Kannada Astrology

Blog

  • ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ.

    ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ..ಮನೆಯಿಂದ ಹೊರಗೆ ಹೊರಟಾಗ ಆಕಸ್ಮಿಕವಾಗಿ ಕಪ್ಪು ನಾಯಿ ಕಂಡರೆ ಅದರ ದರ್ಶನವನ್ನು ಪಡೆದುಕೊಳ್ಳುವುದು ತುಂಬಾ ಒಳ್ಳೆಯದು. ಕಪ್ಪು ನಾಯಿಯನ್ನು ನೋಡಿದರೆ ಮನಸ್ಸಿನಲ್ಲಿ ಅಂದುಕೊಂಡು ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ. ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಹಲ್ಲಿಯು ಲೊಚ್ಚುಗುಡುವ ಶಬ್ದವು ಹೆಚ್ಚಾಗಿ ಎಡ ಭಾಗದಿಂದ ಕೇಳಿದರೆ ವಿಶೇಷವಾಗಿ ತುಂಬಾ ಒಳ್ಳೆಯದಾಗುತ್ತದೆ. ಮನೆಯಿಂದ ಹೊರಟಾಗ ಆಕಸ್ಮಿಕವಾಗಿ ಸಮಸಂಖ್ಯೆಯಲ್ಲಿ ಬ್ರಾಹ್ಮಣರು ಸಿಕ್ಕಿದರೆ ತುಂಬಾ ಒಳ್ಳೆಯದು. ಸಮ ಸಂಖ್ಯೆ ಎಂದರೆ 2,4,6,8 ಹೀಗೆ ಬ್ರಾಹ್ಮಣರು ಏನಾದರೂ ಆಕಸ್ಮಿಕವಾಗಿ ಸಿಕ್ಕರೆ ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣವಾಗುತ್ತದೆ.

    ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಎಲ್ಲಿಯಾದರೂ ಬಟ್ಟೆ ಸಿಕ್ಕಿಹಾಕಿಕೊಂಡು ಹರಿದು ಹೋದರೆ, ನೀವು ಅಂದುಕೊಂಡಂತ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲಿಯು ಗಣಪತಿಯ ವಾಹನ ವಾಗಿರುವುದರಿಂದ ಇಲಿಯು ಮನೆಯಲ್ಲಿದ್ದರೆ ಗಣಪತಿಯ ಅನುಗ್ರಹವು ಸದಾ ಕಾಲ ಆ ಮನೆಗೆ ಇರುತ್ತದೆ.

    ಕಂಚು ಮತ್ತು ಲೋಹದ ವಸ್ತುಗಳನ್ನು ಯಾವುದಾದರೂ ಮುಖ್ಯ ಕೆಲಸದ ಮೇಲೆ ಹೊರ ಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿ ಹೋದರೆ ಕೆಲಸಕಾರ್ಯಗಳಲ್ಲಿ ಯಾವುದೇ ರೀತಿಯ ವಿಘ್ನಗಳು ಆಗದೆ, ಅಡೆತಡೆಗಳು ಆಗದೆ, ಅಂದುಕೊಂಡಂತೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣವಾಗುತ್ತದೆ. ಕೆಲವೊಂದು ಬಾರಿ ಮನೆಯಿಂದ ಹೊರಹೋಗುವಾಗ ಕೆಲವು ಪ್ರಾಣಿ ಪಕ್ಷಿಗಳು ಅಡ್ಡಬಂದರೆ ಅಪಶಕುನ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಬೆಕ್ಕು, ಕಾಗೆ ಅಡ್ಡ ಬಂದಾಗ ಒಂದೆರಡು ನಿಮಿಷ ಅಲ್ಲೇ ನಿಂತು ಗಣಪತಿಯ ಓಂ ಗಂ ಗಣಪತಿಯೇ ನಮಃ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಅಲ್ಲಿಂದ ಹೊರಟರೆ ಯಾವುದೇ ರೀತಿಯ ಅಡೆತಡೆಗಳು, ವಿಘ್ನಗಳು ಉಂಟಾಗುವುದಿಲ್ಲ.

    ಓಂ ಭಗವತೇ ನಮಃ ಎಂಬ ದೇವಿಯ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಆ ಜಾಗದಿಂದ ಹೊರಡುವುದರಿಂದ ಮನಸ್ಸಿನಲ್ಲಿ ಅಂದುಕೊಂಡಂತ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಗಳಾಗದೆ ನಿರ್ವಿಘ್ನವಾಗಿ ನೆರವೇರುತ್ತದೆ.

  • ಈ 5 ವಸ್ತುಗಳು ಮನೆಯಲ್ಲಿದ್ದರೆ ಬಡತನ ಎಂಬುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.

    ಈ 5 ವಸ್ತುಗಳು ಮನೆಯಲ್ಲಿದ್ದರೆ ಬಡತನ ಎಂಬುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..ಎಷ್ಟೋ ಜನ ಕಡುಬಡವರು ಈ 5 ವಸ್ತುಗಳನ್ನು ಅವರ ಬಳಿ ಇಟ್ಟುಕೊಂಡು ಶ್ರೀಮಂತರಾಗಿದ್ದಾರೆ. ನಂಬಿಕೆಯಿಂದಲೇ ಈ ಜಗತ್ತು ನಡೆಯುವುದು ಹಾಗೂ ನಂಬಿಕೆಯೇ ಎಲ್ಲರ ಶಕ್ತಿಯಾಗಿದೆ. ಈಗಿನ ಪ್ರಪಂಚದಲ್ಲಿ ಕೆಲವರು ಐಷಾರಾಮಿ ಜೀವನವನ್ನು ಇನ್ನೂ ಕೆಲವರು ಸಾಧಾರಣ ಜನಜೀವನವನ್ನು ಹಾಗೂ ಮತ್ತೆ ಕೆಲವರು ಬಡವರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಕೆಲವೊಂದು ಬಾರಿ ವಾಸ್ತುದೋಷದ ಪರಿಣಾಮವಾಗಿ ಶ್ರೀಮಂತರಾಗಿದ್ದವರು ಕಡುಬಡವರಾಗಿ ಜೀವನವನ್ನು ನಡೆಸಬೇಕಾಗುತ್ತದೆ. ಬಡವರಾಗಿದ್ದವರು ಶ್ರೀಮಂತರಾಗಬೇಕು ಎಂದರೆ ಯಾವ 5 ವಸ್ತುಗಳನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾದರೆ ಆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.

    ಯಾರಿಗೆ ಭಗವಂತನಾದ ಗಣೇಶನ ಮೇಲೆ ನಂಬಿಕೆ ಇರುತ್ತದೆಯೋ ಅಂಥವರ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಗಳು, ತೊಂದರೆಗಳು, ವಿಘ್ನಗಳು ಬರುವುದಿಲ್ಲ. ಹಾಗಾಗಿ ಗಣೇಶನನ್ನು ವಿಘ್ನವಿನಾಶಕ ಎಂದು ಕರೆಯುತ್ತಾರೆ. ಧನ ಸಂಪತ್ತಿನ ಕಷ್ಟವನ್ನು ದೂರಮಾಡಲು ನೃತ್ಯ ಮಾಡುತ್ತಿರುವ ಗಣಪತಿಯ ಮೂರ್ತಿಯನ್ನು ತೆಗೆದುಕೊಂಡು ಬಂದು ಮನೆಯ ಮುಖ್ಯದ್ವಾರದ ಕಡೆ ದೃಷ್ಟಿ ಇರುವಂತೆ ಇಡಬೇಕು. ಮುಂಜಾನೆ ಎದ್ದ ತಕ್ಷಣ ಗಣೇಶನ ಮೂರ್ತಿಗೆ ನಮಸ್ಕಾರವನ್ನು ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ನಿಂತುಹೋದ ಕೆಲಸಗಳು ಪರಿಪೂರ್ಣವಾಗುತ್ತದೆ ಹಾಗೂ ಧನ ಸಂಪತ್ತು ವೃದ್ಧಿಯಾಗುತ್ತದೆ.ವಾಸ್ತುವಿನ ದೋಷವನ್ನು ನಿವಾರಣೆ ಮಾಡಲು ಕೊಳಲು ತುಂಬಾ ಸಹಾಯಕಾರಿಯಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ನೀವು ಸುಸ್ಥಿತಿಗೆ ತರಲು ಚಿಕ್ಕದಾದ ಬೆಳ್ಳಿಯ ಕೊಳಲನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಕೊಳಲು ಮನೆಯಲ್ಲಿದ್ದರೆ ಸಾಕ್ಷಾತ್ ಲಕ್ಷ್ಮೀದೇವಿ ವಾಸವಾಗಿರುತ್ತಾರೆ. ಇದರಿಂದ ವಾಸ್ತುದೋಷ ನಿವಾರಣೆಯಾಗಿ ಧನಸಂಪತ್ತು ಎಂಬುದು ವೃದ್ಧಿಯಾಗಲು ಶುರುವಾಗುತ್ತದೆ.

    ಶಂಖವು ವಾಸ್ತುದೋಷವನ್ನು ನಿವಾರಣೆ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ.ಯಾರ ಮನೆಯಲ್ಲಿ ಶಂಖವನ್ನು ಕೈಯಲ್ಲಿ ಹಿಡಿದುಕೊಂಡಿರುವ ಲಕ್ಷ್ಮೀದೇವಿ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸವಾಗಿರುತ್ತಾರೆ ಹಾಗೂ ದುಡ್ಡಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ.
    ಧನ ಸಂಪತ್ತು ವೃದ್ಧಿ ಆಗಲು ತಾಯಿ ಲಕ್ಷ್ಮೀದೇವಿಯ ಜೊತೆಗೆ ಕುಬೇರ ದೇವರ ಫೋಟೋ ಅಥವಾ ವಿಗ್ರಹವಿದ್ದರೆ ತುಂಬಾ ಒಳ್ಳೆಯದು. ಕುಬೇರ ದೇವರು ಉತ್ತರದಿಕ್ಕಿಗೆ ಮಹಾರಾಜರಾಗಿದ್ದಾರೆ, ಆದ್ದರಿಂದ ಕುಬೇರ ದೇವರನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ವಾಸ್ತು ದೋಷವನ್ನು ನಿವಾರಣೆ ಮಾಡಲು ಪ್ರತಿನಿತ್ಯ ಒಂದು ಕರ್ಪೂರವನ್ನು ನಿಯಮಿತವಾಗಿ ಹಚ್ಚುವುದರಿಂದ ಕೆಟ್ಟ ಶಕ್ತಿಗಳು ನಾಶವಾಗುತ್ತದೆ ಹಾಗೂ ವಾಸ್ತು ದೋಷವು ನಿವಾರಣೆಯಾಗುತ್ತದೆ.

  • ಶ್ರೀ ಗುರುರಾಘವೇಂದ್ರರ ಜನ್ಮದ ಹಿಂದಿನ ರಹಸ್ಯಗಳು ಏನು ಎಂಬುದು ತಿಳಿದಿದೆಯೇ ?

    ಶ್ರೀ ಗುರುರಾಘವೇಂದ್ರರ ಜನ್ಮದ ಹಿಂದಿನ ರಹಸ್ಯಗಳು ಏನು ಎಂಬುದು ತಿಳಿದಿದೆಯೇ..ಪವಾಡ ಮಾಡಿದವರೆಲ್ಲಾ ಮಹಾಮಹಿಮರು ಆಗುವುದಿಲ್ಲ, ಯಾರು ದೈವಾಂಶಸಂಭೂತರಾಗಿ ಜನಿಸಿ ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುತ್ತಾರೋ ಅಂತವರು ಮಾತ್ರ ಮಹಾಮಹಿಮರಾಗುವುದು. ಅಂತಹವರಲ್ಲಿ ಗುರುರಾಘವೇಂದ್ರರರೆ ಅಗ್ರ ಗಣ್ಯರು. ಗುರು ರಾಘವೇಂದ್ರರು ದೈವಾಂಶ ಸಂಭೂತರಾಗಿರುವುದರಿಂದ ಗುರು ರಾಘವೇಂದ್ರರನ್ನು ಕಲಿಯುಗದ ಕಾಮಧೇನು ಎಂದು ಕರೆಯಲಾಗುತ್ತದೆ. ಹೀಗೆ ಜನರ ಕಷ್ಟಗಳನ್ನು ನಿವಾರಿಸುತ್ತಾ ಪ್ರತಿಯೊಬ್ಬರ ಮನೆಯಲ್ಲೂ ನೆಲೆಸಿದ್ದಾರೆ. ರಾಘವೇಂದ್ರ ಸ್ವಾಮಿಗಳಾಗಿ ಅವತಾರವನ್ನು ತಾಳುವುದಕ್ಕೆ ಮೊದಲು ಯಾವ ಯಾವ ಅವತಾರವನ್ನು ತಾಳಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಗುರುರಾಘವೇಂದ್ರರು ಮಾಡಿದ ಪವಾಡಗಳು ಬಹಳಷ್ಟಿವೆ ಹಾಗೂ ಇಂದಿಗೂ ಬೃಂದಾವನದಲ್ಲಿ ಗುರುರಾಯರ ಬೆಳಕಿದೆ. ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯು ಇದೆ.ರಾಯರು ಎಂಬ ಹೆಸರಿನಲ್ಲಿ ಬಹಳಷ್ಟು ಶಕ್ತಿ ಇದೆ. ಆದ್ದರಿಂದ ಭಕ್ತಿಯಿಂದ ಗುರು ರಾಯರನ್ನು ಸ್ಮರಿಸಿಕೊಂಡರೆ ಕಷ್ಟಗಳೆಲ್ಲ ದೂರವಾಗುತ್ತದೆ. ಮಂತ್ರಾಲಯದಲ್ಲಿ ಇದ್ದ ಗುರು ರಾಯರೇ ನರಸಿಂಹನ ಅವತಾರಕ್ಕೆ ಕಾರಣಕರ್ತರಾದ ಪ್ರಹ್ಲಾದರು ಎಂಬ ನಂಬಿಕೆ ಇದೆ. ಪೂರ್ವಕಾಲದಲ್ಲಿ ಸೃಷ್ಟಿಕರ್ತನಾದ ಬ್ರಹ್ಮ ದೇವರ ದೇವಗಣದಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮ ದೇವರ ಆಶೀರ್ವಾದದಿಂದ ಭೂಲೋಕದಲ್ಲಿ ಪ್ರಹ್ಲಾದನಾಗಿ ಜನ್ಮವನ್ನು ತಾಳಿದ್ದರು. ಹಿರಣ್ಯ ಕಶುಪಿನ ಸಂಹಾರಕ್ಕೆ ಕಾರಣಕರ್ತರಾದ ರಾಯರು ಲೋಕ ಕಲ್ಯಾಣದ ನಂತರ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಹುಟ್ಟುತ್ತಾರೆ. ವ್ಯಾಸರ ಅವತಾರದ ಬಳಿಕ ಶ್ರೀ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸುತ್ತಾರೆ.

    ಗುರು ರಾಘವೇಂದ್ರರ ಜನನವಾಗಿದ್ದು 16ನೇ ಶತಮಾನದಲ್ಲಿ. ತಿರುಪತಿ ದೇವರ ಅನುಗ್ರಹದಿಂದ ಜನಿಸಿದ ಮಗುವೇ ರಾಘವೇಂದ್ರ ತೀರ್ಥರು.ರಾಘವೇಂದ್ರ ತೀರ್ಥರು ಹಲವಾರು ಕೃತಿಗಳನ್ನು ಸಹ ಬರೆದಿದ್ದಾರೆ. ಮಹಾಭಾರತ ಹಾಗೂ ಇನ್ನಿತರ ಕೃತಿಗಳಿಗೆ ಅರ್ಥ ವಿವರಣೆ ಹಾಗೂ ಭಾಷೆಯಲ್ಲೂ ಕೂಡ ಬರೆದಿದ್ದಾರೆ. ಕಷ್ಟಗಳನ್ನು ಮೆಟ್ಟಿ ನಿಂತ ರಾಯರು ಎಂದಿಗೂ ಇನ್ನೊಬ್ಬರ ಬಳಿ ಕೈಚಾಚಿ ನಿಂತಿದ್ದವರಲ್ಲ. ದೇವರು ಕೊಡುವ ಸಂಪತ್ತು ಬೇಕು ಆದರೆ ದೇವರು ಕೊಡುವ ಬಡತನ ಬೇಡವಾ ಎಂದು ಸಾರಿದವರು ರಾಘವೇಂದ್ರ ತೀರ್ಥರು.

  • ಜೇಷ್ಠ ಮಾಸದ ಹುಣ್ಣಿಮೆ ಹೆಣ್ಣುಮಕ್ಕಳಿಗೆ ವಿಶೇಷವಾಗಿರುವುದು ಏಕೆ ಎಂಬುದು ತಿಳಿದಿದೆಯೇ ?

    ಈ ಗುರುವಾರ ಬರುವ ಜೇಷ್ಠ ಮಾಸದ ಹುಣ್ಣಿಮೆ ತುಂಬಾ ವಿಶೇಷವಾಗಿದೆ. ಮನೆಯಲ್ಲಿ ಲಕ್ಷ್ಮಿ, ಪಾರ್ವತಿ, ಮಹಾಕಾಳಿಯು ಹೆಣ್ಣುಮಕ್ಕಳೇ ಆಗಿರುವುದರಿಂದ ಹೆಣ್ಣುಮಕ್ಕಳಿಗೆ ವಿಶೇಷವಾಗಿದೆ ಈ ಹುಣ್ಣಿಮೆ. ಹಾಗಾದರೆ ಜೇಷ್ಠ ಮಾಸದ ಹುಣ್ಣಿಮೆಯ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ.

    ವಟಸಾವಿತ್ರಿ ವ್ರತವನ್ನು ಮಾಡುವ ಹೆಣ್ಣು ಮಕ್ಕಳಿಗೆ ತುಂಬಾ ಶ್ರೇಷ್ಠವಾದ ಹುಣ್ಣಿಮೆ ಇದಾಗಿದೆ. ಜೇಷ್ಠ ಮಾಸದ ಹುಣ್ಣಿಮೆಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದೇ ಹೆಣ್ಣುಮಕ್ಕಳಿಂದಾಗಿ. ಹುಣ್ಣಿಮೆಯ ದಿನ ನಿಮ್ಮ ಪತಿಯ ಆಯಸ್ಸು, ಆರೋಗ್ಯ ಹಾಗೂ ಪತ್ನಿಯ ಮಾಂಗಲ್ಯವು ವೃದ್ಧಿಯಾಗುವ ವಿಶೇಷವಾದ ಹುಣ್ಣಿಮೆ. ನಿಮ್ಮ ಮನೆಯ ದೇವರ ಕೋಣೆಯನ್ನು ಬಹಳ ಶುದ್ದಿಯಿಂದ ಇಟ್ಟುಕೊಳ್ಳಿ ಹಾಗೂ ನಿಮ್ಮ ಕುಲದೇವರಿಗೆ ಭಕ್ತಿಯಿಂದ, ಶ್ರದ್ಧೆಯಿಂದ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ಹುಣ್ಣಿಮೆಯ ದಿನ ಕೆಂಪು ಮತ್ತು ಬಿಳಿ ಬಣ್ಣದ ಹೂವಿನಿಂದ ಪೂಜೆಯನ್ನು ಮಾಡಬೇಕು. ಒಂದು ತಾಮ್ರದ ಬಟ್ಟಲಿಗೆ 9 ಧನ್ಯವನ್ನು ಹಾಕಿ ದೇವಿಯ ಮುಂದೆ ಇಡಬೇಕು. 5 ಬಗ್ಗೆ ಹೂವು ಹಾಗೂ 5 ಬಗ್ಗೆ ಹಣ್ಣುಗಳನ್ನು ದೇವರ ಮುಂದೆ ಇಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಯಾವುದಾದರೂ ಶ್ಲೋಕಗಳು ಗೊತ್ತಿದ್ದರೆ ಅದನ್ನು ಹೇಳಬಹುದು. ಈ ವಿಧಾನವನ್ನು ಹುಣ್ಣಿಮೆಯ ಒಂದು ದಿನ ಮುಂಚೆ ಮಾಡಿಕೊಳ್ಳಬೇಕು.

    ಹುಣ್ಣಿಮೆ ದಿನ ಮುಂಜಾನೆ ಬೇಗ ಎದ್ದು ಕುಟುಂಬದ ಸದಸ್ಯರೆಲ್ಲರೂ ಒಂದು ಹಳದಿ ದಾರದ ಉಂಡೆಯನ್ನು ತೆಗೆದುಕೊಂಡು ಅಶ್ವಥ್ ಕಟ್ಟೆ ಅಥವಾ ಬನ್ನಿಗಿಡಕ್ಕೆ ಹಳದಿ ಬಣ್ಣದ ದಾರದ ಉಂಡೆಯಿಂದ ಕಟ್ಟಬೇಕು. ಹೀಗೆ ದಾರವನ್ನು ಕಟ್ಟಿದ ಮೇಲೆ ಮೊದಲಿಗೆ ಗೃಹಿಣಿ ನಂತರ ಆಕೆಯ ಪತಿ ತದನಂತರ ಮಕ್ಕಳು 12 ಬಾರಿ ದಾರದ ಸುತ್ತ ಸುತ್ತಬೇಕು. ಪ್ರದಕ್ಷಿಣೆಯನ್ನು ಹಾಕಿದ ನಂತರ ಫಲ ಪುಷ್ಪಗಳಿಂದ ಪೂಜೆಯನ್ನು ಮಾಡಬೇಕು. ವೃಕ್ಷಕ್ಕೆ ಪೂಜೆಯನ್ನು ಮಾಡಬೇಕಾದರೆ ಸಾವಿತ್ರಿ ದೇವಿಯನ್ನು, ಯಮ ದೇವರನ್ನು, ಬ್ರಹ್ಮ ದೇವರನ್ನು ಸ್ಮರಿಸಿಕೊಂಡು ಪೂಜೆಯನ್ನು ಮಾಡಬೇಕು.ಪೂಜೆ ಮಾಡಿದ ಬಳಿಕ ಸಮಯವಿದ್ದರೆ ವಿಷ್ಣುಸಹಸ್ರನಾಮ, ಶಿವ ಸ್ತೋತ್ರ ಪಠಿಸುವುದರಿಂದ ಸಕಲ ಸಂಕಷ್ಟಗಳು, ಕಂಟಕಗಳು ದೂರವಾಗುತ್ತದೆ. ಇದರ ಜೊತೆಗೆ ಮನೆ ಯಜಮಾನನ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಹುಣ್ಣಿಮೆಯ ದಿನ ಗಂಡು ಮಕ್ಕಳು ಯಾವುದೇ ರೀತಿಯ ದುಶ್ಚಟಗಳಿಗೆ ಹೋಗಬಾರದು. ಹುಣ್ಣಿಮೆ ದಿನ ಕುಟುಂಬದ ಸದಸ್ಯರ ಜೊತೆ ಇದ್ದು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳನ್ನು ನೆರವೇರುತ್ತದೆ.

  • ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು

    ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು..ಒಂದು ವೇಳೆ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಈ 5 ಕೆಲಸಗಳನ್ನು ಮಾಡಿದರೆ ಸಾಕು. ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಇಚ್ಛೆಗಳು ಈಡೇರುತ್ತದೆ. ಸಾಲದ ಸುಳಿಯಲ್ಲಿ ಸಿಕ್ಕಿ ಕಷ್ಟಪಡುತ್ತಿದ್ದರೆ ಒಂದು ಬಾರಿ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಕೇವಲ 10 ದಿನದ ಒಳಗಾಗಿ ಪರಿಹಾರವು ಲಭಿಸುತ್ತದೆ.ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಿಗುವ ಪ್ರತಿಫಲಗಳು ನಿಮ್ಮ ಕಲ್ಪನೆಗಳಿಗೂ ಮೀರಿರುತ್ತದೆ. ಪ್ರತಿ ಮಂಗಳವಾರ ಹಾಗೂ ಶನಿವಾರದಂದು ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತರಾಗಬಹುದು ಅದುವೇ ಕೇವಲ 2 ರಿಂದ 3 ದಿನಗಳಲ್ಲಿ.ಇರುವೆಗಳಿಗೆ ತಿನ್ನಲು ಸಿಹಿತಿಂಡಿಯನ್ನು ಕೊಟ್ಟರೆ ಜೀವನದಲ್ಲಿ ಎಲ್ಲಾ ರೀತಿಯ ಕೋರಿಕೆಗಳು ಹಾಗೂ ಇಚ್ಛೆಗಳು ನೆರವೇರುತ್ತದೆ. ಪ್ರತಿ ಮಂಗಳವಾರದಂದು ಕೋತಿಗಳಿಗೆ ಹಣ್ಣುಗಳನ್ನು ನೀಡುವುದರಿಂದ ಜೀವನದಲ್ಲಿ ಇರುವಂತಹ ಅತ್ಯಂತ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ. ಕೋತಿಗೆ ಹಣ್ಣುಗಳನ್ನು ನೀಡುವುದರಿಂದ ಭಜರಂಗಿ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ನಾಯಿಗಳಿಗೆ ರೊಟ್ಟಿಯನ್ನು ಅಥವಾ ಬಿಸ್ಕತ್ ಕೊಡುವುದರಿಂದ ಸಾಲದಿಂದ ಮುಕ್ತಿ ದೊರೆಯುತ್ತದೆ ಅದರ ಜೊತೆಗೆ ಮನೆಯಲ್ಲಿ ನಡೆಯುವಂತಹ ಕಲಹಗಳು ಹಾಗೂ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ.

    ಗೋಮಾತೆಯಲ್ಲಿ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ. ಹಾಗಾಗಿ ಹಸುವನ್ನು ಗೋಮಾತೆಯೆಂದು ಕರೆಯಲಾಗುತ್ತದೆ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಅಥವಾ ಚಪಾತಿಯನ್ನು ಗೋಮಾತೆಗೆ ತಿನ್ನಿಸುವುದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.ಒಂದು ವೇಳೆ ಯಾವುದಾದರೂ ವಿಷಯದಿಂದ ನಿಮಗೆ ಭಯವಾಗುತ್ತಿದ್ದಾರೆ ಅಥವಾ ಚಿಂತೆಗಳು ಕಾಡುತ್ತಿದ್ದರೆ 5 ಬೇಸನ್ ಲಡ್ಡುಗಳನ್ನು ತೆಗೆದುಕೊಂಡು ತಲೆ ಮೇಲೆ ಏಳು ಬಾರಿ ಸುತ್ತು ಹಾಕಿ ಕಪ್ಪು ಬಣ್ಣದ ಗೋಮಾತೆಗೆ ತಿನ್ನಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಲದಿಂದ ಮುಕ್ತಿಯನ್ನು ಹೊಂದುವುದಲ್ಲದೆ ನಿಮ್ಮ ಪಾಪಗಳಿಂದ ಮುಕ್ತವಾಗಬಹುದು. ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಒಂದು ಬಾರಿ ಈ ಉಪಾಯವನ್ನು ಮಾಡಿ ನೋಡಿ ಬದಲಾವಣೆಯನ್ನು ನಿಮ್ಮ ಕಣ್ಣ ಮುಂದೆ ಕಾಣಬಹುದು.

  • ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು

    ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು..ಒಂದು ವೇಳೆ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಈ 5 ಕೆಲಸಗಳನ್ನು ಮಾಡಿದರೆ ಸಾಕು. ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಇಚ್ಛೆಗಳು ಈಡೇರುತ್ತದೆ. ಸಾಲದ ಸುಳಿಯಲ್ಲಿ ಸಿಕ್ಕಿ ಕಷ್ಟಪಡುತ್ತಿದ್ದರೆ ಒಂದು ಬಾರಿ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಕೇವಲ 10 ದಿನದ ಒಳಗಾಗಿ ಪರಿಹಾರವು ಲಭಿಸುತ್ತದೆ.ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಿಗುವ ಪ್ರತಿಫಲಗಳು ನಿಮ್ಮ ಕಲ್ಪನೆಗಳಿಗೂ ಮೀರಿರುತ್ತದೆ. ಪ್ರತಿ ಮಂಗಳವಾರ ಹಾಗೂ ಶನಿವಾರದಂದು ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತರಾಗಬಹುದು ಅದುವೇ ಕೇವಲ 2 ರಿಂದ 3 ದಿನಗಳಲ್ಲಿ.ಇರುವೆಗಳಿಗೆ ತಿನ್ನಲು ಸಿಹಿತಿಂಡಿಯನ್ನು ಕೊಟ್ಟರೆ ಜೀವನದಲ್ಲಿ ಎಲ್ಲಾ ರೀತಿಯ ಕೋರಿಕೆಗಳು ಹಾಗೂ ಇಚ್ಛೆಗಳು ನೆರವೇರುತ್ತದೆ. ಪ್ರತಿ ಮಂಗಳವಾರದಂದು ಕೋತಿಗಳಿಗೆ ಹಣ್ಣುಗಳನ್ನು ನೀಡುವುದರಿಂದ ಜೀವನದಲ್ಲಿ ಇರುವಂತಹ ಅತ್ಯಂತ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ. ಕೋತಿಗೆ ಹಣ್ಣುಗಳನ್ನು ನೀಡುವುದರಿಂದ ಭಜರಂಗಿ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ನಾಯಿಗಳಿಗೆ ರೊಟ್ಟಿಯನ್ನು ಅಥವಾ ಬಿಸ್ಕತ್ ಕೊಡುವುದರಿಂದ ಸಾಲದಿಂದ ಮುಕ್ತಿ ದೊರೆಯುತ್ತದೆ ಅದರ ಜೊತೆಗೆ ಮನೆಯಲ್ಲಿ ನಡೆಯುವಂತಹ ಕಲಹಗಳು ಹಾಗೂ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ.

    ಗೋಮಾತೆಯಲ್ಲಿ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ. ಹಾಗಾಗಿ ಹಸುವನ್ನು ಗೋಮಾತೆಯೆಂದು ಕರೆಯಲಾಗುತ್ತದೆ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಅಥವಾ ಚಪಾತಿಯನ್ನು ಗೋಮಾತೆಗೆ ತಿನ್ನಿಸುವುದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.ಒಂದು ವೇಳೆ ಯಾವುದಾದರೂ ವಿಷಯದಿಂದ ನಿಮಗೆ ಭಯವಾಗುತ್ತಿದ್ದಾರೆ ಅಥವಾ ಚಿಂತೆಗಳು ಕಾಡುತ್ತಿದ್ದರೆ 5 ಬೇಸನ್ ಲಡ್ಡುಗಳನ್ನು ತೆಗೆದುಕೊಂಡು ತಲೆ ಮೇಲೆ ಏಳು ಬಾರಿ ಸುತ್ತು ಹಾಕಿ ಕಪ್ಪು ಬಣ್ಣದ ಗೋಮಾತೆಗೆ ತಿನ್ನಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಲದಿಂದ ಮುಕ್ತಿಯನ್ನು ಹೊಂದುವುದಲ್ಲದೆ ನಿಮ್ಮ ಪಾಪಗಳಿಂದ ಮುಕ್ತವಾಗಬಹುದು. ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಒಂದು ಬಾರಿ ಈ ಉಪಾಯವನ್ನು ಮಾಡಿ ನೋಡಿ ಬದಲಾವಣೆಯನ್ನು ನಿಮ್ಮ ಕಣ್ಣ ಮುಂದೆ ಕಾಣಬಹುದು.

  • ದುಷ್ಟಶಕ್ತಿಯನ್ನು ನಾಶಮಾಡುತ್ತದೆ ಕಪ್ಪು ದಾರ.

    ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಹುಟ್ಟಿದರೆ ಮಕ್ಕಳಿಗೆ ಕಪ್ಪು ದಾರವನ್ನು ಅಥವಾ ಕಪ್ಪು ಬೊಟ್ಟನ್ನು ಇಡಲಾಗುತ್ತದೆ ಮತ್ತು ದೃಷ್ಟಿ ತೆಗೆಯುವಂತಹ ಕೆಲಸಗಳನ್ನು ಸಹ ಮಾಡಲಾಗುತ್ತದೆ. ಆದರೆ ಯಾಕೆ ಈ ರೀತಿ ಮಾಡುತ್ತಾರೆ ಎಂಬ ಹಿಂದಿನ ರಹಸ್ಯವನ್ನು ತಿಳಿದುಕೊಂಡಿದ್ದೀರಾ. ಹಾಗಾದರೆ ಕಪ್ಪು ದಾರ ದಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದಾದರೂ ದುಷ್ಟಶಕ್ತಿ ಅನುಭವ ಆಗುತ್ತಿದ್ದರೆ ಅದರ ಕುಟುಂಬದಲ್ಲಿ ಅಶಾಂತಿಯ ಭಾವನೆಯು ನಿಮಗೆ ಮೂಡುತ್ತಿದ್ದರೆ ಕಪ್ಪು ದಾರದಿಂದ ಹಲವು ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಕಪ್ಪು ಬಣ್ಣ ನಕಾರಾತ್ಮ ಶಕ್ತಿಯನ್ನು ನಾಶ ಮಾಡುವ ಗುಣವನ್ನು ಹೊಂದಿರುತ್ತದೆ. ದುಷ್ಟಶಕ್ತಿಗಳಿಂದ ದೂರ ಇರಲು ಕಪ್ಪುದಾರ ತಪ್ಪು ಕೊಟ್ಟು ಹೀಗೆ ಕಪ್ಪುಬಣ್ಣದ ವಸ್ತುಗಳಿಂದ ಕೆಟ್ಟ ಶಕ್ತಿಗಳನ್ನು ದೂರವಿಡಲು ಕಪ್ಪು ದಾರ ತುಂಬಾ ಸಹಾಯಕಾರಿಯಾಗಿದೆ.

    ಒಂದು ವೇಳೆ ನಿಮ್ಮ ಮನೆಯಲ್ಲಿ ಪ್ರತಿನಿತ್ಯ ಕಲಹಗಳು ಉಂಟಾಗುತ್ತಿದ್ದು ಅದರಿಂದ ಬೇಸತ್ತಿದ್ದರೆ ಶನಿವಾರದ ದಿನದಂದು ಶನೇಶ್ವರನ ದೇವಸ್ಥಾನಕ್ಕೆ ಹೋಗಿ 1ಮೀಟರ್ ಕಪ್ಪು ದಾರವನ್ನು ತೆಗೆದುಕೊಂಡು 108 ಗಂಟನ್ನು ಕಟ್ಟಬೇಕು. ಈಗ ಪ್ರತಿಯೊಂದು ಗಂಟನ್ನು ಕಟ್ಟುವಾಗ ಓಂ ಶನೇಶ್ವರಾಯ ನಮಃ ಎಂದು ಜಪ ಮಾಡಿಕೊಂಡು
    ಕಟ್ಟಬೇಕು. ನಂತರ ಈ ಕಪ್ಪು ದಾರವನ್ನು ಮನೆಯ ಮುಖ್ಯದ್ವಾರದ ಬಳಿ ಕಟ್ಟಬೇಕು ಇದರಿಂದ ಕೆಟ್ಟ ದೃಷ್ಟಿಗಳು ದುಷ್ಟಶಕ್ತಿಗಳು ನನಗೆ ಪ್ರವೇಶವನ್ನು ಮಾಡುವುದಿಲ್ಲ.ಮನೇಲಿ ಕುಟುಂಬದವರ ಆರೋಗ್ಯ ಪದೇಪದೇ ಹದೆಗೆಡುತ್ತಿದ್ದರೆ, ಕಪ್ಪು ದಾರವನ್ನು ಮಂದಿರಕ್ಕೆ ತೆಗೆದುಕೊಂಡು ಹೋಗಿ ಸ್ವಲ್ಪ ಸಿಂಧೂರವನ್ನು ಹಚ್ಚಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು, ಎಂಟನೇ ದಿನ ಈ ಕಪ್ಪು ದಾರವನ್ನು ಕುಟುಂಬದ ಸದಸ್ಯರ ಕಾಲಿಗೆ ಕಟ್ಟಬೇಕು. ಇದರಿಂದ ಇನ್ನೊಬ್ಬರ ಕೆಟ್ಟದೃಷ್ಟಿ ಯು ಅವರನ್ನು ಸ್ಪರ್ಶ ಮಾಡುವುದಿಲ್ಲ.

    ಗರ್ಭಿಣಿ ಸ್ತ್ರೀಯರಿಗೆ ದೃಷ್ಟಿಯಾಗುವುದು ಸರ್ವೇ ಸಾಮಾನ್ಯ ಆದ್ದರಿಂದ ಕಪ್ಪು ದಾರವನ್ನು ಗರ್ಭಿಣಿ ಸ್ತ್ರೀಯರ ಸುತ್ತಳತೆಯ ಪ್ರಕಾರ ತೆಗೆದುಕೊಂಡು ತಲೆ ಮೇಲೆ ಮೂರು ಬಾರಿ ಸುತ್ತಿಸಿ ಯಾವುದಾದರೂ ಮರಕ್ಕೆ ಕಟ್ಟಬೇಕು ಅಥವಾ ಹರಿಯುವ ನದಿಗೆ ಆ ಕಪ್ಪು ದಾರವನ್ನು ಬಿಡಬೇಕು. ಈ ರೀತಿಯಾಗಿ ಮಾಡುವುದರಿಂದ ಗರ್ಭಿಣಿ ಸ್ತ್ರೀಯರ ಹಾಕಬೇಕಾದುದು ಯಾವುದೇ ರೀತಿಯ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ.

  • ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ.

    ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ..ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ ಮನುಷ್ಯನಿಗೆ ಕಷ್ಟದ ದಿನಗಳು ಪ್ರಾರಂಭವಾಗುವ ಮುನ್ನ ಕೆಲವು ಸಂಕೇತಗಳು ದೊರೆಯುತ್ತದೆ. ಈ ರೀತಿಯಾಗಿ ಸೂಚನೆಗಳು ಸಿಕ್ಕಾಗ ಮನುಷ್ಯನು ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಮನುಷ್ಯನ ಕರ್ಮಗಳ ಅನುಸಾರವಾಗಿ ಒಳ್ಳೆಯ t ಹಾಗೂ ಕೆಟ್ಟ ಫಲಗಳು ಲಭಿಸುತ್ತದೆ. ಆದ್ದರಿಂದ ಭಗವಂತ ನಮ್ಮ ಕರ್ಮಗಳ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ ಎಂದು ಭಾವಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಕೆಲವು ವಸ್ತುಗಳು ನಮಗೆ ಕೆಟ್ಟ ಸಮಯ ಶುರುವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

    ತುಳಸಿ ಗಿಡವು ದೈವಿಕ ಶಕ್ತಿಯನ್ನು ಹೊಂದಿದೆ. ಯಾರ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭವಾಗುತ್ತದೆಯೋ ಆ ಮನೆಯಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ತುಳಸಿ ಗಿಡ ಒಣಗಲು ಪ್ರಾರಂಭವಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ತುಳಸಿ ಗಿಡ ಒಣಗಿದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಗಿಡವನ್ನು ಬದಲಾಯಿಸಬೇಕು.

    ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ,ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆಯೋ ಆ ಮನೆಯವರು ನೀಡಿದ ಆಹಾರವನ್ನು ಗೋಮಾತೆಯು ತಿನ್ನುವುದಿಲ್ಲ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿರುವ ಹಾಲು ಪದೇಪದೇ ಕೈಜಾರಿ ಚೆಲ್ಲುತ್ತಿದ್ದರು ಕಷ್ಟದ ಸಮಯಗಳು ಸಮೀಪ ಬಂದಿದೆ ಎಂಬುದನ್ನು ಸೂಚಿಸುತ್ತದೆ.

    ಮನೆಯ ಮೇಲ್ಚಾವಣಿಯ ಮೇಲೆ ಪದೇ ಪದೇ ಪಕ್ಷಿಗಳು ಸಾವನ್ನಪ್ಪುತ್ತಿದ್ದಾರೆ ಅಪಶಕುನ ಎಂದು ಭಾವಿಸಲಾಗುತ್ತದೆ. ದೇವರಿಗೆ ಪೂಜೆ ಮಾಡಬೇಕಾದರೆ ಆರತಿ ತಟ್ಟೆಯು ಪದೇಪದೇ ಕೈಜಾರಿ ಬೀಳುತ್ತಿದ್ದರೆ ಪೂಜೆಯಲ್ಲಿ ಏನೋ ದೋಷವಾಗಿದೆ ಅಥವಾ ಮುಂದಿನ ದಿನಗಳು ಕಷ್ಟಕರವಾಗಲಿದೆ ಜಾಗರೂಕತೆಯಿಂದ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ.

    ಮನೆಯಲ್ಲಿ ಪ್ರತಿನಿತ್ಯ ಅತ್ತೆ ಸೊಸೆಯ ನಡುವೆ, ತಂದೆ ಮಕ್ಕಳ ನಡುವೆ ಕಲಹಗಳು ನಡೆಯುತ್ತಿದ್ದರೆ ಕೆಟ್ಟ ಸಮಯ ಹತ್ತಿರ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹೆಂಗಸರು ಕುಂಕುಮವನ್ನು ಇಟ್ಟುಕೊಳ್ಳುವಾಗ ಪದೇಪದೇ ಸಿಂಧೂರ ಕೈಜಾರಿ ಬೀಳುತ್ತಿದ್ದರೆ ಗಂಡನಿಗೆ ಉದ್ಯೋಗದಲ್ಲಿ ಹಾಗೂ ವ್ಯಾಪಾರದಲ್ಲಿ ತುಂಬಾ ನಷ್ಟವೂ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸೂಚನೆಗಳು ದೊರೆತಾಗ ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳಬೇಕು. ಕುಲದೇವರು ಅಥವಾ ಮನೆ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಕಡಿಮೆಯಾಗುತ್ತದೆ.

  • ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ.

    ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ..ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ ಮನುಷ್ಯನಿಗೆ ಕಷ್ಟದ ದಿನಗಳು ಪ್ರಾರಂಭವಾಗುವ ಮುನ್ನ ಕೆಲವು ಸಂಕೇತಗಳು ದೊರೆಯುತ್ತದೆ. ಈ ರೀತಿಯಾಗಿ ಸೂಚನೆಗಳು ಸಿಕ್ಕಾಗ ಮನುಷ್ಯನು ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಮನುಷ್ಯನ ಕರ್ಮಗಳ ಅನುಸಾರವಾಗಿ ಒಳ್ಳೆಯ t ಹಾಗೂ ಕೆಟ್ಟ ಫಲಗಳು ಲಭಿಸುತ್ತದೆ. ಆದ್ದರಿಂದ ಭಗವಂತ ನಮ್ಮ ಕರ್ಮಗಳ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ ಎಂದು ಭಾವಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಕೆಲವು ವಸ್ತುಗಳು ನಮಗೆ ಕೆಟ್ಟ ಸಮಯ ಶುರುವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.

    ತುಳಸಿ ಗಿಡವು ದೈವಿಕ ಶಕ್ತಿಯನ್ನು ಹೊಂದಿದೆ. ಯಾರ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭವಾಗುತ್ತದೆಯೋ ಆ ಮನೆಯಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ತುಳಸಿ ಗಿಡ ಒಣಗಲು ಪ್ರಾರಂಭವಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ತುಳಸಿ ಗಿಡ ಒಣಗಿದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಗಿಡವನ್ನು ಬದಲಾಯಿಸಬೇಕು.

    ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ,ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆಯೋ ಆ ಮನೆಯವರು ನೀಡಿದ ಆಹಾರವನ್ನು ಗೋಮಾತೆಯು ತಿನ್ನುವುದಿಲ್ಲ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿರುವ ಹಾಲು ಪದೇಪದೇ ಕೈಜಾರಿ ಚೆಲ್ಲುತ್ತಿದ್ದರು ಕಷ್ಟದ ಸಮಯಗಳು ಸಮೀಪ ಬಂದಿದೆ ಎಂಬುದನ್ನು ಸೂಚಿಸುತ್ತದೆ.

    ಮನೆಯ ಮೇಲ್ಚಾವಣಿಯ ಮೇಲೆ ಪದೇ ಪದೇ ಪಕ್ಷಿಗಳು ಸಾವನ್ನಪ್ಪುತ್ತಿದ್ದಾರೆ ಅಪಶಕುನ ಎಂದು ಭಾವಿಸಲಾಗುತ್ತದೆ. ದೇವರಿಗೆ ಪೂಜೆ ಮಾಡಬೇಕಾದರೆ ಆರತಿ ತಟ್ಟೆಯು ಪದೇಪದೇ ಕೈಜಾರಿ ಬೀಳುತ್ತಿದ್ದರೆ ಪೂಜೆಯಲ್ಲಿ ಏನೋ ದೋಷವಾಗಿದೆ ಅಥವಾ ಮುಂದಿನ ದಿನಗಳು ಕಷ್ಟಕರವಾಗಲಿದೆ ಜಾಗರೂಕತೆಯಿಂದ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ.

    ಮನೆಯಲ್ಲಿ ಪ್ರತಿನಿತ್ಯ ಅತ್ತೆ ಸೊಸೆಯ ನಡುವೆ, ತಂದೆ ಮಕ್ಕಳ ನಡುವೆ ಕಲಹಗಳು ನಡೆಯುತ್ತಿದ್ದರೆ ಕೆಟ್ಟ ಸಮಯ ಹತ್ತಿರ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹೆಂಗಸರು ಕುಂಕುಮವನ್ನು ಇಟ್ಟುಕೊಳ್ಳುವಾಗ ಪದೇಪದೇ ಸಿಂಧೂರ ಕೈಜಾರಿ ಬೀಳುತ್ತಿದ್ದರೆ ಗಂಡನಿಗೆ ಉದ್ಯೋಗದಲ್ಲಿ ಹಾಗೂ ವ್ಯಾಪಾರದಲ್ಲಿ ತುಂಬಾ ನಷ್ಟವೂ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸೂಚನೆಗಳು ದೊರೆತಾಗ ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳಬೇಕು. ಕುಲದೇವರು ಅಥವಾ ಮನೆ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಕಡಿಮೆಯಾಗುತ್ತದೆ.

  • ಪೂಜೆ ಮಾಡಿದ ನಂತರ ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದರ ಬಗ್ಗೆ ಅರಿವಿದೆಯೇ ?

    ಹಿಂದೂ ಧರ್ಮದಲ್ಲಿ ದೇವರನ್ನು ಪೂಜೆಯನ್ನು ಮಾಡುವುದಕ್ಕೆ ವಿಶೇಷವಾದ ಪದ್ಧತಿಯಿದೆ. ಪೂಜೆ ಮಾಡಬೇಕಾದಾಗ ಹಾಗೂ ಪೂಜೆಮಾಡಿದ ನಂತರವೂ ಹಲವು ನಿಯಮಗಳಿವೆ. ಈ ಎಲ್ಲಾ ನಿಯಮಗಳನ್ನು ಪಾಲಿಸಿದ್ದೆ ಆದಲ್ಲಿ ನಾವು ಮಾಡಿದ ಪೂಜೆಯು ಸಾರ್ಥಕವಾಗುವುದು. ಹಾಗಾದರೆ ದೇವಾನುದೇವತೆಗಳು ಅನುಗ್ರಹ ನಮ್ಮ ಮೇಲೆ ಇರಬೇಕೆಂದರೆ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಯಾವುದೇ ದೇವಸ್ಥಾನಕ್ಕೆ ಹೋದರು ಪೂಜೆಯನ್ನು ಮಾಡಿಸಿದ ನಂತರ ಯಾವುದೇ ಕಾರಣಕ್ಕೂ ಈ ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಮೊದಲಿಗೆ ದೇವರ ಪೂಜೆ ಮಾಡಿದ ನಂತರ ಶಂಖನಾದವನ್ನು ಮಾಡಿ ಆರತಿಯನ್ನು ಮಾಡಬೇಕು. ಆರತಿಯನ್ನು ಸ್ವೀಕರಿಸಿದ ಬಳಿಕ ವಿಭೂತಿಯನ್ನು ಹಚ್ಚಿಕೊಂಡು ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆಯನ್ನು ಮಾಡಬೇಕಾದರೆ ಶುದ್ಧ ಮನಸ್ಸಿನಿಂದ ನಿಸ್ವಾರ್ಥ ಭಾವನೆಯಿಂದ ಬೇಡಿಕೊಳ್ಳಬೇಕು. ದೇವಸ್ಥಾನದಲ್ಲಿ ತೀರ್ಥವನ್ನು ಮೂರು ಬಾರಿ ಕೊಡಲಾಗುತ್ತದೆ. ಬಲ ಕೈಯಿಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಭಗವಂತನನ್ನು ಮನದಲ್ಲಿ ನೆನೆಯುತ್ತಾ ಸೇವಿಸಬೇಕು. ತೀರ್ಥವನ್ನು ಸೇವಿಸಿದ ನಂತರ ಬಲ ಕೈಯನ್ನು ಹಣೆಯ ಭಾಗದಿಂದ ತಲೆ ಮೇಲೆ ಸವರಿಕೊಳ್ಳಬೇಕು.

    ಹಿಂದೂ ಶಾಸ್ತ್ರದ ಪ್ರಕಾರ ಮಾನವನ ಅಂಗೈಯಲ್ಲಿ 3 ತೀರ್ಥ ಸ್ಥಾನಗಳಿರುತ್ತವೆ. ಅಂಗೈಯ ಮಧ್ಯಭಾಗದಲ್ಲಿ ಬ್ರಹ್ಮ ತೀರ್ಥ, ಕಿರುಬೆರಳಿನ ಕೆಳಗಡೆ ಋಷಿ ತೀರ್ಥ, ಹೆಬ್ಬೆರಳಿನ ನಡುವೆ ಪಿತೃ ತೀರ್ಥವಿರುತ್ತದೆ. ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸುವ ಮುನ್ನ ಪ್ರದಕ್ಷಿಣೆ ಹಾಕುವುದನ್ನು ಮರೆಯಬೇಡಿ. 3,5 ಅಥವಾ 9 ಸುತ್ತು ಸುತ್ತಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆ ಹಾಕಿದ ನಂತರ ದೇವರ ಪ್ರಸಾದವನ್ನು ಎರಡು ಕಣ್ಣಿಗೆ ಒತ್ತಿಕೊಂಡು ಸೇವಿಸಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುದು ಖಂಡಿತ ಸಿಗುತ್ತದೆ.ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಥವಾ ದೇವಸ್ಥಾನಕ್ಕೆ ಹೋದಾಗ ಪೂಜೆಯನ್ನು ಮಾಡಿಸಿದ ನಂತರ ಮತ್ತು ಪ್ರಸಾದವನ್ನು ಸೇವಿಸಿದ ನಂತರ ಒಂದೆರಡು ನಿಮಿಷ ಕುಳಿತುಕೊಂಡು ಅನಂತರ ತೆರಳಬಹುದು. ಕೆಲವರು ಪ್ರತಿದಿನ ದೇವರ ಪೂಜೆಯನ್ನು ಮಾಡಿದ ನಂತರ ಹಿರಿಯರ ಕಾಲಿಗೆ ನಮಸ್ಕಾರ ಮಾಡುವ ಪದ್ಧತಿಯನ್ನು ಇಟ್ಟುಕೊಂಡಿರುತ್ತಾರೆ. ಹಿರಿಯರಿಗೆ ನಮಸ್ಕಾರ ಮಾಡುವಾಗ ಮೊದಲಿಗೆ ಬಲ ಕಾಲನ್ನು ಬಲ ಕೈಯಿಂದ ಮುಟ್ಟಿ, ಹಾಗೆಯೇ ಎಡ ಕಾಲನ್ನು ಎಡ ಕೈಯಿಂದ ಮುಟ್ಟಿ ನಮಸ್ಕರಿಸಿ. ಹೀಗೆ ಮಾಡಿದರೆ ಮಾತ್ರ ಹಿರಿಯರ ಆಶೀರ್ವಾದ ಫಲಪ್ರದವಾಗುತ್ತದೆ.