವ್ಯಕ್ತಿಗೆ ಆತ್ಮ ಗಳಿಂದ ತೊಂದರೆಯುಂಟಾಗುತ್ತದೆ. ಹಾಗಾಗಿ ಆತ್ಮಗಳು ನಮ್ಮ ಜೊತೆಯೇ ಇರುವಂಥವವು ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಹಾಗೂ ಆತ್ಮಗಳು ಸ್ಮಶಾನದ ಒಳಗಡೆ ಎಂದೂ ವಾಸವನ್ನು ಮಾಡುವುದಿಲ್ಲ ಏಕೆಂದರೆ ಅದು ಶಿವನ ವಾಸಸ್ಥಾನ ವಾಗಿರುವುದರಿಂದ ಸ್ಮಶಾನದಿಂದ ಹೊರಗಡೆ ಆತ್ಮಗಳು ವಾಸವಾಗಿರುತ್ತವೆ.
ಈ ಸಮಸ್ಯೆಯಿಂದ ಹೊರಬರಬೇಕೆಂದರೆ ಪ್ರೇತ ಉಚ್ಚಾಟನೆ ಮಂತ್ರವನ್ನು ಹಾಕಿಕೊಳ್ಳಬೇಕು ಹಾಗೂ ಮನೆದೇವರು ಅಥವಾ ಕುಲದೇವರ ಮೇಲೆ ನಂಬಿಕೆಯನ್ನು ಇಟ್ಟು ಪೂಜೆ ಮಾಡಬೇಕು. ಶುಕ್ರವಾರದ ದಿನದಂದು ಮನೆಯಲ್ಲಿ ಧೂಪವನ್ನು ಹೆಚ್ಚಾಗಿ ಹಚ್ಚಬೇಕು.