Your cart is currently empty!
Author: 53721pwpadmin
ಜೇಷ್ಠ ಮಾಸದ ಹುಣ್ಣಿಮೆ ಹೆಣ್ಣುಮಕ್ಕಳಿಗೆ ವಿಶೇಷವಾಗಿರುವುದು ಏಕೆ ಎಂಬುದು ತಿಳಿದಿದೆಯೇ ?
ಈ ಗುರುವಾರ ಬರುವ ಜೇಷ್ಠ ಮಾಸದ ಹುಣ್ಣಿಮೆ ತುಂಬಾ ವಿಶೇಷವಾಗಿದೆ. ಮನೆಯಲ್ಲಿ ಲಕ್ಷ್ಮಿ, ಪಾರ್ವತಿ, ಮಹಾಕಾಳಿಯು ಹೆಣ್ಣುಮಕ್ಕಳೇ ಆಗಿರುವುದರಿಂದ ಹೆಣ್ಣುಮಕ್ಕಳಿಗೆ ವಿಶೇಷವಾಗಿದೆ ಈ ಹುಣ್ಣಿಮೆ. ಹಾಗಾದರೆ ಜೇಷ್ಠ ಮಾಸದ ಹುಣ್ಣಿಮೆಯ ವಿಶೇಷತೆಯನ್ನು ತಿಳಿದುಕೊಳ್ಳೋಣ ಬನ್ನಿ.
ವಟಸಾವಿತ್ರಿ ವ್ರತವನ್ನು ಮಾಡುವ ಹೆಣ್ಣು ಮಕ್ಕಳಿಗೆ ತುಂಬಾ ಶ್ರೇಷ್ಠವಾದ ಹುಣ್ಣಿಮೆ ಇದಾಗಿದೆ. ಜೇಷ್ಠ ಮಾಸದ ಹುಣ್ಣಿಮೆಯ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವುದೇ ಹೆಣ್ಣುಮಕ್ಕಳಿಂದಾಗಿ. ಹುಣ್ಣಿಮೆಯ ದಿನ ನಿಮ್ಮ ಪತಿಯ ಆಯಸ್ಸು, ಆರೋಗ್ಯ ಹಾಗೂ ಪತ್ನಿಯ ಮಾಂಗಲ್ಯವು ವೃದ್ಧಿಯಾಗುವ ವಿಶೇಷವಾದ ಹುಣ್ಣಿಮೆ. ನಿಮ್ಮ ಮನೆಯ ದೇವರ ಕೋಣೆಯನ್ನು ಬಹಳ ಶುದ್ದಿಯಿಂದ ಇಟ್ಟುಕೊಳ್ಳಿ ಹಾಗೂ ನಿಮ್ಮ ಕುಲದೇವರಿಗೆ ಭಕ್ತಿಯಿಂದ, ಶ್ರದ್ಧೆಯಿಂದ ಪೂಜೆಯನ್ನು ಮಾಡಬೇಕು. ವಿಶೇಷವಾಗಿ ಹುಣ್ಣಿಮೆಯ ದಿನ ಕೆಂಪು ಮತ್ತು ಬಿಳಿ ಬಣ್ಣದ ಹೂವಿನಿಂದ ಪೂಜೆಯನ್ನು ಮಾಡಬೇಕು. ಒಂದು ತಾಮ್ರದ ಬಟ್ಟಲಿಗೆ 9 ಧನ್ಯವನ್ನು ಹಾಕಿ ದೇವಿಯ ಮುಂದೆ ಇಡಬೇಕು. 5 ಬಗ್ಗೆ ಹೂವು ಹಾಗೂ 5 ಬಗ್ಗೆ ಹಣ್ಣುಗಳನ್ನು ದೇವರ ಮುಂದೆ ಇಡಬೇಕು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಯಾವುದಾದರೂ ಶ್ಲೋಕಗಳು ಗೊತ್ತಿದ್ದರೆ ಅದನ್ನು ಹೇಳಬಹುದು. ಈ ವಿಧಾನವನ್ನು ಹುಣ್ಣಿಮೆಯ ಒಂದು ದಿನ ಮುಂಚೆ ಮಾಡಿಕೊಳ್ಳಬೇಕು.
ಹುಣ್ಣಿಮೆ ದಿನ ಮುಂಜಾನೆ ಬೇಗ ಎದ್ದು ಕುಟುಂಬದ ಸದಸ್ಯರೆಲ್ಲರೂ ಒಂದು ಹಳದಿ ದಾರದ ಉಂಡೆಯನ್ನು ತೆಗೆದುಕೊಂಡು ಅಶ್ವಥ್ ಕಟ್ಟೆ ಅಥವಾ ಬನ್ನಿಗಿಡಕ್ಕೆ ಹಳದಿ ಬಣ್ಣದ ದಾರದ ಉಂಡೆಯಿಂದ ಕಟ್ಟಬೇಕು. ಹೀಗೆ ದಾರವನ್ನು ಕಟ್ಟಿದ ಮೇಲೆ ಮೊದಲಿಗೆ ಗೃಹಿಣಿ ನಂತರ ಆಕೆಯ ಪತಿ ತದನಂತರ ಮಕ್ಕಳು 12 ಬಾರಿ ದಾರದ ಸುತ್ತ ಸುತ್ತಬೇಕು. ಪ್ರದಕ್ಷಿಣೆಯನ್ನು ಹಾಕಿದ ನಂತರ ಫಲ ಪುಷ್ಪಗಳಿಂದ ಪೂಜೆಯನ್ನು ಮಾಡಬೇಕು. ವೃಕ್ಷಕ್ಕೆ ಪೂಜೆಯನ್ನು ಮಾಡಬೇಕಾದರೆ ಸಾವಿತ್ರಿ ದೇವಿಯನ್ನು, ಯಮ ದೇವರನ್ನು, ಬ್ರಹ್ಮ ದೇವರನ್ನು ಸ್ಮರಿಸಿಕೊಂಡು ಪೂಜೆಯನ್ನು ಮಾಡಬೇಕು.
ಪೂಜೆ ಮಾಡಿದ ಬಳಿಕ ಸಮಯವಿದ್ದರೆ ವಿಷ್ಣುಸಹಸ್ರನಾಮ, ಶಿವ ಸ್ತೋತ್ರ ಪಠಿಸುವುದರಿಂದ ಸಕಲ ಸಂಕಷ್ಟಗಳು, ಕಂಟಕಗಳು ದೂರವಾಗುತ್ತದೆ. ಇದರ ಜೊತೆಗೆ ಮನೆ ಯಜಮಾನನ ಆಯಸ್ಸು, ಆರೋಗ್ಯ ವೃದ್ಧಿಯಾಗುತ್ತದೆ. ಹುಣ್ಣಿಮೆಯ ದಿನ ಗಂಡು ಮಕ್ಕಳು ಯಾವುದೇ ರೀತಿಯ ದುಶ್ಚಟಗಳಿಗೆ ಹೋಗಬಾರದು. ಹುಣ್ಣಿಮೆ ದಿನ ಕುಟುಂಬದ ಸದಸ್ಯರ ಜೊತೆ ಇದ್ದು ಪೂಜೆಯನ್ನು ಮಾಡುವುದರಿಂದ ಸಕಲ ಇಷ್ಟಾರ್ಥಗಳನ್ನು ನೆರವೇರುತ್ತದೆ.
ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು
ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು..ಒಂದು ವೇಳೆ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಈ 5 ಕೆಲಸಗಳನ್ನು ಮಾಡಿದರೆ ಸಾಕು. ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಇಚ್ಛೆಗಳು ಈಡೇರುತ್ತದೆ. ಸಾಲದ ಸುಳಿಯಲ್ಲಿ ಸಿಕ್ಕಿ ಕಷ್ಟಪಡುತ್ತಿದ್ದರೆ ಒಂದು ಬಾರಿ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಕೇವಲ 10 ದಿನದ ಒಳಗಾಗಿ ಪರಿಹಾರವು ಲಭಿಸುತ್ತದೆ.ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಿಗುವ ಪ್ರತಿಫಲಗಳು ನಿಮ್ಮ ಕಲ್ಪನೆಗಳಿಗೂ ಮೀರಿರುತ್ತದೆ. ಪ್ರತಿ ಮಂಗಳವಾರ ಹಾಗೂ ಶನಿವಾರದಂದು ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತರಾಗಬಹುದು ಅದುವೇ ಕೇವಲ 2 ರಿಂದ 3 ದಿನಗಳಲ್ಲಿ.
ಇರುವೆಗಳಿಗೆ ತಿನ್ನಲು ಸಿಹಿತಿಂಡಿಯನ್ನು ಕೊಟ್ಟರೆ ಜೀವನದಲ್ಲಿ ಎಲ್ಲಾ ರೀತಿಯ ಕೋರಿಕೆಗಳು ಹಾಗೂ ಇಚ್ಛೆಗಳು ನೆರವೇರುತ್ತದೆ. ಪ್ರತಿ ಮಂಗಳವಾರದಂದು ಕೋತಿಗಳಿಗೆ ಹಣ್ಣುಗಳನ್ನು ನೀಡುವುದರಿಂದ ಜೀವನದಲ್ಲಿ ಇರುವಂತಹ ಅತ್ಯಂತ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ. ಕೋತಿಗೆ ಹಣ್ಣುಗಳನ್ನು ನೀಡುವುದರಿಂದ ಭಜರಂಗಿ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ನಾಯಿಗಳಿಗೆ ರೊಟ್ಟಿಯನ್ನು ಅಥವಾ ಬಿಸ್ಕತ್ ಕೊಡುವುದರಿಂದ ಸಾಲದಿಂದ ಮುಕ್ತಿ ದೊರೆಯುತ್ತದೆ ಅದರ ಜೊತೆಗೆ ಮನೆಯಲ್ಲಿ ನಡೆಯುವಂತಹ ಕಲಹಗಳು ಹಾಗೂ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ.
ಗೋಮಾತೆಯಲ್ಲಿ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ. ಹಾಗಾಗಿ ಹಸುವನ್ನು ಗೋಮಾತೆಯೆಂದು ಕರೆಯಲಾಗುತ್ತದೆ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಅಥವಾ ಚಪಾತಿಯನ್ನು ಗೋಮಾತೆಗೆ ತಿನ್ನಿಸುವುದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.
ಒಂದು ವೇಳೆ ಯಾವುದಾದರೂ ವಿಷಯದಿಂದ ನಿಮಗೆ ಭಯವಾಗುತ್ತಿದ್ದಾರೆ ಅಥವಾ ಚಿಂತೆಗಳು ಕಾಡುತ್ತಿದ್ದರೆ 5 ಬೇಸನ್ ಲಡ್ಡುಗಳನ್ನು ತೆಗೆದುಕೊಂಡು ತಲೆ ಮೇಲೆ ಏಳು ಬಾರಿ ಸುತ್ತು ಹಾಕಿ ಕಪ್ಪು ಬಣ್ಣದ ಗೋಮಾತೆಗೆ ತಿನ್ನಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಲದಿಂದ ಮುಕ್ತಿಯನ್ನು ಹೊಂದುವುದಲ್ಲದೆ ನಿಮ್ಮ ಪಾಪಗಳಿಂದ ಮುಕ್ತವಾಗಬಹುದು. ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಒಂದು ಬಾರಿ ಈ ಉಪಾಯವನ್ನು ಮಾಡಿ ನೋಡಿ ಬದಲಾವಣೆಯನ್ನು ನಿಮ್ಮ ಕಣ್ಣ ಮುಂದೆ ಕಾಣಬಹುದು.
ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು
ಈ ಚಿಕ್ಕ ಕೆಲಸವನ್ನು ಮಾಡಿದರೆ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು..ಒಂದು ವೇಳೆ ಸಾಲದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಈ 5 ಕೆಲಸಗಳನ್ನು ಮಾಡಿದರೆ ಸಾಕು. ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ಮನಸ್ಸಿನಲ್ಲಿರುವ ಇಚ್ಛೆಗಳು ಈಡೇರುತ್ತದೆ. ಸಾಲದ ಸುಳಿಯಲ್ಲಿ ಸಿಕ್ಕಿ ಕಷ್ಟಪಡುತ್ತಿದ್ದರೆ ಒಂದು ಬಾರಿ ಈ ಚಿಕ್ಕ ಪರಿಹಾರವನ್ನು ಮಾಡುವುದರಿಂದ ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಇದರಿಂದ ಕೇವಲ 10 ದಿನದ ಒಳಗಾಗಿ ಪರಿಹಾರವು ಲಭಿಸುತ್ತದೆ.ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಿಗುವ ಪ್ರತಿಫಲಗಳು ನಿಮ್ಮ ಕಲ್ಪನೆಗಳಿಗೂ ಮೀರಿರುತ್ತದೆ. ಪ್ರತಿ ಮಂಗಳವಾರ ಹಾಗೂ ಶನಿವಾರದಂದು ಪಕ್ಷಿಗಳಿಗೆ ಧಾನ್ಯವನ್ನು ಹಾಕುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತರಾಗಬಹುದು ಅದುವೇ ಕೇವಲ 2 ರಿಂದ 3 ದಿನಗಳಲ್ಲಿ.
ಇರುವೆಗಳಿಗೆ ತಿನ್ನಲು ಸಿಹಿತಿಂಡಿಯನ್ನು ಕೊಟ್ಟರೆ ಜೀವನದಲ್ಲಿ ಎಲ್ಲಾ ರೀತಿಯ ಕೋರಿಕೆಗಳು ಹಾಗೂ ಇಚ್ಛೆಗಳು ನೆರವೇರುತ್ತದೆ. ಪ್ರತಿ ಮಂಗಳವಾರದಂದು ಕೋತಿಗಳಿಗೆ ಹಣ್ಣುಗಳನ್ನು ನೀಡುವುದರಿಂದ ಜೀವನದಲ್ಲಿ ಇರುವಂತಹ ಅತ್ಯಂತ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ. ಕೋತಿಗೆ ಹಣ್ಣುಗಳನ್ನು ನೀಡುವುದರಿಂದ ಭಜರಂಗಿ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ನಾಯಿಗಳಿಗೆ ರೊಟ್ಟಿಯನ್ನು ಅಥವಾ ಬಿಸ್ಕತ್ ಕೊಡುವುದರಿಂದ ಸಾಲದಿಂದ ಮುಕ್ತಿ ದೊರೆಯುತ್ತದೆ ಅದರ ಜೊತೆಗೆ ಮನೆಯಲ್ಲಿ ನಡೆಯುವಂತಹ ಕಲಹಗಳು ಹಾಗೂ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತದೆ.
ಗೋಮಾತೆಯಲ್ಲಿ ದೇವಾನುದೇವತೆಗಳು ವಾಸವನ್ನು ಮಾಡುತ್ತಾರೆ. ಹಾಗಾಗಿ ಹಸುವನ್ನು ಗೋಮಾತೆಯೆಂದು ಕರೆಯಲಾಗುತ್ತದೆ. ಮನೆಯಲ್ಲಿ ಮಾಡಿದ ಮೊದಲ ರೊಟ್ಟಿಯನ್ನು ಅಥವಾ ಚಪಾತಿಯನ್ನು ಗೋಮಾತೆಗೆ ತಿನ್ನಿಸುವುದರಿಂದ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.
ಒಂದು ವೇಳೆ ಯಾವುದಾದರೂ ವಿಷಯದಿಂದ ನಿಮಗೆ ಭಯವಾಗುತ್ತಿದ್ದಾರೆ ಅಥವಾ ಚಿಂತೆಗಳು ಕಾಡುತ್ತಿದ್ದರೆ 5 ಬೇಸನ್ ಲಡ್ಡುಗಳನ್ನು ತೆಗೆದುಕೊಂಡು ತಲೆ ಮೇಲೆ ಏಳು ಬಾರಿ ಸುತ್ತು ಹಾಕಿ ಕಪ್ಪು ಬಣ್ಣದ ಗೋಮಾತೆಗೆ ತಿನ್ನಿಸಬೇಕು. ಈ ರೀತಿಯಾಗಿ ಮಾಡುವುದರಿಂದ ಸಾಲದಿಂದ ಮುಕ್ತಿಯನ್ನು ಹೊಂದುವುದಲ್ಲದೆ ನಿಮ್ಮ ಪಾಪಗಳಿಂದ ಮುಕ್ತವಾಗಬಹುದು. ಸಾಲಬಾಧೆಯಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕೆಂದರು ಒಂದು ಬಾರಿ ಈ ಉಪಾಯವನ್ನು ಮಾಡಿ ನೋಡಿ ಬದಲಾವಣೆಯನ್ನು ನಿಮ್ಮ ಕಣ್ಣ ಮುಂದೆ ಕಾಣಬಹುದು.
ದುಷ್ಟಶಕ್ತಿಯನ್ನು ನಾಶಮಾಡುತ್ತದೆ ಕಪ್ಪು ದಾರ.
ಸಾಮಾನ್ಯವಾಗಿ ಮನೆಯಲ್ಲಿ ಮಕ್ಕಳು ಹುಟ್ಟಿದರೆ ಮಕ್ಕಳಿಗೆ ಕಪ್ಪು ದಾರವನ್ನು ಅಥವಾ ಕಪ್ಪು ಬೊಟ್ಟನ್ನು ಇಡಲಾಗುತ್ತದೆ ಮತ್ತು ದೃಷ್ಟಿ ತೆಗೆಯುವಂತಹ ಕೆಲಸಗಳನ್ನು ಸಹ ಮಾಡಲಾಗುತ್ತದೆ. ಆದರೆ ಯಾಕೆ ಈ ರೀತಿ ಮಾಡುತ್ತಾರೆ ಎಂಬ ಹಿಂದಿನ ರಹಸ್ಯವನ್ನು ತಿಳಿದುಕೊಂಡಿದ್ದೀರಾ. ಹಾಗಾದರೆ ಕಪ್ಪು ದಾರ ದಿಂದ ಆಗುವ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ಬನ್ನಿ.
ಒಂದು ವೇಳೆ ನಿಮ್ಮ ಜೀವನದಲ್ಲಿ ಯಾವುದಾದರೂ ದುಷ್ಟಶಕ್ತಿ ಅನುಭವ ಆಗುತ್ತಿದ್ದರೆ ಅದರ ಕುಟುಂಬದಲ್ಲಿ ಅಶಾಂತಿಯ ಭಾವನೆಯು ನಿಮಗೆ ಮೂಡುತ್ತಿದ್ದರೆ ಕಪ್ಪು ದಾರದಿಂದ ಹಲವು ರೀತಿಯ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಕಪ್ಪು ಬಣ್ಣ ನಕಾರಾತ್ಮ ಶಕ್ತಿಯನ್ನು ನಾಶ ಮಾಡುವ ಗುಣವನ್ನು ಹೊಂದಿರುತ್ತದೆ. ದುಷ್ಟಶಕ್ತಿಗಳಿಂದ ದೂರ ಇರಲು ಕಪ್ಪುದಾರ ತಪ್ಪು ಕೊಟ್ಟು ಹೀಗೆ ಕಪ್ಪುಬಣ್ಣದ ವಸ್ತುಗಳಿಂದ ಕೆಟ್ಟ ಶಕ್ತಿಗಳನ್ನು ದೂರವಿಡಲು ಕಪ್ಪು ದಾರ ತುಂಬಾ ಸಹಾಯಕಾರಿಯಾಗಿದೆ.
ಒಂದು ವೇಳೆ ನಿಮ್ಮ ಮನೆಯಲ್ಲಿ ಪ್ರತಿನಿತ್ಯ ಕಲಹಗಳು ಉಂಟಾಗುತ್ತಿದ್ದು ಅದರಿಂದ ಬೇಸತ್ತಿದ್ದರೆ ಶನಿವಾರದ ದಿನದಂದು ಶನೇಶ್ವರನ ದೇವಸ್ಥಾನಕ್ಕೆ ಹೋಗಿ 1ಮೀಟರ್ ಕಪ್ಪು ದಾರವನ್ನು ತೆಗೆದುಕೊಂಡು 108 ಗಂಟನ್ನು ಕಟ್ಟಬೇಕು. ಈಗ ಪ್ರತಿಯೊಂದು ಗಂಟನ್ನು ಕಟ್ಟುವಾಗ ಓಂ ಶನೇಶ್ವರಾಯ ನಮಃ ಎಂದು ಜಪ ಮಾಡಿಕೊಂಡು
ಕಟ್ಟಬೇಕು. ನಂತರ ಈ ಕಪ್ಪು ದಾರವನ್ನು ಮನೆಯ ಮುಖ್ಯದ್ವಾರದ ಬಳಿ ಕಟ್ಟಬೇಕು ಇದರಿಂದ ಕೆಟ್ಟ ದೃಷ್ಟಿಗಳು ದುಷ್ಟಶಕ್ತಿಗಳು ನನಗೆ ಪ್ರವೇಶವನ್ನು ಮಾಡುವುದಿಲ್ಲ.ಮನೇಲಿ ಕುಟುಂಬದವರ ಆರೋಗ್ಯ ಪದೇಪದೇ ಹದೆಗೆಡುತ್ತಿದ್ದರೆ, ಕಪ್ಪು ದಾರವನ್ನು ಮಂದಿರಕ್ಕೆ ತೆಗೆದುಕೊಂಡು ಹೋಗಿ ಸ್ವಲ್ಪ ಸಿಂಧೂರವನ್ನು ಹಚ್ಚಿ ನಿಮ್ಮ ಬಳಿ ಇಟ್ಟುಕೊಳ್ಳಬೇಕು, ಎಂಟನೇ ದಿನ ಈ ಕಪ್ಪು ದಾರವನ್ನು ಕುಟುಂಬದ ಸದಸ್ಯರ ಕಾಲಿಗೆ ಕಟ್ಟಬೇಕು. ಇದರಿಂದ ಇನ್ನೊಬ್ಬರ ಕೆಟ್ಟದೃಷ್ಟಿ ಯು ಅವರನ್ನು ಸ್ಪರ್ಶ ಮಾಡುವುದಿಲ್ಲ.
ಗರ್ಭಿಣಿ ಸ್ತ್ರೀಯರಿಗೆ ದೃಷ್ಟಿಯಾಗುವುದು ಸರ್ವೇ ಸಾಮಾನ್ಯ ಆದ್ದರಿಂದ ಕಪ್ಪು ದಾರವನ್ನು ಗರ್ಭಿಣಿ ಸ್ತ್ರೀಯರ ಸುತ್ತಳತೆಯ ಪ್ರಕಾರ ತೆಗೆದುಕೊಂಡು ತಲೆ ಮೇಲೆ ಮೂರು ಬಾರಿ ಸುತ್ತಿಸಿ ಯಾವುದಾದರೂ ಮರಕ್ಕೆ ಕಟ್ಟಬೇಕು ಅಥವಾ ಹರಿಯುವ ನದಿಗೆ ಆ ಕಪ್ಪು ದಾರವನ್ನು ಬಿಡಬೇಕು. ಈ ರೀತಿಯಾಗಿ ಮಾಡುವುದರಿಂದ ಗರ್ಭಿಣಿ ಸ್ತ್ರೀಯರ ಹಾಕಬೇಕಾದುದು ಯಾವುದೇ ರೀತಿಯ ಶಕ್ತಿಗಳು ಪ್ರವೇಶವನ್ನು ಮಾಡುವುದಿಲ್ಲ.
ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ.
ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ..ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ ಮನುಷ್ಯನಿಗೆ ಕಷ್ಟದ ದಿನಗಳು ಪ್ರಾರಂಭವಾಗುವ ಮುನ್ನ ಕೆಲವು ಸಂಕೇತಗಳು ದೊರೆಯುತ್ತದೆ. ಈ ರೀತಿಯಾಗಿ ಸೂಚನೆಗಳು ಸಿಕ್ಕಾಗ ಮನುಷ್ಯನು ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಮನುಷ್ಯನ ಕರ್ಮಗಳ ಅನುಸಾರವಾಗಿ ಒಳ್ಳೆಯ t ಹಾಗೂ ಕೆಟ್ಟ ಫಲಗಳು ಲಭಿಸುತ್ತದೆ. ಆದ್ದರಿಂದ ಭಗವಂತ ನಮ್ಮ ಕರ್ಮಗಳ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ ಎಂದು ಭಾವಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಕೆಲವು ವಸ್ತುಗಳು ನಮಗೆ ಕೆಟ್ಟ ಸಮಯ ಶುರುವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ತುಳಸಿ ಗಿಡವು ದೈವಿಕ ಶಕ್ತಿಯನ್ನು ಹೊಂದಿದೆ. ಯಾರ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭವಾಗುತ್ತದೆಯೋ ಆ ಮನೆಯಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ತುಳಸಿ ಗಿಡ ಒಣಗಲು ಪ್ರಾರಂಭವಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ತುಳಸಿ ಗಿಡ ಒಣಗಿದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಗಿಡವನ್ನು ಬದಲಾಯಿಸಬೇಕು.
ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ,ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆಯೋ ಆ ಮನೆಯವರು ನೀಡಿದ ಆಹಾರವನ್ನು ಗೋಮಾತೆಯು ತಿನ್ನುವುದಿಲ್ಲ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿರುವ ಹಾಲು ಪದೇಪದೇ ಕೈಜಾರಿ ಚೆಲ್ಲುತ್ತಿದ್ದರು ಕಷ್ಟದ ಸಮಯಗಳು ಸಮೀಪ ಬಂದಿದೆ ಎಂಬುದನ್ನು ಸೂಚಿಸುತ್ತದೆ.
ಮನೆಯ ಮೇಲ್ಚಾವಣಿಯ ಮೇಲೆ ಪದೇ ಪದೇ ಪಕ್ಷಿಗಳು ಸಾವನ್ನಪ್ಪುತ್ತಿದ್ದಾರೆ ಅಪಶಕುನ ಎಂದು ಭಾವಿಸಲಾಗುತ್ತದೆ. ದೇವರಿಗೆ ಪೂಜೆ ಮಾಡಬೇಕಾದರೆ ಆರತಿ ತಟ್ಟೆಯು ಪದೇಪದೇ ಕೈಜಾರಿ ಬೀಳುತ್ತಿದ್ದರೆ ಪೂಜೆಯಲ್ಲಿ ಏನೋ ದೋಷವಾಗಿದೆ ಅಥವಾ ಮುಂದಿನ ದಿನಗಳು ಕಷ್ಟಕರವಾಗಲಿದೆ ಜಾಗರೂಕತೆಯಿಂದ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ.
ಮನೆಯಲ್ಲಿ ಪ್ರತಿನಿತ್ಯ ಅತ್ತೆ ಸೊಸೆಯ ನಡುವೆ, ತಂದೆ ಮಕ್ಕಳ ನಡುವೆ ಕಲಹಗಳು ನಡೆಯುತ್ತಿದ್ದರೆ ಕೆಟ್ಟ ಸಮಯ ಹತ್ತಿರ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹೆಂಗಸರು ಕುಂಕುಮವನ್ನು ಇಟ್ಟುಕೊಳ್ಳುವಾಗ ಪದೇಪದೇ ಸಿಂಧೂರ ಕೈಜಾರಿ ಬೀಳುತ್ತಿದ್ದರೆ ಗಂಡನಿಗೆ ಉದ್ಯೋಗದಲ್ಲಿ ಹಾಗೂ ವ್ಯಾಪಾರದಲ್ಲಿ ತುಂಬಾ ನಷ್ಟವೂ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸೂಚನೆಗಳು ದೊರೆತಾಗ ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳಬೇಕು. ಕುಲದೇವರು ಅಥವಾ ಮನೆ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಕಡಿಮೆಯಾಗುತ್ತದೆ.
ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ.
ಮನುಷ್ಯನಿಗೆ ಕೆಟ್ಟ ಸಮಯ ಶುರುವಾಗಿದೆ ಎಂದು ಈ 7 ಸಂಕೇತಗಳು ಸೂಚಿಸುತ್ತವೆ..ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾರೆ ಮನುಷ್ಯನಿಗೆ ಕಷ್ಟದ ದಿನಗಳು ಪ್ರಾರಂಭವಾಗುವ ಮುನ್ನ ಕೆಲವು ಸಂಕೇತಗಳು ದೊರೆಯುತ್ತದೆ. ಈ ರೀತಿಯಾಗಿ ಸೂಚನೆಗಳು ಸಿಕ್ಕಾಗ ಮನುಷ್ಯನು ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಮನುಷ್ಯನ ಕರ್ಮಗಳ ಅನುಸಾರವಾಗಿ ಒಳ್ಳೆಯ t ಹಾಗೂ ಕೆಟ್ಟ ಫಲಗಳು ಲಭಿಸುತ್ತದೆ. ಆದ್ದರಿಂದ ಭಗವಂತ ನಮ್ಮ ಕರ್ಮಗಳ ಅನುಸಾರವಾಗಿ ಫಲಗಳನ್ನು ನೀಡುತ್ತಾನೆ ಎಂದು ಭಾವಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಕೆಲವು ವಸ್ತುಗಳು ನಮಗೆ ಕೆಟ್ಟ ಸಮಯ ಶುರುವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ.
ತುಳಸಿ ಗಿಡವು ದೈವಿಕ ಶಕ್ತಿಯನ್ನು ಹೊಂದಿದೆ. ಯಾರ ಮನೆಯಲ್ಲಿ ತುಳಸಿ ಗಿಡ ಒಣಗಲು ಪ್ರಾರಂಭವಾಗುತ್ತದೆಯೋ ಆ ಮನೆಯಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.ತುಳಸಿ ಗಿಡ ಒಣಗಲು ಪ್ರಾರಂಭವಾದರೆ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಆದ್ದರಿಂದ ತುಳಸಿ ಗಿಡ ಒಣಗಿದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಗಿಡವನ್ನು ಬದಲಾಯಿಸಬೇಕು.
ಯಾರ ಮನೆಯಲ್ಲಿ ನಕಾರಾತ್ಮಕ ಶಕ್ತಿ ,ದುಷ್ಟ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆಯೋ ಆ ಮನೆಯವರು ನೀಡಿದ ಆಹಾರವನ್ನು ಗೋಮಾತೆಯು ತಿನ್ನುವುದಿಲ್ಲ. ಇದರಿಂದ ನಕಾರಾತ್ಮಕ ಶಕ್ತಿಯು ಮನೆಯನ್ನು ಪ್ರವೇಶ ಮಾಡಿದೆ ಎಂಬುದನ್ನು ಸೂಚಿಸುತ್ತದೆ. ಮನೆಯಲ್ಲಿರುವ ಹಾಲು ಪದೇಪದೇ ಕೈಜಾರಿ ಚೆಲ್ಲುತ್ತಿದ್ದರು ಕಷ್ಟದ ಸಮಯಗಳು ಸಮೀಪ ಬಂದಿದೆ ಎಂಬುದನ್ನು ಸೂಚಿಸುತ್ತದೆ.
ಮನೆಯ ಮೇಲ್ಚಾವಣಿಯ ಮೇಲೆ ಪದೇ ಪದೇ ಪಕ್ಷಿಗಳು ಸಾವನ್ನಪ್ಪುತ್ತಿದ್ದಾರೆ ಅಪಶಕುನ ಎಂದು ಭಾವಿಸಲಾಗುತ್ತದೆ. ದೇವರಿಗೆ ಪೂಜೆ ಮಾಡಬೇಕಾದರೆ ಆರತಿ ತಟ್ಟೆಯು ಪದೇಪದೇ ಕೈಜಾರಿ ಬೀಳುತ್ತಿದ್ದರೆ ಪೂಜೆಯಲ್ಲಿ ಏನೋ ದೋಷವಾಗಿದೆ ಅಥವಾ ಮುಂದಿನ ದಿನಗಳು ಕಷ್ಟಕರವಾಗಲಿದೆ ಜಾಗರೂಕತೆಯಿಂದ ನಡೆಯಬೇಕು ಎಂಬುದನ್ನು ಸೂಚಿಸುತ್ತದೆ.
ಮನೆಯಲ್ಲಿ ಪ್ರತಿನಿತ್ಯ ಅತ್ತೆ ಸೊಸೆಯ ನಡುವೆ, ತಂದೆ ಮಕ್ಕಳ ನಡುವೆ ಕಲಹಗಳು ನಡೆಯುತ್ತಿದ್ದರೆ ಕೆಟ್ಟ ಸಮಯ ಹತ್ತಿರ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹೆಂಗಸರು ಕುಂಕುಮವನ್ನು ಇಟ್ಟುಕೊಳ್ಳುವಾಗ ಪದೇಪದೇ ಸಿಂಧೂರ ಕೈಜಾರಿ ಬೀಳುತ್ತಿದ್ದರೆ ಗಂಡನಿಗೆ ಉದ್ಯೋಗದಲ್ಲಿ ಹಾಗೂ ವ್ಯಾಪಾರದಲ್ಲಿ ತುಂಬಾ ನಷ್ಟವೂ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸೂಚನೆಗಳು ದೊರೆತಾಗ ಮನೆ ಹತ್ತಿರ ಇರುವ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಮನೆಯಲ್ಲಿ ವಿಷ್ಣುಸಹಸ್ರನಾಮವನ್ನು ಕೇಳಬೇಕು. ಕುಲದೇವರು ಅಥವಾ ಮನೆ ದೇವರ ದರ್ಶನವನ್ನು ಪಡೆದು ಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮಗೆ ಎದುರಾಗುವ ಕಷ್ಟಗಳು ಕಡಿಮೆಯಾಗುತ್ತದೆ.
ಪೂಜೆ ಮಾಡಿದ ನಂತರ ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದರ ಬಗ್ಗೆ ಅರಿವಿದೆಯೇ ?
ಹಿಂದೂ ಧರ್ಮದಲ್ಲಿ ದೇವರನ್ನು ಪೂಜೆಯನ್ನು ಮಾಡುವುದಕ್ಕೆ ವಿಶೇಷವಾದ ಪದ್ಧತಿಯಿದೆ. ಪೂಜೆ ಮಾಡಬೇಕಾದಾಗ ಹಾಗೂ ಪೂಜೆಮಾಡಿದ ನಂತರವೂ ಹಲವು ನಿಯಮಗಳಿವೆ. ಈ ಎಲ್ಲಾ ನಿಯಮಗಳನ್ನು ಪಾಲಿಸಿದ್ದೆ ಆದಲ್ಲಿ ನಾವು ಮಾಡಿದ ಪೂಜೆಯು ಸಾರ್ಥಕವಾಗುವುದು. ಹಾಗಾದರೆ ದೇವಾನುದೇವತೆಗಳು ಅನುಗ್ರಹ ನಮ್ಮ ಮೇಲೆ ಇರಬೇಕೆಂದರೆ ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.
ಯಾವುದೇ ದೇವಸ್ಥಾನಕ್ಕೆ ಹೋದರು ಪೂಜೆಯನ್ನು ಮಾಡಿಸಿದ ನಂತರ ಯಾವುದೇ ಕಾರಣಕ್ಕೂ ಈ ಕೆಲವೊಂದು ತಪ್ಪುಗಳನ್ನು ಮಾಡಬೇಡಿ. ಮೊದಲಿಗೆ ದೇವರ ಪೂಜೆ ಮಾಡಿದ ನಂತರ ಶಂಖನಾದವನ್ನು ಮಾಡಿ ಆರತಿಯನ್ನು ಮಾಡಬೇಕು. ಆರತಿಯನ್ನು ಸ್ವೀಕರಿಸಿದ ಬಳಿಕ ವಿಭೂತಿಯನ್ನು ಹಚ್ಚಿಕೊಂಡು ಭಗವಂತನಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಪ್ರಾರ್ಥನೆಯನ್ನು ಮಾಡಬೇಕಾದರೆ ಶುದ್ಧ ಮನಸ್ಸಿನಿಂದ ನಿಸ್ವಾರ್ಥ ಭಾವನೆಯಿಂದ ಬೇಡಿಕೊಳ್ಳಬೇಕು. ದೇವಸ್ಥಾನದಲ್ಲಿ ತೀರ್ಥವನ್ನು ಮೂರು ಬಾರಿ ಕೊಡಲಾಗುತ್ತದೆ. ಬಲ ಕೈಯಿಯ ಮಧ್ಯಭಾಗದಲ್ಲಿ ತೀರ್ಥವನ್ನು ತೆಗೆದುಕೊಂಡು ಭಗವಂತನನ್ನು ಮನದಲ್ಲಿ ನೆನೆಯುತ್ತಾ ಸೇವಿಸಬೇಕು. ತೀರ್ಥವನ್ನು ಸೇವಿಸಿದ ನಂತರ ಬಲ ಕೈಯನ್ನು ಹಣೆಯ ಭಾಗದಿಂದ ತಲೆ ಮೇಲೆ ಸವರಿಕೊಳ್ಳಬೇಕು.
ಹಿಂದೂ ಶಾಸ್ತ್ರದ ಪ್ರಕಾರ ಮಾನವನ ಅಂಗೈಯಲ್ಲಿ 3 ತೀರ್ಥ ಸ್ಥಾನಗಳಿರುತ್ತವೆ. ಅಂಗೈಯ ಮಧ್ಯಭಾಗದಲ್ಲಿ ಬ್ರಹ್ಮ ತೀರ್ಥ, ಕಿರುಬೆರಳಿನ ಕೆಳಗಡೆ ಋಷಿ ತೀರ್ಥ, ಹೆಬ್ಬೆರಳಿನ ನಡುವೆ ಪಿತೃ ತೀರ್ಥವಿರುತ್ತದೆ. ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸುವ ಮುನ್ನ ಪ್ರದಕ್ಷಿಣೆ ಹಾಕುವುದನ್ನು ಮರೆಯಬೇಡಿ. 3,5 ಅಥವಾ 9 ಸುತ್ತು ಸುತ್ತಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕಬೇಕು. ಪ್ರದಕ್ಷಿಣೆ ಹಾಕಿದ ನಂತರ ದೇವರ ಪ್ರಸಾದವನ್ನು ಎರಡು ಕಣ್ಣಿಗೆ ಒತ್ತಿಕೊಂಡು ಸೇವಿಸಬೇಕು. ಈ ರೀತಿಯಾಗಿ ಮಾಡುವುದರಿಂದ ನೀವು ಮಾಡುವಂತ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಂಬುದು ಖಂಡಿತ ಸಿಗುತ್ತದೆ.
ಯಾವುದೇ ಪುಣ್ಯ ಕ್ಷೇತ್ರಕ್ಕೆ ಹೋದಾಗ ಅಥವಾ ದೇವಸ್ಥಾನಕ್ಕೆ ಹೋದಾಗ ಪೂಜೆಯನ್ನು ಮಾಡಿಸಿದ ನಂತರ ಮತ್ತು ಪ್ರಸಾದವನ್ನು ಸೇವಿಸಿದ ನಂತರ ಒಂದೆರಡು ನಿಮಿಷ ಕುಳಿತುಕೊಂಡು ಅನಂತರ ತೆರಳಬಹುದು. ಕೆಲವರು ಪ್ರತಿದಿನ ದೇವರ ಪೂಜೆಯನ್ನು ಮಾಡಿದ ನಂತರ ಹಿರಿಯರ ಕಾಲಿಗೆ ನಮಸ್ಕಾರ ಮಾಡುವ ಪದ್ಧತಿಯನ್ನು ಇಟ್ಟುಕೊಂಡಿರುತ್ತಾರೆ. ಹಿರಿಯರಿಗೆ ನಮಸ್ಕಾರ ಮಾಡುವಾಗ ಮೊದಲಿಗೆ ಬಲ ಕಾಲನ್ನು ಬಲ ಕೈಯಿಂದ ಮುಟ್ಟಿ, ಹಾಗೆಯೇ ಎಡ ಕಾಲನ್ನು ಎಡ ಕೈಯಿಂದ ಮುಟ್ಟಿ ನಮಸ್ಕರಿಸಿ. ಹೀಗೆ ಮಾಡಿದರೆ ಮಾತ್ರ ಹಿರಿಯರ ಆಶೀರ್ವಾದ ಫಲಪ್ರದವಾಗುತ್ತದೆ.
ಎಷ್ಟೇ ಹಣ ಸಂಪಾದನೆ ಮಾಡಿದರು ನೆಮ್ಮದಿ ಇಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ.
ಎಷ್ಟೇ ಹಣ ಸಂಪಾದನೆ ಮಾಡಿದರು ನೆಮ್ಮದಿ ಇಲ್ಲವೆಂದರೆ ಈ ಚಿಕ್ಕ ಪರಿಹಾರವನ್ನು ಮಾಡಿ..ಕೆಲವರಿಗೆ ಧನ ಸಂಪಾದನೆಯೂ ಚೆನ್ನಾಗಿರುತ್ತದೆ ಹಾಗೆಯೇ ವಾಸಿಸಲು ಸ್ವಂತ ಮನೆಯೂ ಸಹ ಇರುತ್ತದೆ. ಆದರೆ ಕೆಲವರಿಗೆ ಮನೆಯಲ್ಲಿ ಸುಖಜ ಶಾಂತಿ, ನೆಮ್ಮದಿ ಎಂಬುದು ಇರುವುದಿಲ್ಲ. ಅದಕ್ಕಾಗಿ ಹಿರಿಯರು ಹೇಳುವುದು ಮನುಷ್ಯನಿಗೆ ಎಲ್ಲವೂ ಇದ್ದರೂ ಒಂದಲ್ಲ ಒಂದು ಕೊರತೆಯನ್ನು ದೇವರು ಕೊಟ್ಟಿರುತ್ತಾನೆ ಎಂದು. ಕುಟುಂಬದ ಸದಸ್ಯರ ಜೊತೆ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಜಗಳವಾಡುವುದು, ಮನೆಯಲ್ಲಿರುವ ಸದಸ್ಯರು ಒಬ್ಬರಾದ ಮೇಲೆ ಒಬ್ಬರು ಆರೋಗ್ಯ ಸಮಸ್ಯೆ ತುತ್ತಾಗುತ್ತಿದ್ದಾರೆ ಈ ಪರಿಹಾರವನ್ನು ಮಾಡುವುದರಿಂದ ಎಲ್ಲಾ ಸಂಕಷ್ಟಗಳಿಂದ ನಿವಾರಣೆಯ ಜೊತೆಗೆ ಸುಖ,ಶಾಂತಿ ಹಾಗೂ ನೆಮ್ಮದಿಯನ್ನು ಪಡೆದುಕೊಳ್ಳಬಹುದು.
ಲವಂಗದಿಂದ ಶನಿದೋಷ, ರಾಹುದೋಷ, ದೃಷ್ಟಿದೋಷ ದೂರವಾಗುತ್ತದೆ. ಮೊದಲಿಗೆ ಅರಿಶಿನದ ಕೊಂಬನ್ನು ಬಲ ಕೈಯಲ್ಲಿಟ್ಟುಕೊಂಡು ಮುಷ್ಟಿಯಿಂದ ಮುಚ್ಚಿ ಈ ಮಂತ್ರವನ್ನು 108 ಬಾರಿ ಪಠಿಸಬೇಕು. ಓಂ ರತಿಯೇ ಕಾಮದೇವಾಯ ನಮಃ . ಈ ಮಂತ್ರವನ್ನು ಪಠಿಸಿದ ನಂತರ ಪತಿ-ಪತ್ನಿಯು ಮಲಗುವ ತಲೆ ದಿಂಬಿನ ಕೆಳಗಡೆ ಇಡಬೇಕು. ಒಂದು ರಾತ್ರಿ ಮಲಗಿ ಎದ್ದ ಮೇಲೆ ತಲೆ ದಿಂಬಿನ ಕೆಳಗಡೆ ಇಟ್ಟಿದ್ದ ಅರಿಶಿನದ ಕೊಂಬನ್ನು ಮಣ್ಣಿನಲ್ಲಿ ಮುಚ್ಚಬೇಕು. ಈ ಚಿಕ್ಕ ಕೆಲಸವನ್ನು 5 ಶನಿವಾರ ಮಾಡಬೇಕು. ಹೆಂಗಸರು ಮುಟ್ಟಾದ ಸಮಯದಲ್ಲಿ ಈ ಕೆಲಸವನ್ನು ಮಾಡಬಾರದು.ಈ ರೀತಿಯಾಗಿ ಮಾಡುವುದರಿಂದ ಧನಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಮನೆಯಲ್ಲಿ ಸುಖ, ಶಾಂತಿ,ನೆಮ್ಮದಿ ಎಂಬುದು ದೊರೆಯುತ್ತದೆ.
ಒಂದು ಗಾಜಿನ ಬಾಟಲಿಗೆ ಅರಿಶಿನವನ್ನು ಹಾಕಿ ಅದರ ಮೇಲೆ 2 ಲವಂಗ ಹಾಗೂ ಎರಡು ಮೆಣಸಿನಕಾಯಿಯನ್ನು ಹಾಕಬೇಕು. ಈ ವಸ್ತುಗಳನ್ನು ಹಾಕಬೇಕಾದರೆ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳನ್ನು ಹೇಳಿಕೊಂಡು ಹಾಕಬೇಕು. ಅಡುಗೆ ಕೋಣೆಯಲ್ಲಿ ಅರಿಶಿನದ ಡಬ್ಬ ಹಾಗೂ ಉಪ್ಪಿನ ಡಬ್ಬವನ್ನು ಅಕ್ಕಪಕ್ಕದಲ್ಲಿ ಇಡಬಾರದು, ಏಕೆಂದರೆ ಮನೆಯಲ್ಲಿ ಕಲಹಗಳು ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮನೆಯಲ್ಲಿ ಅರಿಶಿನದ ಡಬ್ಬದ ಪಕ್ಕ ಉಪ್ಪಿನ ಡಬ್ಬವನ್ನು ಇಡಬೇಡಿ. ಈ ರೀತಿಯಾಗಿ ಮಾಡುವುದರಿಂದ ಸಕಲ ಸಂಕಷ್ಟ ಗಳಿಂದಲೂ ದೂರವಾಗಬಹುದು ಹಾಗೂ ನೆಮ್ಮದಿಯಿಂದ ಜೀವನವನ್ನು ಸಹ ನಡೆಸಬಹುದು.
ಮುಖದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಶುಭ ಹಾಗೂ ಅಶುಭ ಎಂಬುದು ತಿಳಿದಿದೆಯೇ ನಿಮಗೆ ?
ಮಚ್ಚೆ ಎಂಬುದು ಪ್ರತಿಯೊಬ್ಬ ಮಾನವನ ದೇಹದಲ್ಲಿ ಯಾವುದಾದರೂ ಒಂದು ಭಾಗದಲ್ಲಿ ಇದ್ದೇ ಇರುತ್ತದೆ. ಕೆಲವರಿಗೆ ಹೊಟ್ಟೆ ಮೇಲೆ,ಕೆಲವರಿಗೆ ಹಣೆ ಮೇಲೆ, ಕೆಲವರಿಗೆ ಗಲ್ಲದ ಮೇಲೆ ಹೀಗೆ ಹಲವಾರು ಕಡೆ ಮಚ್ಚೆಗಳು ಇದ್ದೇ ಇರುತ್ತವೆ. ಹಾಗಾದರೆ ಯಾವ ಮಚ್ಚೆ ಎಲ್ಲಿದ್ದರೆ ಶುಭ ಹಾಗೂ ಅಶುಭ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮುಖದ ಮೇಲೆ ಮಚ್ಚೆ ಇದ್ದರೆ ಅವರನ್ನು ಲಕ್ಷಣವಂತರು ಎಂದು ಕರೆಯಲಾಗುತ್ತದೆ. ಕೆಲವು ಮಚ್ಚೆಗಳು ಸೌಂದರ್ಯವನ್ನು ಹೆಚ್ಚಿಸಿದರೆ ಇನ್ನೂ ಕೆಲವು ಮಚ್ಚೆಗಳು ದೃಷ್ಟಿ ತಾಗದಂತೆ ನೋಡಿಕೊಳ್ಳುತ್ತದೆ. ಯಾರ ಹಣೆಯ ಮೇಲೆ ಮಚ್ಚೆ ಇರುತ್ತದೆಯೋ ಅಂಥವರು ಕೆಟ್ಟದಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುತ್ತಾರೆ. ಹಾಗೆ ಇವರು ತೆಗೆದುಕೊಳ್ಳುವ ನಿರ್ಧಾರದಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ ಆದ್ದರಿಂದ ಮನೆಯಲ್ಲಿರುವ ಸದಸ್ಯರು ಇವರಿಗೆ ಆಗಾಗ ಬುದ್ಧಿ ಹೇಳುವ ಅವಶ್ಯಕತೆ ಇರುತ್ತದೆ. ಮೂಗಿನ ಮೇಲೆ ಮಚ್ಚೆ ಇದ್ದರೆ ಜೀವನದಲ್ಲಿ ಕಷ್ಟಗಳು ಜಾಸ್ತಿ ಎಂಬ ಅರ್ಥವಿದೆ. ಇಂಥವರು ತಮ್ಮ ಸಂಗಾತಿಯ ಮೇಲೆ ಯಾವಾಗಲೂ ಅಪನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಹಾಗೂ ಇವರ ಕೈಯಲ್ಲಿ ಯಾವಾಗಲೂ ಹಣವು ನಿಲ್ಲುವುದಿಲ್ಲ ಹಾಗೂ ಇವರ ಕೋಪವೇ ಇವರಿಗೆ ದೊಡ್ಡ ಶತ್ರುವಾಗಿರುತ್ತದೆ.
ಹುಬ್ಬುಗಳ ನಡುವೆ ಮಚ್ಚೆ ಇದ್ದವರು ಯಾವಾಗಲೂ ಲವಲವಿಕೆಯಿಂದ ಕೂಡಿರುತ್ತಾರೆ ಮತ್ತು ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮೂಗು ಹಾಗೂ ತುಟಿಯ ಮಧ್ಯಭಾಗದಲ್ಲಿ ಮಚ್ಚೆಯಿದ್ದರೆ ಅನಾರೋಗ್ಯದ ಸಮಸ್ಯೆ ಹೆಚ್ಚಾಗಿರುತ್ತದೆ. ಇಂತಹ ಮಚ್ಚೆಗಳಿಂದ ವೈವಾಹಿಕ ಕಲಹಗಳು ನಡೆಯುತ್ತಿರುತ್ತವೆ ಆದ್ದರಿಂದ ಈ ಮಚ್ಚೆಯನ್ನು ತೆಗೆಸುವುದು ಉತ್ತಮ. ಕೆನ್ನೆಯ ಮೇಲೆ ಮಚ್ಚೆ ಇರುವವರು ತುಂಬಾ ಅದೃಷ್ಟ ಶಾಲಿಗಳಾಗಿರುತ್ತಾರೆ. ಚಿಕ್ಕವಯಸ್ಸಿನಲ್ಲಿ ದೊಡ್ಡ ಸ್ಥಾನವನ್ನು ಕೆಲಸದಲ್ಲಿ ಅಲಂಕರಿಸಲಿದ್ದಾರೆ ಹಾಗೂ ಚೆನ್ನಾಗಿ ಹಣ ಸಂಪಾದನೆಯನ್ನು ಮಾಡುತ್ತಾರೆ. ಗಲ್ಲದ ಮೇಲೆ ಮಚ್ಚೆ ಇರುವವರು ಜೀವನದ ಪ್ರತಿಯೊಂದು ಘಟ್ಟದಲ್ಲಿಯೂ ಯಶಸ್ಸನ್ನು ಕಾಣುತ್ತಾರೆ.
ತಲೆಯಲ್ಲಿ ಮಚ್ಚೆ ಇದ್ದರೆ ರಾಜಕೀಯದಲ್ಲಿ ಉನ್ನತ ಸ್ಥಾನವನ್ನು ಏರುತ್ತಾರೆ. ಕಿವಿ ಮೇಲೆ ಇರುವ ಮಚ್ಚೆಯು ಐಷಾರಾಮಿ ಜೀವನವನ್ನು ಸೂಚಿಸುತ್ತದೆ. ನಾಲಿಗೆಯ ಮಧ್ಯಭಾಗದಲ್ಲಿರುವ ಮಚ್ಚೆಯೂ ಶಿಕ್ಷಣದಲ್ಲಿರುವ ಅಡೆತಡೆಗಳನ್ನು ಸೂಚಿಸುತ್ತದೆ. ನಾಲಿಗೆ ತುದಿ ಭಾಗದಲ್ಲಿ ಮಚ್ಚೆ ಇದ್ದರೆ ತುಂಬಾ ಬುದ್ಧಿಶಾಲಿಗಳಾಗಿರುತ್ತಾರೆ ಹಾಗೂ ಬೇರೆಯವರನ್ನು ಮನ ಪರಿವರ್ತನೆ ಮಾಡುವ ಚಾಣಕ್ಯತೆಯನ್ನು ಹೊಂದಿರುತ್ತಾರೆ. ಕತ್ತಿನ ಭಾಗದಲ್ಲಿ ಮಚ್ಚೆ ಇದ್ದರೆ ಅನಿರೀಕ್ಷಿತವಾಗಿ ಹಣವು ಹುಡುಕಿಕೊಂಡು ಬರುತ್ತದೆ. ಅದೇ ರೀತಿ ಎರಡೂ ಬದಿಯಲ್ಲೂ ಮಚ್ಚೆ ಇದ್ದರೆ ಅವರಂತ ಮೂರ್ಖರು ಇನ್ಯಾರೂ ಇಲ್ಲ ಎಂದು ಹೇಳಲಾಗುತ್ತದೆ. ಹೊಟ್ಟೆಯ ಮೇಲೆ,ಎದೆಯ ಮೇಲೆ ಮಚ್ಚೆ ಇರುವವರು ಸೋಮಾರಿಗಳು ಹಾಗೂ ಐಷಾರಾಮಿ ಜೀವನವನ್ನು ಇಚ್ಚಿಸುವವರು ಆಗಿರುತ್ತಾರೆ.
ಆರೋಗ್ಯವಂತ ವ್ಯಕ್ತಿ ಆಗಬೇಕೆಂದರೆ ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡಬೇಕು.
ಆರೋಗ್ಯವಂತ ವ್ಯಕ್ತಿ ಆಗಬೇಕೆಂದರೆ ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡಬೇಕು..ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಂದು ಸಲ ಮನೆಯಲ್ಲಿ ನಾವು ಇಟ್ಟುಕೊಳ್ಳುವ ಉಪಯೋಗಿಸದ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ಉಪಯೋಗಿಸದ ವಸ್ತುಗಳನ್ನು ಮನೆಯಿಂದ ಹೊರ ಹಾಕುವುದರಿಂದ ಮನೆಯು ಶಾಂತವಾಗುತ್ತದೆ ಹಾಗೂ ಮನಸ್ಸು ಶಾಂತವಾಗುತ್ತದೆ ಮತ್ತು ವಾಸ್ತು ದೋಷವು ನಿವಾರಣೆಯಾಗುತ್ತದೆ.
ಆಗ್ನೇಯ ದಿಕ್ಕಿನಲ್ಲಿ ಅಡುಗೆ ಕೋಣೆಯನ್ನು ಕಟ್ಟಿಸಿ ಅಡುಗೆಯನ್ನು ಮಾಡಿ ಅಲ್ಲಿಯೇ ಎಲ್ಲರೂ ಕುಳಿತುಕೊಂಡು ಊಟ ಮಾಡುವುದು ತುಂಬಾ ಉತ್ತಮವಾದದ್ದು. ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಹಾಗೂ ವ್ಯಕ್ತಿಯು ಅಭಿವೃದ್ಧಿಯನ್ನು ಕಾಣುತ್ತಾನೆ.ಅಡುಗೆ ಕೋಣೆಯಲ್ಲಿ ಮನೆಯ ಯಜಮಾನ ಕುಳಿತುಕೊಂಡ ಊಟ ಮಾಡುವುದರಿಂದ ಕೀರ್ತಿವಂತನು ಹಾಗೂ ಧನ ಸಂಪತ್ತನ್ನು ಗಳಿಸುವಂತಹವನಾಗುತ್ತಾನೆ. ಹಾಗೆಯೇ ಮಲಗುವ ಕೋಣೆಯನ್ನು ಸಹ ಶುದ್ಧವಾಗಿಟ್ಟುಕೊಳ್ಳಬೇಕು. ಪೂರ್ವ ಹಾಗೂ ದಕ್ಷಿಣದ ಕಡೆ ತಲೆಯನ್ನು ಹಾಕಿಕೊಂಡು ಮಲಗುವುದು ತುಂಬಾ ಉತ್ತಮ ಮತ್ತು ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಕಡೆ ತಲೆ ಹಾಕಿಕೊಂಡು ಮಲಗಬಾರದು ಇದರಿಂದ ಅನೇಕ ರೀತಿಯ ಕಷ್ಟಗಳನ್ನು ನಾವೇ ತಂದುಕೊಳ್ಳುವಂತ ಪರಿಸ್ಥಿತಿ ಬರುತ್ತದೆ.
ಪ್ರತಿಯೊಬ್ಬರ ಮನೆಯಲ್ಲೂ ಸ್ಪಟಿಕ ಮಣಿ ಇದ್ದರೆ ತುಂಬಾ ಒಳ್ಳೆಯದು ಏಕೆಂದರೆ ಯಾವುದೇ ರೀತಿಯ ವಾಸ್ತು ದೋಷವು ನಿಮ್ಮ ಮನೆಯಲ್ಲಿ ಉಂಟಾಗುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿ ಶ್ಲೋಕವನ್ನು ಹೇಳುವುದು, ಭಕ್ತಿಗೀತೆಗಳನ್ನು ಹಾಡುವುದು ಅಥವಾ ಒಂದು ವೇಳೆ ಹಾಡಲು ಬರುವುದಿಲ್ಲವೆಂದರೆ ಮೊಬೈಲ್ ಅಲ್ಲಿ ಭಕ್ತಿಗೀತೆಗಳನ್ನು ಹಾಕಿಕೊಂಡು ಮುಂಜಾನೆ ಎದ್ದ ತಕ್ಷಣ ಕೇಳುವುದರಿಂದ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.