Kannada Astrology

Category: ಜ್ಯೋತಿಷ್ಯ

  • ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ.

    ಶತ್ರು ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಲು ಬುಧವಾರದ ದಿನ ಈ ಸುಲಭ ಪರಿಹಾರವನ್ನು ಮಾಡಿ..ಯಾವ ವ್ಯಕ್ತಿಗೆ ಶತ್ರುವಿನಿಂದ ಸಾಕಷ್ಟು ತೊಂದರೆಯು ಇರುತ್ತದೆಯೋ ಮತ್ತು ಕೆಲಸ ಮಾಡುವ ಜಾಗದಲ್ಲಿ ಶತ್ರುವಿನ ಕಾಟ ಜಾಸ್ತಿಯಾಗಿ ಸಾಕಪ್ಪ ಸಾಕು ಎಂದೆನಿಸಿದರೆ ಅಥವಾ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ಏಳಿಗೆ ಆಗುವುದನ್ನು ಸಹಿಸಲಾಗದೆ ಕೆಲವರ ಕೆಟ್ಟದೃಷ್ಟಿ ಬೀಳುತ್ತಿದ್ದರೆ ಅಂಥವರು ಈ ಸುಲಭ ಪರಿಹಾರವನ್ನು ಮಾಡುವುದರಿಂದ ಶತ್ರು ಕಾಟ ದೂರವಾಗಿ ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. ಹಾಗಾದರೆ ಶತ್ರುವಿನ ಕಾಟದಿಂದ ವಿಮುಕ್ತಿಯನ್ನು ಯಾವ ರೀತಿ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲಿಗೆ ಲೋಳೆರಸದ ಗಿಡದ ಎಲೆಯನ್ನು ತೆಗೆದುಕೊಳ್ಳಬೇಕು ನಂತರ ಎಕ್ಕದ ಗಿಡದ ಬೇರನ್ನು ತೆಗೆದುಕೊಳ್ಳಬೇಕು ಹಾಗೆಯೇ ವೀಳ್ಯದೆಲೆಯನ್ನು ಸಹ ತೆಗೆದುಕೊಳ್ಳಬೇಕು. ಈ ಪರಿಹಾರವನ್ನು ಬುಧವಾರ ಅಥವಾ ಶನಿವಾರದ ದಿನದಂದು ಮನೆಯಲ್ಲಿ ಮಾಡಬೇಕು. ಬುಧವಾರ ಸಾಯಂಕಾಲ ನಿಮ್ಮ ಮನೆಯಲ್ಲಿರುವ ಆಂಜನೇಯಸ್ವಾಮಿಯ ಚಿತ್ರಪಟದ ಮುಂದೆ ಲೋಳೆರಸದ ಗಿಡದ ಎಲೆ, ಒಂದು ಎಕ್ಕದ ಗಿಡದ ಬೇರು ಹಾಗೂ ವೀಳ್ಯದೆಲೆಯನ್ನು ಇಟ್ಟು ಪೂಜೆಯನ್ನು ಮಾಡಬೇಕು.

    ವೀಳ್ಯದೆಲೆಯ ಮೇಲೆ ನಿಮಗೆ ಆಗದೆ ಇರುವ ಅಥವಾ ನಿಮ್ಮ ಶತ್ರುವಿನ ಹೆಸರನ್ನು ಬರೆಯಬೇಕು.ಶತ್ರುವಿನ ಹೆಸರನ್ನು ಬರೆದನಂತರ ಲೋಳೆರಸದ ಗಿಡದ ಎಲೆ,ಎಕ್ಕದ ಗಿಡದ ಬೇರು ಹಾಗೂ ವೀಳ್ಯೆದೆಲೆಯನ್ನು ಕೆಂಪು ದಾರದಿಂದ ಕಟ್ಟಬೇಕು. ಕೆಂಪು ದಾರದಿಂದ ಕಟ್ಟಿದ ನಂತರ ಪೂಜೆಯನ್ನು ಮಾಡಬೇಕು. ಮರುದಿನ ಬೆಳಿಗ್ಗೆ ಕೆಂಪು ದಾರದಿಂದ ಕಟ್ಟಿದ ಗಂಟನ್ನು ತೆಗೆದುಕೊಂಡು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಮೂರು ದಿನಗಳ ಕಾಲ ಇಡಬೇಕು.

    ಮೂರು ದಿನಗಳು ಕಳೆದ ನಂತರ ಕೆಂಪು ದಾರದಿಂದ ಕಟ್ಟಿದ್ದ ಲೋಳೆರಸದ ಗಿಡದ ಎಲೆ, ಒಂದು ಎಕ್ಕದ ಗಿಡದ ಬೇರು ಹಾಗೂ ವೀಳ್ಯದೆಲೆಯನ್ನು ಹರಿಯುವ ನೀರಿನಲ್ಲಿ ಬಿಟ್ಟು ಬರಬೇಕು. ಈ ರೀತಿ ಮಾಡುವುದರಿಂದ ಆಂಜನೇಯಸ್ವಾಮಿಯ ಪ್ರಭಾವದಿಂದ ಶತ್ರುವಿನ ಕಾಟದಿಂದ ಮುಕ್ತಿ ದೊರೆತು ಜೀವನದಲ್ಲಿ ಸುಖ ಶಾಂತಿ ಹಾಗೂ ನೆಮ್ಮದಿಯಿಂದ ಇರಬಹುದು.

  • ಈ ಲಕ್ಷಣಗಳು ಕಂಡು ಬಂದರೆ ದೃಷ್ಟಿ ದೋಷ ಆಗಿದೆ ಎಂಬುದನ್ನು ಸೂಚಿಸುತ್ತದೆ.

    ಹೆಣ್ಣುಮಕ್ಕಳು ಯಾವುದಾದರೂ ಕಾರ್ಯಕ್ರಮಕ್ಕೆ ಅಥವಾ ಸಮಾರಂಭಕ್ಕೆ ಹೋಗಬೇಕಾದರೆ ಒಡವೆಗಳನ್ನು ಹಾಕಿಕೊಂಡು ಶೃಂಗಾರ ಮಾಡಿಕೊಂಡು ಹೋಗುತ್ತಾರೆ. ಆದರೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಉದ್ಭವವಾಗುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಕೆಲವೊಂದು ಬಾರಿ ಈ ರೀತಿ ಶೃಂಗಾರ ಮಾಡಿಕೊಂಡು ಹೋದಾಗ ಬೇರೆಯವರ ಕೆಟ್ಟದೃಷ್ಟಿ ಬೀಳುತ್ತದೆ ಮತ್ತು ಇದರಿಂದ ದೃಷ್ಟಿ ದೋಷ ಆಗುತ್ತದೆ. ಹಾಗಾದರೆ ದೃಷ್ಟಿದೋಷ ತಾಗಿದರೆ ಯಾವ ರೀತಿಯ ಸೂಚನೆಗಳು ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಲೇಖಕರು ದ್ವಾರಕನಾಥಶಾಸ್ತ್ರೀ 9900202707ದೃಷ್ಟಿ ದೋಷಗಳಿಂದ ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತದೆ, ಮಾನಸಿಕವಾಗಿ ನರಳುವುದು, ಮನೆಯಲ್ಲಿ ಕಿರಿಕಿರಿ ಉದ್ಭವವಾಗುತ್ತದೆ, ದೇಹವು ಕಪ್ಪಾಗುತ್ತದೆ, ಮುಖದಲ್ಲಿ ತೇಜಸ್ಸು ಹಾಗೂ ಕಲೆ ನಾಶವಾಗುತ್ತದೆ, ಯಾವುದಾದರೂ ಸಮಾರಂಭಕ್ಕೆ ಹೋಗಿ ಅಲ್ಲಿ ಊಟ ಮಾಡುತ್ತಿರುವಾಗ ಯಾರಾದರೂ ನಿಮ್ಮನ್ನು ನೋಡಿದಾಗ ನಿಮಗೆ ದೃಷ್ಟಿ ದೋಷವಾಗಿ ಮನೆಗೆ ಬಂದ ತಕ್ಷಣ ವಾಂತಿಯಾಗುವುದು, ಕೆಟ್ಟ ದೃಷ್ಟಿ ಬಿದ್ದಾಗ ರಾತ್ರಿ ವೇಳೆಯಲ್ಲಿ ನಿದ್ದೆ ಬಾರದೆ ಇರುವುದು, ಕೈಕಾಲು ಸೆಳೆತ ಪ್ರಾರಂಭವಾಗುವುದು. ಈ ಮೇಲಿನ ಎಲ್ಲಾ ಕಾರಣಗಳು ದೃಷ್ಟಿದೋಷಕ್ಕೆ ಮೂಲವಾಗಿದೆ ಲೇಖಕರು ದ್ವಾರಕನಾಥಶಾಸ್ತ್ರೀ 9900202707.

    ಕೆಲವರು ದೃಷ್ಟಿ ದೋಷ ನಿವಾರಣೆಯಾಗಲಿ ಎಂದು ನಿಂಬೆಹಣ್ಣು, ಮೊಟ್ಟೆ, ಪೊರಕೆ, ವಿಲ್ಯೆದೆಳೆ ಇಂದ ಮಾಡುವಂತಹ ಪರಿಹಾರಗಳು, ಕೆಂಪು ನೀರನ್ನು ನಿವಾಳಿಸಿ ಚೆಲ್ಲುವುದು ಮಾಡಲಾಗುತ್ತದೆ. ಆದರೆ ಇದರಿಂದ ತಾತ್ಕಾಲಿಕವಾಗಿ ಪರಿಹಾರ ಸಿಗುತ್ತದೆಯೋ ಹೊರತು ಶಾಶ್ವತವಾಗಿ ಪರಿಹಾರ ದೊರೆಯುವುದಿಲ್ಲ. ಶಾಶ್ವತವಾಗಿ ಪರಿಹಾರ ಬೇಕೆಂದರೆ ಅದಕ್ಕೆ ಆದಂತಹ ಕೆಲವೊಂದು ಯಂತ್ರಗಳು ತಾಂತ್ರಿಕ ವಿದ್ಯೆಯಿಂದ ಇದೆ.ಆದ್ದರಿಂದ ಈ ರೀತಿಯ ಲಕ್ಷಣಗಳು ಕಂಡು ಬಂದರೆ ನಿಮಗೆ ಗೊತ್ತಿರುವ ತಾಂತ್ರಿಕರ ಬಳಿ ಹೋಗಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಲೇಖಕರು ದ್ವಾರಕನಾಥಶಾಸ್ತ್ರೀ 9900 202707.

  • ಇಷ್ಟಪಟ್ಟವರು ನಿಮ್ಮ ಹತ್ತಿರ ಬರಬೇಕೆಂದರೆ ಈ ಮೂರು ಶಬ್ದವನ್ನು ಪ್ರಯೋಗಿಸಿ.

    ನೀವು ಯಾರನ್ನಾದರೂ ಇಷ್ಟಪಡುತ್ತಿದ್ದರೆ ಹಾಗೂ ಅವರನ್ನು ಒಲಿಸಿಕೊಳ್ಳಬೇಕು ಎಂದರೆ ಈ ತಂತ್ರವನ್ನು ಉಪಯೋಗಿಸುವುದರಿಂದ ಅವರನ್ನು ನಿಮ್ಮ ಕೈ ವಶ ಮಾಡಿಕೊಳ್ಳಬಹುದು. ಪ್ರೀತಿ ಮಾಡಿದವರನ್ನು ಒಂದಾಗಿಸುವುದಕ್ಕೆ ಈ ತಂತ್ರ ಉಪಯೋಗವಾಗುತ್ತದೆ. ಹಾಗಾದರೆ ಈ ತಂತ್ರವನ್ನು ಯಾವ ರೀತಿ ಪ್ರಯೋಗ ಮಾಡಬೇಕು ಹಾಗೂ ಹೇಗೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಈ ತಂತ್ರವನ್ನು ರಾತ್ರಿಯ ಸಮಯದಲ್ಲಿ ಮಾಡಬೇಕು. ನಾವು ಹೇಳುವ ಈ ಮೂರು ಶಬ್ದವನ್ನು ರಾತ್ರಿವೇಳೆಯಲ್ಲಿ ಹೇಳಿದರೆ ಸಾಕು ನಿಮ್ಮ ಇಚ್ಛೆ ನೆರವೇರುತ್ತದೆ. ಈ ಮಂತ್ರವನ್ನು ಏಳು ಬಾರಿ ಹೇಳಬೇಕು, ಈ ಮಂತ್ರವನ್ನು ಹೇಳಬೇಕಾದರೆ ನೀವು ಯಾವ ವ್ಯಕ್ತಿಯನ್ನು ವಶೀಕರಣ ಮಾಡಬೇಕು ಎಂದು ಅಂದುಕೊಳ್ಳುತ್ತಿರೋ ಅವರ ಹೆಸರನ್ನು ಮನಸ್ಸಿನಲ್ಲಿಯೇ ಸ್ಮರಿಸಿಕೊಳ್ಳಬೇಕು. ಈ ರೀತಿಯಾಗಿ ಏಳು ದಿನ ಈ ಮಂತ್ರವನ್ನು ಜಪಿಸಿದರೆ ಸಾಕು ನೀವು ಅಂದುಕೊಂಡ ಕೆಲಸವು ಯಶಸ್ವಿಯಾಗುತ್ತದೆ.

    ಈ ತಂತ್ರವನ್ನು ಸ್ತ್ರೀಯರು ಆಗಲಿ ಪುರುಷರು ಆಗಲಿ ಯಾರು ಬೇಕಾದರೂ ಮಾಡಬಹುದು. ಮೊದಲಿಗೆ ನೀವು ಯಾವ ವ್ಯಕ್ತಿಯನ್ನು ವಶೀಕರಣ ಮಾಡಬೇಕು ಎಂದು ಅಂದುಕೊಳ್ಳುತ್ತಿರೋ ಅವರನ್ನು ನೆನಪಿಸಿಕೊಳ್ಳಬೇಕು. ಆ ವ್ಯಕ್ತಿಯನ್ನು ನೆನಪಿಸಿಕೊಂಡು ನಂತರ ಮೂರು ಶಬ್ದದ ಮಂತ್ರವನ್ನು ಹೇಳಬೇಕು.

    ಓಂ ನಮೋ ಭಗವತೇ ಕುರು ಕುರು ವಶಂ ಈ ಮೇಲಿನ ಮಂತ್ರವನ್ನು ಏಳು ಬಾರಿ ಏಳು ದಿನ ಹೇಳಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಇಷ್ಟ ಪಡುವ ವ್ಯಕ್ತಿ ನಿಮ್ಮ ಹತ್ತಿರ ಬರುತ್ತಾರೆ. ಈ ಮೇಲಿನ ತಂತ್ರವನ್ನು ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿ ಒಳ್ಳೆಯ ಫಲವನ್ನು ಪಡೆದುಕೊಳ್ಳಿ.

  • ಅಕ್ಟೋಬರ್ ತಿಂಗಳ ಮೇಷ ರಾಶಿಯವರ ತಿಂಗಳ ಭವಿಷ್ಯ ಹೇಗಿದೆ ನೋಡಿ.

    ಮೇಷ ರಾಶಿಚಕ್ರದ ಸ್ಥಳೀ ಯರ ವೃತ್ತಿ ಜೀವನದ ಬಗ್ಗೆ ಮಾತನಾಡದಿರೆ, ಅಕ್ಟೋಬರ್ ತಿಂಗಳು ನಿಮಗೆ ಸಂತೋ ಷವನ್ನು ತರಲಿದೆ. ಇದು ಪ್ರಗತಿಯ ಸಮಯ. ನೀವು ವ್ಯಾಪಾರದಲ್ಲಿರಲಿ ಅಥವಾ ಉದ್ಯೋಗದಲ್ಲಿರಲಿ, ಪ್ರತಿ ಯೊಂದು ಕ್ಷೇತ್ರದಲ್ಲಿ ಈ ಸಮಯ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಶಿಕ್ಷಣದ ದೃಷ್ಟಿ ಕೋನದಿಂದ ಈ ತಿಗಳು ಕೆಲವು ಏರಿಳಿತಗಳಿಂದ ತುಂಬಿರಬಹುದು. ಅಧ್ಯಯನ ಇತ್ಯಾದಿ ಗಳಲ್ಲಿ ಕೆಲವು ಅನಗತ್ಯ ಅಡೆತಡೆಗಳು ಉಂಟಾಗಬಹುದು. ಅತಿಥಿಗಳ ಆಗಮನದಿಂದ ಅಥವಾ ಎಲ್ಲಿಗಾದರೂ ಆಕಸ್ಮಿಕ ಪ್ರಯಾಣ ಮಾಡುವು ದರಂದ ಸ್ವಲ್ಪ ತೊಂದರೆಯಾಗಬಹುದು. ನಿಮ್ಮ ಮನಸ್ಸು ಕೂಡ ಸ್ವಲ್ಪ ಚಂಚಲ ವಾಗಿರುತ್ತದೆ ಮತ್ತು ಅನಪಯುಕ್ತ ವಸ್ತುಗಳತ್ತ ಒಲವು ಇರುತ್ತದೆ.

    ಕುಟುಂಬ ಜೀವನದ ದೃಷ್ಟಿಕೋನದಿಂದ ಈ ತಿಂಗಳು ನಿಮಗೆ ಆನಂದ ದಾಯಕವಾಗಿರುತ್ತದೆ. ಮನೆ ಕುಟುಂಬದಲ್ಲಿ ಸಂತೋಷವಿರುತ್ತದೆ. ಕುಟುಂಬದ ಜನ ರೊಂದಿಗೆ ಸಮಯವನ್ನು ಉತ್ತಮವಾಗಿ ಕಳೆಯಲು ಅವಕಾಶವನ್ನು ಪಡೆಯುತ್ತೀರಿ. ಸಾಮಾಜಿಕ ಕಾಳಜಿಗಳ ಜೊತೆಗೆ ನೀವು ಕುಟುಂಬದ ಜವಾಬ್ದಾ ರಿಗಳನ್ನು ಸಹ ಪೂರೈಸುತ್ತೀರಿ. ಇದರಿಂದಾಗಿ ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗುತ್ತದೆ. ಪ್ರೀತಿಯ ಸಂಬಂಧದಲ್ಲಿರುವ ಜನರಿಗೆ ತಿಂಗಳು ಏರಿಳಿತಗಳಿಂದ ತುಂಬಿರಲಿದೆ. ಈ ಸಮಯ ದಲ್ಲಿ ನೀವು ಸಾಕಷ್ಟು ತಾಳ್ಮೆ ಮತ್ತು ತಿಳಿವಳಿಕೆಯನ್ನು ತೋರಿಸಬೇಕಾಗುತ್ತದೆ. ಇದ ಲ್ಲದೆ ಸ್ವಭಾವದಲ್ಲಿ ನೀವು ದುರಹಂಕಾರ ಮತ್ತು ಅಕ್ರಮಣಶೀಲತೆಯನ್ನು ಹೊಂದಿರಬಹುದು.ಈ ರಾಶಿಚಕ್ರದ ವಿವಾಹಿತ ಜನರ ಬಗ್ಗೆ ಮಾತನಾಡಿದರೆ, ಅಕ್ಟೋಬರ್ ತಿಂಗಳು ನಿಮಗೆ ಉತಮವೈ ರಲಿದೆ. ದಾಂಪತ್ಯ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಪರಸ್ಪರ ಸಾಮರಸ್ಯ ಉಳಿದಿರುತ್ತದೆ. ಸಂಬಂಧವು ಬಲಗೊ ಳ್ಳುತ್ತದೆ. ಪರಸ್ಪರ ಆಕರ್ಷಣೆಯೂ ಇರುತ್ತದೆ. ಆರ್ಥಿಕ ದೃಷ್ಟಿಕೋನದಿಂದ ಸಮಯ ಕೆಲವು ಏರಿಳಿತಗಳಿಂದ ತುಂಬಿರಲಿದೆ. ತಿಂಗಳ ಆರಂ ಭವು ಸಾಮಾನ್ಯವಾಗಿರುತ್ತದೆ. ಕೆಲಸದಲ್ಲಿ ಮನಸ್ಸು ಹೊಂದಿರುತ್ತೀರಿ ಮತ್ತು ಸರಾಸರಿ ರೀತಿಯಲ್ಲಿ ಮುಂದುವರಿಯುತ್ತದೆ. ಆದಾಯದ ಮೂಲಗಳು ತೆರೆದಿರುತ್ತವೆ. ಆದರೆ ಭರವಸೆಯ ಪ್ರಕಾರ ಪ್ರಯೋಜ ನೆಗಳ ಕೊರತೆಯಿಂದಾಗಿ ಮನಸ್ಸು ಅಸಮಾಧಾನಗೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಅಕ್ಟೋಬರ್ ತಿಂಗಳು ಸಡಿಳವಾಗಲಿದೆ. ಸಣ್ಣ ಪುಟ್ಟ ಸಮಸ್ಯೆಗಳು ಉಳಿದಿರುತ್ತವೆ. ಸೂರ್ಯ ಮತ್ತು ಮಂಗಳ ಗ್ರಹಗಳು ನಿಮ್ಮ ಮನೆಯಲ್ಲಿ ಸಂಯೋಜನೆ ನಡೆಸುತ್ತವೆ. ಪರಿಣಾಮ ದಿಂದಾಗಿ ಕೆಲವು ದೈಹಿಕ ಸಮಸ್ಯೆಗಳು ಉಂಟಾಗಬಹುದು. ಜ್ವರ, ತಲೆನೋವು, ರಕ್ತದೊತ್ತಡ, ರಕ್ತಸ್ರಾವ ಇತ್ಯಾದಿಗಳಿಗೆ ಸಂಬಂಧಿಸಿದ ಸಮ ಸ್ಯೆಗಳು ನಿಮ್ಮನ್ನು ಕಾಡಬಹುದು.

  • ಈ ತಪ್ಪುಗಳನ್ನು ಮಾಡಿದರೆ ದರಿದ್ರತನ ಬರುವುದು ಖಂಡಿತ.

    ನಾವು ಮನೆಯಲ್ಲಿ ತಿಳಿದೋ ಅಥವಾ ತಿಳಿಯದೆಯೋ ಮಾಡುವ ಕೆಲ ತಪ್ಪಿನಿಂದ ದರಿದ್ರತನ, ಬಡತನ ಎಂಬುದು ಆವರಿಸುತ್ತದೆ. ಹಾಗಾದರೆ ಯಾವ ತಪ್ಪುಗಳನ್ನು ಮನೆಯಲ್ಲಿ ಮಾಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.
    ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂದರೆ ನಿಮಗೆ ಎಷ್ಟು ಆದಾಯ ಬರುತ್ತದೆಯೋ ಅದರಲ್ಲಿ ಸ್ವಲ್ಪ ಹಣವನ್ನು ತೆಗೆದುಕೊಂಡು ಖರ್ಚು ಮಾಡಬೇಕು. ಒಂದು ವೇಳೆ ಆದಾಯಕ್ಕಿಂತ ಹೆಚ್ಚಿಗೆ ಹಣವನ್ನು ಖರ್ಚು ಮಾಡಿದರೆ ಆ ಕ್ಷಣಕ್ಕೆ ಅದು ಚೆನ್ನಾಗಿದ್ದರೂ ಕಷ್ಟದ ಕಾಲದಲ್ಲಿ ಯಾರು ಕೂಡ ನಿಮ್ಮ ಜೊತೆ ಬರುವುದಿಲ್ಲ ಆದ್ದರಿಂದ ಎಷ್ಟು ಸಂಪಾದನೆ ಮಾಡುತ್ತಿರೋ ಅಷ್ಟರಲ್ಲಿ ಖರ್ಚು ಮಾಡಿದರೆ ಉತ್ತಮ.

    ಕಿತ್ತೋಗಿರೋ ಬಾಚಣಿಗೆಯನ್ನು ಮನೆಯಲ್ಲಿ ಉಪಯೋಗಿಸುವುದರಿಂದ ದರಿದ್ರತನ ಬರುತ್ತದೆ. ಮಲಗುವಾಗ ಹಾಸಿಗೆಗೆ ಮುಖವನ್ನು ಹಾಕಿಕೊಂಡು ಉಲ್ಟಾ ಮಲಗುವುದು ದರಿದ್ರತನಕ್ಕೆ ಕಾರಣವಾಗುತ್ತದೆ. ಒಂದು ವೇಳೆ ನೀವು ಶ್ರೀಮಂತರಾಗಿದ್ದು ಅಥವಾ ಆರ್ಥಿಕವಾಗಿ ಸದೃಢರಾಗಿದ್ದರೂ ಹರಿದ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ದರಿದ್ರತನ ಬರುತ್ತದೆ. ಹೆಂಗಸರು ತಮ್ಮ ಮಕ್ಕಳ ಜಡೆಯನ್ನು ಕಟ್ಟುವಾಗ ನಿಂತುಕೊಂಡು ಕಟ್ಟಬಾರದು, ಅದರ ಬದಲು ಕುಳಿತುಕೊಂಡು ಜುಟ್ಟನ್ನು ಕಟ್ಟಬೇಕು.

    ಕತ್ತಲಲ್ಲಿ ಕುಳಿತುಕೊಂಡು ಊಟ ಮಾಡಬಾರದು ಏಕೆಂದರೆ ಈ ರೀತಿ ಕತ್ತಲಲ್ಲಿ ಊಟ ಮಾಡುವುದು ಕೇವಲ ರಾಕ್ಷಸರು ಮಾತ್ರ. ಈ ರೀತಿ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾಡಬೇಡಿ. ಸೂರ್ಯ ಮುಳುಗಿದ ನಂತರ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸವನ್ನು ಗುಡಿಸ ಬೇಡಿ, ಏಕೆಂದರೆ ಇದರಿಂದ ದರಿದ್ರತನ ಎಂಬುದು ಪ್ರಾಪ್ತಿಯಾಗುತ್ತದೆ ಹಾಗೂ ಲಕ್ಷ್ಮೀದೇವಿ ಮನೆಯನ್ನು ಬಿಟ್ಟು ಹೊರಟು ಹೋಗುತ್ತಾಳೆ.

    ಸದಾಕಾಲ ಯಾವಾಗಲೂ ಮನೆಯಲ್ಲಿ ಆಣೆ, ಪ್ರಮಾಣಗಳನ್ನು ಮಾಡಬಾರದು. ಒಂದು ವೇಳೆ ಆಣೆ ಪ್ರಮಾಣ ಮಾಡಿದರೆ ಅದನ್ನು ಯಾವುದೇ ಕಾರಣಕ್ಕೂ ಮುರಿಯಬಾರದು. ಒಂದು ವೇಳೆ ಮುರಿದರೆ ಇದರಿಂದ ಸಾಕಷ್ಟು ಕೆಟ್ಟ ಪರಿಣಾಮಗಳನ್ನು ಜೀವನದಲ್ಲಿ ಅನುಭವಿಸಬೇಕಾಗುತ್ತದೆ. ಮನೆಯಲ್ಲಿ ನಕಾರಾತ್ಮಕವಾಗಿ ಯೋಚನೆ ಮಾಡುವುದನ್ನು ಬಿಡಬೇಕು. ತಂದೆತಾಯಿಯನ್ನು ದೇವರ ಸಮಾನ ಎಂದು ಹೇಳಲಾಗುತ್ತದೆ, ಆದ್ದರಿಂದ ಅವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಒಂದುವೇಳೆ ಅವರನ್ನು ಬೈಯ್ಯುವುದು, ಸಿಡುಕುವುದು ಮಾಡಿದರೆ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ, ಆದರೆ ನಿಮಗೆ ಇದರಿಂದ ಕೆಟ್ಟ ಪರಿಣಾಮಗಳು ಬೀರುತ್ತವೆ.

  • ಮನೆಯಲ್ಲಿ ಯಾವ ವಸ್ತು ಇದ್ದರೆ ಧನಸಂಪತ್ತು ವೃದ್ಧಿಯಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ

    ಮನೆಯು ಅಭಿವೃದ್ಧಿ ಕಾಣಬೇಕು ಹಾಗೂ ಧನ ಸಂಪತ್ತು ವೃದ್ಧಿಯಾಗಬೇಕು ಎಂಬುದು ಎಲ್ಲರ ಆಸೆಯಾಗಿರುತ್ತದೆ. ಈ ವಸ್ತುಗಳು ಮನೆಯಲ್ಲಿ ಇದ್ದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ ಹಾಗೂ ಸುಖಕರವಾಗಿ ಜೀವನವನ್ನು ನಡೆಸಬಹುದು. ಒಂದು ವೇಳೆ ಈ ಕೆಲವೊಂದು ವಸ್ತುಗಳು ನಿಮ್ಮ ಮನೆಯಲ್ಲಿ ಇಲ್ಲ ಅಂದರೆ ಈ ವಸ್ತುಗಳನ್ನು ಖರೀದಿ ಮಾಡಿ ಮನೆಯಲ್ಲಿ ಇಡುವುದರಿಂದ ಧನಾತ್ಮಕ ಶಕ್ತಿಯ ಸಂಚಲನವಾಗುತ್ತದೆ.

    ಹಿಂದಿನ ಕಾಲದಲ್ಲಿ ಚಿನ್ನಾಭರಣಗಳಿಗಿಂತ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತಿತ್ತು. ಹಿಂದಿನ ಕಾಲದಲ್ಲಿ ಮನೆಯಲ್ಲಿ ಕಲಹಗಳು, ಗಲಾಟೆಗಳು, ಕಿರಿಕಿರಿಗಳು, ಗೊಂದಲಗಳು ತುಂಬಾ ಕಡಿಮೆ ಇರುತ್ತಿದ್ದವು, ಏಕೆಂದರೆ ಹಿಂದಿನ ಕಾಲದಲ್ಲಿ ಜಾಸ್ತಿ ತಾಮ್ರದ ಪಾತ್ರಗಳನ್ನು ಮನೆಯಲ್ಲಿ ಬಳಸಲಾಗುತ್ತಿತ್ತು. ಉದಾಹರಣೆಗೆ ತಟ್ಟೆಗಳು, ಲೋಟಗಳು, ಚಂಬುಗಳು ಹೀಗೆ ಸಾಕಷ್ಟು ಹಿತ್ತಾಳೆಯ ಪಾತ್ರೆಗಳನ್ನು ಉಪಯೋಗಿಸಲಾಗುತ್ತಿತ್ತು. ಆದ್ದರಿಂದ ಯಾರ ಮನೆಯಲ್ಲಿ ಹೆಚ್ಚಾಗಿ ತಾಮ್ರದ ಪದಾರ್ಥಗಳು ಇರುತ್ತದೆಯೋ ಅವರ ಮನೆಯು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ.

    ಹಿಂದಿನ ಕಾಲದಲ್ಲಿ ನೀರಿಗೆ ತಾಮ್ರದ ನಾಣ್ಯವನ್ನು ಹಾಕಿ ಇಡಲಾಗುತ್ತಿತ್ತು, ಏಕೆಂದರೆ ನೀರಿನಲ್ಲಿರುವ ಕಲ್ಮಶವನ್ನು ಅದು ತೆಗೆದುಹಾಕುತಿತ್ತು. ಹಾಗೆಯೇ ತಾಮ್ರದ ಪದಾರ್ಥಗಳಿಂದ ಅಡುಗೆ ಮಾಡುವುದರಿಂದ ಹಾಗೂ ತಾಮ್ರದ ಲೋಟದಲ್ಲಿ ನೀರನ್ನು ಕುಡಿಯುವುದರಿಂದ ಆರೋಗ್ಯವೂ ಸಹ ವೃದ್ಧಿಯಾಗುತ್ತದೆ.

    ಲಕ್ಷ್ಮಿ ಕಾರಕ ಹಾಗೂ ಚಂದ್ರ ಆಕರ್ಷಕ ಅಂದರೆ ಬೆಳ್ಳಿ. ಯಾರ ಮನೆಯಲ್ಲಿ ಹೆಚ್ಚಾಗಿ ಬೆಳ್ಳಿಯ ಪದಾರ್ಥಗಳು ಇರುತ್ತದೆಯೋ, ಆ ಮನೆಯಲ್ಲಿ ಧನಾತ್ಮಕ ಶಕ್ತಿಯು ವೃದ್ಧಿ ಆಗುತ್ತದೆ. ಹಾಗೆಯೇ ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಆದ್ದರಿಂದ ಮನೆಯಲ್ಲಿ ಬೆಳ್ಳಿಯ ನಾಣ್ಯಗಳಿಂದ ಮಾಡಿದ ಲಕ್ಷ್ಮಿ ಹಾಗು ಗಣಪತಿಯ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುವುದರಿಂದ ಲಕ್ಷ್ಮೀದೇವಿಯ ಆಕರ್ಷಣೆಯು ಸಿಗಲಿದೆ. ಮನೆಯಲ್ಲಿ ಹೆಚ್ಚಾಗಿ ಬೆಳ್ಳಿ ಪದಾರ್ಥಗಳು ಇದ್ದರೆ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.ಆದ್ದರಿಂದ ಯಾರ ಮನೆಯಲ್ಲಿ ಈ ಎರಡು ವಸ್ತುಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೋ ಅಂತವರ ಮನೆಯಲ್ಲಿ ಧನ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಇಷ್ಟೇ ಅಲ್ಲದೆ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

  • ರಾತ್ರಿ ಮಲಗುವಾಗ ತಲೆಕೆಳಗೆ ಒಂದು ರೂಪಾಯಿಯ ನಾಣ್ಯವನ್ನು ಇಟ್ಟುಕೊಂಡರೆ ಸಿಗುವ ಲಾಭಗಳು ತಿಳಿದಿದೆಯೇ ನಿಮಗೆ.

    ಒಂದು ರೂಪಾಯಿಯ ನಾಣ್ಯಕ್ಕೆ ನಿಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಇದೆ ಎಂದರೆ ತಪ್ಪಾಗಲಾರದು. ಒಂದು ರೂಪಾಯಿಯ ನಾಣ್ಯದಿಂದ ಸಾಕಷ್ಟು ಲಾಭಗಳಿವೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ನಮ್ಮ ಶರೀರದ ಮಾನಸಿಕ, ಶಾರೀರಿಕ ಸಮಸ್ಯೆಗಳನ್ನು ಸಹ ಬಗೆಹರಿಸುತ್ತದೆ ಈ ಒಂದು ರೂಪಾಯಿಯ ನಾಣ್ಯ. ಹಾಗಾದರೆ ಒಂದು ರೂಪಾಯಿಯ ನಾಣ್ಯದಿಂದ ಏನೆಲ್ಲ ಲಾಭಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

    ಒಂದು ವೇಳೆ ಮನೆಯಲ್ಲಿ ನಕಾರಾತ್ಮಕ ಶಕ್ತಿ, ದುಷ್ಟಶಕ್ತಿಗಳ ಪ್ರಭಾವ ಹೆಚ್ಚಿ ಮನೆಯ ಮೇಲೆ ಪ್ರಭಾವವನ್ನು ಬೀರುತ್ತಿದ್ದರೆ ಮತ್ತು ಅದರಲ್ಲೂ ಹೆಚ್ಚಾಗಿ ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತಿದ್ದರೆ ಕೇವಲ ಒಂದೇ ಒಂದು ರೂಪಾಯಿಯ ನಾಣ್ಯದಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

    ಒಂದು ವೇಳೆ ಬೇರೆಯವರ ಕೆಟ್ಟದೃಷ್ಟಿ, ನರದೃಷ್ಟಿ, ಆರೋಗ್ಯ ದೃಷ್ಟಿ ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿ ಮಲಗುವಾಗ ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡು ಕಾಲಿನಿಂದ ತಲೆಯ ತನಕ ಹಾಗೂ ತಲೆಯಿಂದ ಕಾಲಿನ ತನಕ ಏಳು ಬಾರಿ ನಿವಾಳಿಸಿ ಯಾರೂ ಕೂಡ ನೋಡದ ಹಾಗೆ ಒಂದು ರೂಪಾಯಿಯ ನಾಣ್ಯವನ್ನು ಬಚ್ಚಿ ಇಡಬೇಕು. ಈ ಕೆಲಸವನ್ನು ಮಾಡಬೇಕಾದರೆ ಯಾರೂ ಕೂಡ ನಿಮ್ಮನ್ನು ನೋಡಬಾರದು. ರಾತ್ರಿ ಕಳೆದ ನಂತರ ಮರುದಿನ ಹರಿಯುವ ನದಿಯಲ್ಲಿ ಅಥವಾ ಹರಿಯುವ ನೀರಿನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಆ ಒಂದು ರೂಪಾಯಿಯ ನಾಣ್ಯವನ್ನು ತೇಲಿ ಬಿಡಬೇಕು.

    ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ದುಷ್ಟಶಕ್ತಿಗಳ ಪ್ರಭಾವವು ನಿವಾರಣೆಯಾಗುತ್ತದೆ. ಒಂದು ವೇಳೆ ಹರಿಯುವ ನದಿಯಲ್ಲಿ ಬಿಡಲು ಸಾಧ್ಯವಾಗದಿದ್ದರೆ, ಆಗ ಒಂದು ರೂಪಾಯಿಯ ನಾಣ್ಯವನ್ನು ಯಾರು ಓಡಾಡದೆ ಇರುವ ಜಾಗದಲ್ಲಿ ಒಂದು ಗುಂಡಿಯನ್ನು ತೆಗೆದು ನಾಣ್ಯವನ್ನು ಅಲ್ಲಿ ಹಾಕಿ ನಂತರ ಮಣ್ಣಿನಿಂದ ಮುಚ್ಚಬೇಕು. ಈ ಕೆಲಸವನ್ನು ಮಾಡಬೇಕಾದರೆ ಯಾರ ಹತ್ತಿರವೂ ಕೆಲಸದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಬಾರದು ಹಾಗೂ ಈ ಕೆಲಸವನ್ನು ಮಾಡಬೇಕಾದರೆ ಯಾರೂ ಕೂಡ ನೋಡಬಾರದು. ಈ ರೀತಿಯಾಗಿ ಮಾಡುವುದರಿಂದ ನಿಮಗಿರುವ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ನೀವು ಜೀವನವನ್ನು ಸುಖ-ಶಾಂತಿ ಹಾಗೂ ನೆಮ್ಮದಿಯಿಂದ ನಡೆಸಬಹುದು.

  • ಹೆಣ್ಣುಮಕ್ಕಳು ಈ ತಪ್ಪನ್ನು ಮಾಡಿದರೆ ಮನೆಗೆ ದರಿದ್ರತನ ಬರುವುದು ಖಚಿತ.

    ಸ್ತ್ರೀಯರು ಮಾಡುವ ಈ ನಾಲ್ಕು ತಪ್ಪುಗಳಿಂದ ಮನೆ ಹಾಗೂ ಗಂಡನು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಹಾಗೂ ಜೀವನವೇ ನಾಶವಾಗುತ್ತದೆ. ಮನುಷ್ಯನಿಗೆ ಜೀವನದಲ್ಲಿ ಗುರಿ ಇರಬೇಕು, ಇಲ್ಲವಾದರೆ ಜೀವನವು ಸಾರ್ಥಕತೆಯಾಗುವುದಿಲ್ಲ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು ಅಡೆತಡೆಗಳು ಬರುತ್ತದೆ, ಕೆಲವೊಂದು ಬಾರಿ ಅಡೆತಡೆಗಳು ಬರುವುದಕ್ಕೆ ನಾವು ಮಾಡುವಂತ ಕೆಲವೊಂದು ತಪ್ಪುಗಳು ಕಾರಣವಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಕೆಲವೊಂದು ತಪ್ಪುಗಳಿಂದ ಈ ಜನ್ಮದಲ್ಲಿ ಕಷ್ಟವನ್ನು ಅನುಭವಿಸುವಂತಹ ಪರಿಸ್ಥಿತಿ ಬರುತ್ತದೆ ಎಂದರೆ ತಪ್ಪಾಗಲಾರದು. ಪುರಾಣಗಳ ಪ್ರಕಾರ ಸ್ತ್ರೀಯು ಮಾಡುವ ಕೆಲವೊಂದು ತಪ್ಪುಗಳಿಂದ ಮನೆ ಹಾಗೂ ಗಂಡನು ಬೀದಿಗೆ ಬಿದ್ದರು ಆಶ್ಚರ್ಯಪಡುವಂತ್ತಿಲ್ಲ ಹಾಗೂ ಯಶಸ್ಸನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದರೆ ತಪ್ಪಾಗಲಾರದು.ಸ್ತ್ರೀಯು ಮಾಡುವ ಈ ತಪ್ಪುಗಳಿಂದ ಗಂಡನು ಹಾಗೂ ಆತನ ಮನೆಯವರು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ವ್ಯಾಪಾರ-ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸುವಂತೆ ಆಗುತ್ತದೆ.

    ಮೊದಲಿಗೆ ಹೆಣ್ಣುಮಕ್ಕಳು ಪ್ರತಿನಿತ್ಯ ತಡವಾಗಿ ಏಳುವುದು, ಈ ರೀತಿ ಹೆಣ್ಣು ಮಕ್ಕಳು ತಡವಾಗಿ ಏಳುವುದರಿಂದ ಮನೆಗೆ ದರಿದ್ರತನ ತಂದುಕೊಡುತ್ತದೆ ಹಾಗೂ ಇದು ಒಳ್ಳೆಯದು ಅಲ್ಲ. ಹೆಣ್ಣುಮಕ್ಕಳು ಪ್ರತಿನಿತ್ಯ ಮುಂಜಾನೆ ಬೇಗನೆ ಏಳುವುದರಿಂದ ಮನೆಯಲ್ಲಿ ಬದಲಾವಣೆಯ ಬೆಳಕು ಮೂಡುತ್ತದೆ ಹಾಗೂ ಒಳ್ಳೆಯದಾಗುತ್ತದೆ.

    ಮನೆಯಲ್ಲಿ ಹೆಣ್ಣುಮಕ್ಕಳು ಕೆಟ್ಟ ಪದವನ್ನು ಉಪಯೋಗಿಸಿ ಮಾತನಾಡಬಾರದು ಹಾಗೂ ಮುಖವನ್ನು ಗಂಟು ಹಾಕಿಕೊಂಡು ಕೂತುಕೊಳ್ಳಬಾರದು. ಪುರಾಣಗಳ ಪ್ರಕಾರ ಹೆಣ್ಣುಮಕ್ಕಳು ಈ ರೀತಿಯ ನಡವಳಿಕೆಯನ್ನು ಇಟ್ಟುಕೊಂಡಿದ್ದರೆ ಮನೆಯು ಏಳಿಗೆ ಆಗಲು ಸಾಧ್ಯವಿಲ್ಲ.

    ಯಾರ ಮನೆಯಲ್ಲಿ ಕಲಹ ಮಾಡುವ, ಜಗಳ ಮಾಡುವ ಹೆಣ್ಣುಮಕ್ಕಳು ಇರುತ್ತಾರೋ ಅಲ್ಲಿ ಲಕ್ಷ್ಮೀದೇವಿಯು ವಾಸಿಸುವುದಿಲ್ಲ. ಮನೆಯಲ್ಲಿರುವ ಹೆಣ್ಣು ಮಕ್ಕಳು ಯಾವಾಗಲೂ ಸಂತೋಷದಿಂದ ನಗುನಗುತ್ತಾ ಇರಬೇಕು. ಆದ್ದರಿಂದ ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ನಗುನಗುತ್ತಾ ಸಂತೋಷದಿಂದ ಇರುತ್ತಾರೋ ಆ ಮನೆಯಲ್ಲಿ ಏಳಿಗೆಯನ್ನು ಕಾಣಬಹುದು.

    ಹೆಣ್ಣು ಮಕ್ಕಳು ಬಳಸುವ ಬಳೆ ಹಾಗೂ ಗೆಜ್ಜೆಯನ್ನು ಬೇರೆಯವರಿಗೆ ಕೊಡಬಾರದು. ಒಂದು ವೇಳೆ ಈ ವಸ್ತುಗಳನ್ನು ಬೇರೆಯವರಿಗೆ ಕೊಟ್ಟರೆ ಲಕ್ಷ್ಮೀದೇವಿಯನ್ನು ಬೇರೆಯವರಿಗೆ ಕೊಟ್ಟಂತೆ ಆಗುತ್ತದೆ. ಹೆಣ್ಣುಮಕ್ಕಳು ಮನೆಯನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ಯಾರ ಮನೆಯು ಸ್ವಚ್ಛತೆಯಿಂದ ಕೂಡಿರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮೀದೇವಿಯು ವಾಸ ಮಾಡುತ್ತಾಳೆ. ಆದ್ದರಿಂದ ಮನೆಯು ಏಳಿಗೆಯನ್ನು ಕಾಣಬೇಕೆಂದರೆ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮೇಲೆ ಹೇಳಲಾಗಿರುವ ತಪ್ಪನ್ನು ಮಾಡಬಾರದು.

  • ಈ ವಸ್ತುಗಳು ಮನೆಯಲ್ಲಿದ್ದರೆ ಮೊದಲು ಹೊರ ಹಾಕಿ ಇಲ್ಲದಿದ್ದರೆ ಬಡತನ ಬರುವುದು ಖಚಿತ

    ಬಹಳ ನಷ್ಟವನ್ನು ಅನುಭವಿಸಿದ ಸಂದರ್ಭಗಳಲ್ಲಿ ನಷ್ಟಕ್ಕೆ ಕಾರಣ ವಾಸ್ತು ದೋಷ ಎಂದು ಹೇಳುತ್ತಾರೆ ಜ್ಯೋತಿಷ್ಯಗಳು, ಏಕೆಂದರೆ ಜೀವನದಲ್ಲಿ ಸಾಕಷ್ಟು ಸಮಯವನ್ನು ನಾವು ಕಳೆಯುವುದು ಮನೆಯಲ್ಲಿ. ಮನೆಯಲ್ಲಿರುವ ನಾಲ್ಕುಗೋಡೆಗಳ ನಮ್ಮ ಅದೃಷ್ಟಕ್ಕೂ ದುರಾದೃಷ್ಟಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಕೆಲವೊಂದು ವಸ್ತುಗಳು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಿದರೆ ಮತ್ತೆ ಕೆಲವೊಂದು ವಸ್ತುಗಳು ಬಡತನವನ್ನು ತರುತ್ತದೆ. ಈ ಕೆಳಕಂಡ ವಸ್ತುಗಳು ನಿಮ್ಮ ಮನೆಯಲ್ಲಿ ಇದ್ದರೆ ದಯವಿಟ್ಟು ಆ ವಸ್ತುಗಳನ್ನು ಹೊರಗೆ ಹಾಕಿ ಇಲ್ಲದಿದ್ದರೆ ದರಿದ್ರತನ ಬರುವುದು ಖಚಿತ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.

    ಪರ್ಸ್ ಅತವಾ ವ್ಯಾಲೆಟ್ ಹಳೆಯದಾಗಿದೆಯಾ ಅಥವಾ ಹರಿದಿದೆಯೋ ಎಂದು ಪರೀಕ್ಷೆ ಮಾಡಿಕೊಳ್ಳಿ. ಹಣವನ್ನು ಇಡುವ ಜಾಗ ಸಹ ಒಳ್ಳೆಯ ಸ್ಥಿತಿಯಲ್ಲಿರಬೇಕು. ಲಾಕರ್ ಅಲ್ಲಿ ಒಂದು ಲಕ್ಷ್ಮಿಯ ಫೋಟೋ ಮತ್ತು ಅಶ್ವಥ್ ಮರದ ಎಲೆಯ ಮೇಲೆ ಬೆಳ್ಳಿಯ ನಾಣ್ಯವನ್ನು ಇಡುವುದರಿಂದ ಶುಭವಾಗುತ್ತದೆ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.

    ಹಳೆಯದಾದ ಅಥವಾ ಉಪಯೋಗಿಸದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹೊರಗೆ ಹಾಕಿ. ಏಕೆಂದರೆ ಈ ವಸ್ತುಗಳು ರಾಹು ಗ್ರಹದ ಕ್ರೋಧವನ್ನು ಆಕರ್ಷಿಸುತ್ತದೆ. ಇದರಿಂದ ಜೀವನದಲ್ಲಿ ಬಹಳಷ್ಟು ಕೇಡು ಉಂಟಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಹಳೆಯದಾದ ಅಥವಾ ಹರಿದ ಬಟ್ಟೆಗಳು ಇರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿಯ ಬಟ್ಟೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭದಾಯಕವಲ್ಲ. ಒಂದು ವೇಳೆ ಬಟ್ಟೆಗಳು ನಿಮಗೆ ಇಷ್ಟವಿಲ್ಲವೆಂದರೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಅದನ್ನು ಯಾರಿಗಾದರೂ ಕೊಟ್ಟುಬಿಡಿ. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.

    ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೊಡೆದೋಡಿಸಲು ವಾರಕ್ಕೊಮ್ಮೆ ಲವಣಯುಕ್ತ ನೀರಿನಿಂದ ಮನೆಯನ್ನು ಶುಚಿಗೊಳಿಸಿ. ಸಾಮಾನ್ಯವಾಗಿ ಮನೆಯ ಪ್ರತಿಯೊಂದು ಮೂಲೆಯಲ್ಲಿ ಜೇಡ ಬಲೆಯನ್ನು ಕಟ್ಟುತ್ತದೆ. ಜೇಡರ ಬಲೆಯು ಮನೆಯ ಏಳಿಗೆಯನ್ನು ಹತೋಟಿಯಲ್ಲಿಡುತ್ತದೆ. ಆದ್ದರಿಂದ ಬಲೆಯನ್ನು ತೆಗೆದು ಮನೆಯನ್ನು ಶುಚಿಯಾಗಿಡಬೇಕು. ಜೇಡರ ಬಲೆಯನ್ನು ಮಂಗಳವಾರ ಹಾಗೂ ಶುಕ್ರವಾರದಂದು ತೆಗೆಯಬಾರದು. ಶನಿವಾರ ಹಾಗೂ ಭಾನುವಾರ ಮನೆಯನ್ನು ಶುಚಿಗೊಳಿಸಬಹುದು. ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.

    ಮನೆಯ ಅಲ್ಮೇರಾ ಸದಾ ಮುಚ್ಚಿರಬೇಕು ಇಲ್ಲವಾದರೆ ಅಭಿವೃದ್ಧಿಯು ನಿಮ್ಮ ಮನೆಯಿಂದ ದೂರವಾಗುತ್ತದೆ ಹಾಗೂ ಲಕ್ಷ್ಮೀದೇವಿಯು ಮನೆಯಲ್ಲಿ ವಾಸಿಸುವುದಿಲ್ಲ. ಹರಿದುಹೋದ ದೇವರ ಚಿತ್ರಪಟಗಳು, ಮುರಿದ ವಿಗ್ರಹಗಳು ಅಶುಭ ಎಂದು ಹೇಳಲಾಗುತ್ತದೆ. ಆದ್ದರಿಂದ ಹರಿದುಹೋದ ಹಾಗೂ ಮುರಿದುಹೋದ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಡಿ. ಮುರಿದುಹೋದ ಕುರ್ಚಿ, ಟೇಬಲ್ ಏನಾದರೂ ಮನೆಯಲ್ಲಿ ಇದ್ದರೆ ಮೊದಲಿಗೆ ಆ ವಸ್ತುಗಳನ್ನು ಮನೆಯಿಂದ ಹೊರಹಾಕಿ. ಏಕೆಂದರೆ ಈ ವಸ್ತುಗಳು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹಣಕಾಸಿನ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ. ಲಕ್ಷ್ಮೀದೇವಿ ಯಾವಾಗಲೂ ಸ್ವಚ್ಛ ವಾಗಿರುವುದನ್ನು ಬಯಸುತ್ತಾಳೆ ಆದ್ದರಿಂದ ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಿ ಆಗ ಮಾತ್ರ ಲಕ್ಷ್ಮೀದೇವಿ ಶಾಶ್ವತವಾಗಿ ವಾಸಿಸಲು ಸಾಧ್ಯವಾಗುತ್ತದೆ.  ಲೇಖಕರು ಸುದರ್ಶನ್ ಭಟ್ ದೈವಜ್ಞ ಆಧ್ಯಾತ್ಮಿಕ ಚಿಂತಕರು ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಕರೆ ಮಾಡಿ 96639 53892.

  • ಯಾವ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಸದಾಕಾಲ ನೆಲೆಸಿರುತ್ತಾಳೆ ಎಂಬುದು ಗೊತ್ತೇ ನಿಮಗೆ ?

    ಯಾವ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಸದಾಕಾಲ ನೆಲೆಸಿರುತ್ತಾಳೆ ಎಂಬುದು ಗೊತ್ತೇ ನಿಮಗೆ ಒಂದು ವೇಳೆ ನಿಮ್ಮ ಮನೆಯಲ್ಲಿ ಸದಾ ಕಾಲ ಲಕ್ಷ್ಮೀದೇವಿ ವಾಸಮಾಡಬೇಕು ಹಾಗೂ ಆರ್ಥಿಕವಾಗಿ ಸದೃಢವಾಗಿರಬೇಕೆಂದರೆ ಈ ಮೂರು ವಸ್ತುಗಳನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾದರೆ ಮನೆಯಲ್ಲಿ ಇಟ್ಟುಕೊಳ್ಳಬೇಕಾದ ಆ 3 ವಸ್ತುಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ಮೊದಲನೆಯದಾಗಿ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದಾಗುತ್ತದೆ. ಆಂಜನೇಯ ಸ್ವಾಮಿಯ ಮೂರ್ತಿಯನ್ನು ಇಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯಕವಾಗುತ್ತದೆ. ಆದ್ದರಿಂದ ಯಾರ ಮನೆಯಲ್ಲಿ ಆಂಜನೇಯಸ್ವಾಮಿಯ ಚಿತ್ರಪಟ ಅಥವಾ ಆಂಜನೇಯ ಸ್ವಾಮಿಯ ಮೂರ್ತಿ ಇರುತ್ತದೆಯೋ ಅಲ್ಲಿ ಲಕ್ಷ್ಮೀದೇವಿ ಸದಾಕಾಲ ವಾಸ ಮಾಡುತ್ತಾರೆ. ಆಂಜನೇಯ ಸ್ವಾಮಿಯ ಚಿತ್ರಪಟ ಅಥವಾ ಮೂರ್ತಿಯನ್ನು ದಕ್ಷಿಣ ಪಕ್ಷಿಮ ದಿಕ್ಕಿಗೆ ಇಟ್ಟರೆ ಸಂಪೂರ್ಣ ಅನುಗ್ರಹವನ್ನು ಪಡೆದುಕೊಳ್ಳಬಹುದು.ಎರಡನೆಯದಾಗಿ ವಾಸ್ತುದೇವನ ಚಿತ್ರಪಟವನ್ನು ಇಡುವುದರಿಂದ ಮನೆಯಲ್ಲಿ ವಾಸ್ತು ದೋಷವಿದ್ದರೆ ನಿವಾರಣೆಯಾಗುತ್ತದೆ. ಆದ್ದರಿಂದ ವಾಸ್ತುದೇವನ ಚಿತ್ರಪಟವನ್ನು ಮನೆಯ ಬಾಗಿಲನ ಮೇಲೆ ಇಡಬೇಕಾಗುತ್ತದೆ. ಇದರಿಂದ ಮನೆಯಲ್ಲಿರುವ ವಾಸ್ತು ದೋಷದ ಪ್ರಭಾವವು ಕಡಿಮೆಯಾಗುತ್ತ ಬರುತ್ತದೆ.

    ಮಡಿಕೆಯನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ. ಆದ್ದರಿಂದ ಮಡಿಕೆಯಲ್ಲಿ ಯಾವಾಗಲೂ ನೀರು ಇಡಬೇಕು. ಆದ್ದರಿಂದ ಮನೆಯಲ್ಲಿ ಮಡಿಕೆಯನ್ನು ತಂದಿಟ್ಟು ಪ್ರತಿನಿತ್ಯ 1 ಲೋಟ ಮಡಿಕೆಯ ನೀರನ್ನು ಕುಡಿದರೆ ತುಂಬಾ ಒಳ್ಳೆಯದಾಗುತ್ತದೆ. ಮನೆಯಲ್ಲಿ ಮಡಿಕೆ ಇರುವುದರಿಂದ ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗಬಹುದು.