Your cart is currently empty!
Author: 53721pwpadmin
ಶ್ರೀ ಶಕ್ತಿ ಆಂಜನೇಯ ಸ್ವಾಮಿಯ ಆಶೀರ್ವಾದ ಆಷಾಢದಿಂದ ರಾಜಯೋಗ ಪ್ರಾರಂಭ ದಿನಭವಿಷ್ಯ..
ಮೇಷ:- ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇ ಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ಸ್ನೇಹಿತರು ನಿಮ್ಮೊಂದಿಗೆ ಹೆಜ್ಜೆ ಹಾಕುವರು.
ವೃಷಭ:- ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳು ವಿದ್ಯಾಕಲಿಕೆಯಲ್ಲಿ ಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು.
ಮಿಥುನ:- ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದ ಕನಸು ನನಸಾಗುವುದು. ಹಣಕಾಸಿನ ಪರಿಸ್ಥಿತಿಯು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ.
ಕಟಕ:- ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮ ಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಮಾತಿನಲ್ಲಿ ನಯ, ವಿನಯ ಇರಲಿ.
ಸಿಂಹ:- ದೈಹಿಕ ಬಲದ ಜೊತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದ ನಿಮ್ಮ ಆಪ್ತರಿಂದ ಮೆಚ್ಚುಗೆಯನ್ನು ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ.
ಕನ್ಯಾ:- ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವೇನು ಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಆದಾಗ್ಯೂ ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.
ತುಲಾ:- ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕ ದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವವು.
ವೃಶ್ಚಿಕ:- ನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋ ಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು.
ಧನುಸ್ಸು:- ನಿಮ್ಮ ಸಮಸ್ಯೆಗಳೇ ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇ ಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.
ಮಕರ:- ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕ ತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ.
ಮೀನ:- ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವ ದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಕೈಬಿಗಿ ಹಿಡಿತವಿರಲಿ.
ಬೀರುವಿನ ಒಳಗೆ ಯಾವ ವಸ್ತುವನ್ನು ಇಟ್ಟರೆ ಲಕ್ಷ್ಮೀದೇವಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದು ತಿಳಿದಿದೆಯೇ ನಿಮಗೆ ?
ಸಾಮಾನ್ಯವಾಗಿ ಬೀರುವನ್ನು ಕುಬೇರನ ಸ್ಥಾನವಾದ ಉತ್ತರದಿಕ್ಕಿನಲ್ಲಿ ಇಟ್ಟುಕೊಳ್ಳುತ್ತೇವೆ. ಲಕ್ಷ್ಮಿ ಹಾಗೂ ಕುಬೇರರ ದಿಕ್ಕಾಗಿರುವ ಉತ್ತರ ದಿಕ್ಕಿನ ಕಡೆ ಬೀರುವನ್ನು ಇಡುವುದರಿಂದ ಲಕ್ಷ್ಮೀದೇವಿಯ ಹಾಗೂ ಕುಬೇರನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಬೀರುವಿನ ಒಳಗೆ ಯಾವ ವಸ್ತುವನ್ನು ಇಟ್ಟರೆ ಲಕ್ಷ್ಮೀದೇವಿ ಅನುಗ್ರಹದಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಬೀರುವಿನ ಒಳಗೆ ಬಿಳಿಯ ವಸ್ತ್ರದ ಮೇಲೆ ಅತಾರ್ ಎಂಬುವ ಸುಗಂಧ ದ್ರವ್ಯವನ್ನು ಲೇಪಿಸಿ ಅದರ ಮೇಲೆ ಹಣ,ಚಿನ್ನಾಭರಣ ಹಾಗೂ ಮುಖ್ಯವಾದ ಹಾಗೂ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಬಿಳಿ ವಸ್ತ್ರದ ಮೇಲೆ ಚಿನ್ನಾಭರಣ,ನಾಣ್ಯಗಳು,ಹಣ ಹಾಗೂ ಮುಖ್ಯವಾದ ಕಾಗದ ಪತ್ರಗಳು ಹೀಗೆ ಎಲ್ಲವನ್ನೂ ಒಟ್ಟಿಗೆ ಇಡಬಾರದು ಅದರ ಬದಲು ಒಂದೊಂದು ವಸ್ತುವನ್ನು ಒಂದೊಂದು ಕಡೆ ಬೇರೆ ಬೇರೆಯಾಗಿ ಇಡಬೇಕು.
ಬೀರುವಿನ ಒಳಗೆ ಪಚ್ಚ ಕರ್ಪೂರವನ್ನು ಇಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಒಂದು ವೇಳೆ ಪಚ್ಚಕರ್ಪೂರದ ಜೊತೆಗೆ ಲಾವಂಚದ ಬೇರನ್ನು ಇಡುವುದರಿಂದ ಲಕ್ಷ್ಮೀದೇವಿ ಸಂತುಷ್ಟರಾಗುತ್ತಾರೆ. ಲಕ್ಷ್ಮೀದೇವಿಯು ಕಮಲದ ಹೂವಿನ ಮೇಲೆ ಕುಳಿತುಕೊಂಡು ಬಂಗಾರದ ನಾಣ್ಯವನ್ನು ಬಲ ಕೈಯಿಂದ ಸುರಿಸುತ್ತಿರುವ ಹಾಗೆ ಹಾಗೂ ಎರಡು ಆನೆಯು ಲಕ್ಷ್ಮೀದೇವಿಗೆ ಕ್ಷೀರಾಭಿಷೇಕ ಮಾಡುತ್ತಿರುವ ಚಿತ್ರಪಟವನ್ನು ಬೀರುವಿನ ಮೇಲೆ ಹಾಕಿಕೊಳ್ಳಬಹುದು. ಅದೇ ರೀತಿ ಅರಿಶಿನದಿಂದ ಸ್ವಸ್ತಿಕ್ ಗುರುತನ್ನು ಬರೆದುಕೊಂಡು ಅದರ ಕೆಳಗೆ ಶುಭಂ ಲಾಭಂ ಎಂದು ಬರೆದುಕೊಳ್ಳುವುದರಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತದೆ.
ದೈವಿಕ ಅಂಶವನ್ನು ಹೊಂದಿರುವ ನಿಂಬೆಹಣ್ಣನ್ನು ಯಾವೆಲ್ಲ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ ಎಂದು ತಿಳಿದಿದೆಯೇ ನಿಮಗೆ
ದೈವಿಕ ಅಂಶವನ್ನು ಹೊಂದಿರುವ ನಿಂಬೆಹಣ್ಣನ್ನು ಯಾವೆಲ್ಲ ಕಾರ್ಯಗಳಿಗೆ ಉಪಯೋಗಿಸಲಾಗುತ್ತದೆ ಎಂದು ತಿಳಿದಿದೆಯೇ ನಿಮಗೆ..ಯಾರಿಗೂ ತಿಳಿಯದ ಹಾಗೂ ಮನೆಯಲ್ಲಿ ಬೆಳಗುವ ವಸ್ತು ಮತ್ತು ಆ ವಸ್ತುವಿನಲ್ಲಿ ಸಾಕಷ್ಟು ದೈವಿಕ ಅಂಶವಿದೆ ಎಂದಾಗ ಅದರ ಉಪಯೋಗವನ್ನು ಪಡೆದುಕೊಳ್ಳಬಹುದು. ಹಾಗಾದರೆ ಆ ವಸ್ತು ಯಾವುದು ಹಾಗೂ ಅದರಿಂದ ಆಗುವ ಪ್ರಯೋಜನಗಳು ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ನಿಂಬೆಹಣ್ಣು ತುಂಬಾ ದೈವಿಕ ಶಕ್ತಿಯನ್ನು ಹೊಂದಿರುವ ವಸ್ತು. ಪ್ರತಿಯೊಂದು ಪೂಜೆಯಲ್ಲಿ ನಿಂಬೆಹಣ್ಣು ಇರಲೇಬೇಕು ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಈ ನಿಂಬೆಹಣ್ಣನ್ನು ಉಪಯೋಗಿಸಲಾಗುತ್ತದೆ. ನಿಂಬೆಹಣ್ಣನ್ನು ಉಪಯೋಗಿಸಿಕೊಂಡು ನಮ್ಮ ಮೇಲೆ ಪದೇ ಪದೇ ಕಲಹ ಮಾಡುವವರು, ಕಿರಿಕಿರಿ ಮಾಡುವವರು, ಎಲ್ಲೆ ಹೋಗಿ ಯಾರ ಜೊತೆ ಮಾತನಾಡಿದರು ಆ ಜಾಗದಲ್ಲಿ ಕಲಹ ಉಂಟಾಗುವುದು, ಮಿತ್ರರೆಲ್ಲ ಶತ್ರುಗಳಾಗಿ ಬದಲಾಗುತ್ತಿರುತ್ತಾರೆ, ಬಂಧುಮಿತ್ರರೊಡನೆ ಬೇಡದ ವಿಷಯಕ್ಕೆ ಕಲಹ ಉದ್ಭವವಾಗುವುದು, ಯಾವುದಾದರೂ ಶುಭಕಾರ್ಯಗಳಿಗೆ ಹೋದಾಗ ಜನರು ಭಿನ್ನವಾಗಿ ನಿಮ್ಮನ್ನು ನೋಡುವುದು ಹೀಗೆ ಈ ರೀತಿಯ ಹಲವಾರು ಸಮಸ್ಯೆಯಿಂದ ಬಳಲುತ್ತಿದ್ದರೆ ನಿಂಬೆಹಣ್ಣನ್ನು ಉಪಯೋಗಿಸಿಕೊಂಡು ನಿಮಗಿರುವ ಶತ್ರುಬಾಧೆ, ಬಂಧುಮಿತ್ರರೊಡನೆ ಆಗುತ್ತಿರುವ ಕಲಹಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ದೇವಿಗೆ 5 ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು. ದೇವಿಯ ದೇವಸ್ಥಾನದಲ್ಲಿ ದೇವಿಗೆ ದೀಪಾರಾಧನೆಯನ್ನು ಮಾಡಬೇಕು. 108 ಮಾಲೆಯ ದೀಪವನ್ನು ದೇವಿಗೆ ಕೊಡಬೇಕು. ಈ ರೀತಿಯ ವಿಶೇಷವಾದ ಪದ್ಧತಿಯಿಂದ ನಿಮಗಿರುವ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ನಿಂಬೆಹಣ್ಣಿನಲ್ಲಿ ಇಷ್ಟೊಂದು ಪವಿತ್ರತೆ ಹಾಗೂ ದೈವಿಕ ಶಕ್ತಿ ಇರುವುದರಿಂದ ಅದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಸಾಮಾನ್ಯವಾಗಿ ನಿಂಬೆಹಣ್ಣನ್ನು ಅಡುಗೆಗೆ ಉಪಯೋಗಿಸುತ್ತೇವೆ ಹಾಗೂ ದೃಷ್ಟಿ ದೋಷ ಪರಿಹಾರಕ್ಕೆ ಉಪಯೋಗಿಸುತ್ತೇವೆ ಮತ್ತು ದೈವಿಕ ಪೂಜೆಗಳಿಗೆ ನಿಂಬೆಹಣ್ಣು ಬಳಸಲಾಗುತ್ತದೆ. ಹಾಗಾಗಿ ನಿಂಬೆ ಹಣ್ಣನ್ನು ಉಪಯೋಗಿಸಿಕೊಂಡು ಶತ್ರುನಾಶವನ್ನು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಾಗಲಾರದು.
ವಾಯುವ್ಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಜೀವನದ ದಿಕ್ಕೇ ಬದಲಾಗುತ್ತದೆ.
ವಾಯುವ್ಯ ದಿಕ್ಕಿನಲ್ಲಿ ಈ ವಸ್ತುಗಳನ್ನು ಇಟ್ಟರೆ ಜೀವನದ ದಿಕ್ಕೇ ಬದಲಾಗುತ್ತದೆ..ಸಾಮಾನ್ಯವಾಗಿ ಪ್ರತಿಯೊಬ್ಬರೂ ವಾಸ್ತು ಶಾಸ್ತ್ರದ ಪ್ರಕಾರವಾಗಿ ಮನೆಯನ್ನು ಕಟ್ಟಿಸುತ್ತಾರೆ. ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಮಧ್ಯಭಾಗದಲ್ಲಿ ವಾಯುವ್ಯ ದಿಕ್ಕು ಬರುತ್ತದೆ. ವಾಯುವ್ಯ ದಿಕ್ಕಿನಲ್ಲಿ ಯಾವ ವಸ್ತುಗಳನ್ನು ಇಟ್ಟರೆ ಅದು ಲಾಭದಾಯಕವಾಗುತ್ತದೆ ಹಾಗೂ ಯಾವ ವಸ್ತುಗಳನ್ನು ಈ ದಿಕ್ಕಿನ ಕಡೆ ಇಡಬಾರದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸಾಮಾನ್ಯವಾಗಿ ವಾಯುವ್ಯ ದಿಕ್ಕಿಗೆ ಕೋಣೆಗಳನ್ನು ಕಟ್ಟಿ ಕೊಳ್ಳಲಾಗುತ್ತದೆ. ಚಂದ್ರದೇವನು ವಾಯುವ್ಯ ದಿಕ್ಕಿಗೆ ಅಧಿಪತಿಯಾಗಿರುವನು. ಆರೋಗ್ಯದ ಮೇಲೆ ಹಿಡಿತವನ್ನು ಸಾಧಿಸುವವನು ಚಂದ್ರನಾಗಿರುತ್ತಾನೆ. ಹಾಗಾಗಿ ಚಂದನ ಅನುಗ್ರಹ ಸಿಗಬೇಕೆಂದರೆ ವಾಯುವ್ಯ ದಿಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಸಾಮಾನ್ಯವಾಗಿ ಸ್ಟೋರ್ ರೂಮ್ ಅನ್ನು ಕಟ್ಟಬೇಕು ಎನ್ನುತ್ತಾರೆ. ಸ್ಟೋರ್ ರೂಮ್ ಅಲ್ಲಿ ಧವಸ ಧಾನ್ಯಗಳನ್ನು ಇಡುವುದರಿಂದ ಚಂದನ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಇದರಿಂದ ಬ್ಯಾಂಕಿನ ವ್ಯವಹಾರಗಳೆಲ್ಲ ಅಚ್ಚುಕಟ್ಟಾಗಿ ನಡೆಯುತ್ತದೆ.
ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಸ್ಟೋರ್ ರೂಮ್ ಅನ್ನು ಬರುವ ಹಾಗೆ ಮಾಡಿದರೆ ಲಾಭದಾಯಕವಾಗುತ್ತದೆ. ವಾಯುವ್ಯ ದಿಕ್ಕಿನಲ್ಲಿ ಮಲಗುವುದರಿಂದ ಮಾನಸಿಕ ಚಿಂತನೆಗಳು ಜಾಸ್ತಿಯಾಗುತ್ತದೆ ಹಾಗೂ ಇದರಿಂದ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ. ಪಶ್ಚಿಮ ವಾಯುವ್ಯ ದಿಕ್ಕಿನ ಕಡೆ ಬೇಳೆಕಾಳುಗಳನ್ನು ಇಡಬೇಕು. ಉತ್ತರ ವಾಯುವ್ಯ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಇಡುವುದು ಅಥವಾ ನೀರು ತುಂಬುವ ಸಂಪನ್ನು ಮಾಡಿಸಿಕೊಳ್ಳುವುದನ್ನು ಮಾಡಬಾರದು. ಇದರಿಂದ ಅನೇಕ ರೀತಿಯ ಸಂಕಷ್ಟಗಳನ್ನು ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ, ಶಾಂತಿಯಿಂದ ಇರುವುದಕ್ಕೆ ಯಾವುದೇ ಕಾರಣಕ್ಕೂ ವಾಯುವ್ಯ ದಿಕ್ಕನ್ನು ಆರಿಸಿ ಕೊಳ್ಳಬಾರದು. ಈ ದಿಕ್ಕನ್ನು ಬಿಟ್ಟು ಬೇರೆ ದಿಕ್ಕನ್ನು ಆಯ್ದುಕೊಂಡರೆ ಜೀವನದಲ್ಲಿ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು. ಹಾಗಾಗಿ ಮನೆಯನ್ನು ನಿರ್ಮಾಣ ಮಾಡಬೇಕಾದರೆ ಸಂಪೂರ್ಣವಾಗಿ ವಾಸ್ತುಶಾಸ್ತ್ರದ ಪ್ರಕಾರವಾಗಿ ನಿರ್ಮಾಣ ಮಾಡಿದರೆ ಸುಖಕರವಾದ ಜೀವನವನ್ನು ನಡೆಸಬಹುದು.ಮಕ್ಕಳ ಜ್ಞಾಪಕಶಕ್ತಿ ವೃದ್ಧಿ, ಸಾಲಬಾಧೆ ಸಮಸ್ಯೆ ಗೆ ಈ ಪರಿಹಾರವನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.
ಮಕ್ಕಳ ಜ್ಞಾಪಕಶಕ್ತಿ ವೃದ್ಧಿ, ಸಾಲಬಾಧೆ ಸಮಸ್ಯೆ ಗೆ ಈ ಪರಿಹಾರವನ್ನು ಮಾಡುವುದರಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದ..ಸಾಲ ಬಾಧೆ ಸಮಸ್ಯೆ, ಮಕ್ಕಳು ಎಷ್ಟು ಓದಿದರೂ ಮರೆತು ಹೋಗುತ್ತಿರುವುದು, ಪತಿ-ಪತ್ನಿಯರ ನಡುವೆ ಕಲಹಗಳು ಉಂಟಾಗುವುದು, ಪಿತೃದೋಷ ಸಮಸ್ಯೆ ಹೀಗೆ ಇತ್ಯಾದಿ ಸಮಸ್ಯೆಗಳನ್ನು ದಾನ ಮಾಡುವುದರ ಮೂಲಕ ದೋಷವನ್ನು ಮುಕ್ತಗೊಳಿಸಿಕೊಳ್ಳಬಹುದು.
ಯಾರಿಗಾದರೂ ಸಾಲಬಾದೆ ಜಾಸ್ತಿ ಇದ್ದರೆ ಮಂಗಳವಾರದ ದಿನದಂದು ಹೂವಿನ ಗಿಡವನ್ನು ದಾನವಾಗಿ ಕೊಟ್ಟರೆ ತುಂಬಾ ಒಳ್ಳೆಯದು. ಈ ರೀತಿಯಾಗಿ ದಾನವನ್ನು ಮಾಡುವುದರಿಂದ ಸಾಲ ಬಾದೆಯು ಕ್ರಮೇಣವಾಗಿ ಕಡಿಮೆಯಾಗುತ್ತ ಬರುತ್ತದೆ. ಹಾಗೆಯೇ ಬೇವಿನ ಮರ ಹಾಗೂ ಆಲದ ಮರದ ಬುಡಕ್ಕೆ ನೀರು ಹಾಕಿ 3 ಪ್ರದಕ್ಷಿಣೆ ಹಾಕುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
ಒಂದು ವೇಳೆ ಮಕ್ಕಳಿಗೆ ಜ್ಞಾಪಕ ಶಕ್ತಿ ಕಮ್ಮಿ ಆಗಿದ್ದರೆ ಅಥವಾ ಓದಿನಮೇಲೆ ಆಸಕ್ತಿ ಇಲ್ಲ ಎಂದರೆ ಸೀಬೆ ಹಣ್ಣನ್ನು ಮಕ್ಕಳ ಕೈಯಿಂದ ಬ್ರಾಹ್ಮಣರಿಗೆ ಕೊಡಿಸುವುದರಿಂದ ಮಕ್ಕಳಿಗೆ ತುಂಬಾ ಒಳ್ಳೆಯದಾಗುತ್ತದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆಯು ಹೆಚ್ಚಾಗಿ ಓದಿನ ಕಡೆ ಆಸಕ್ತಿಯೂ ಬರುತ್ತದೆ.ಗುರುವಾರದ ದಿನದಂದು ಹಸಿರು ತರಕಾರಿಗಳನ್ನು ದಾನವಾಗಿ ಕೊಡುವುದರಿಂದ ಮಕ್ಕಳಿಗೆ ಗುರುವಿನ ಅನುಗ್ರಹ ಪ್ರಾಪ್ತಿಯಾಗುತ್ತದೆ.
ಒಂದು ವೇಳೆ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲವೆಂದರೆ ಅಥವಾ ಕಲಹಗಳು ಪ್ರತಿನಿತ್ಯ ಆಗುತ್ತಿದೆ ಎಂದರೆ ಹತ್ತಿಯಿಂದ ಮಾಡಿದ ಬತ್ತಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಮುತ್ತೈದೆಯರಿಗೆ ಕೊಟ್ಟು ಅವರ ಪಾದವನ್ನು ಸ್ಪರ್ಶ ಮಾಡುವುದರಿಂದ ಸಮಸ್ಯೆಯೂ ಪರಿಹಾರವಾಗುತ್ತದೆ.
ಪಿತೃ ದೋಷ ನಿವಾರಣೆ ಆಗಬೇಕೆಂದರೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ತೀರ್ಥ ದಾನವನ್ನು ಮಾಡುವುದರಿಂದ ಪಿತೃ ದೋಷ ನಿವಾರಣೆ ಆಗುತ್ತದೆ. ರಸ್ತೆಯಲ್ಲಿ ಯಾರಾದರೂ ಬಾಯಾರಿಕೆಯಿಂದ ಬಳಲುತ್ತಿದ್ದರೆ ಅವರಿಗೆ ತೀರ್ಥ ದಾನವನ್ನು ಕುಡಿಯುವ ನೀರಿನ ಮೂಲಕ ಕೊಟ್ಟರೆ ಪಿತೃ ದೋಷ ನಿವಾರಣೆಯಾಗುತ್ತದೆ.
ಒಂದು ವೇಳೆ ಕೆಲಸದಲ್ಲಿ ಬಡ್ತಿ ಪಡೆಯಬೇಕು, ವ್ಯಾಪಾರ ಹಾಗೂ ವ್ಯವಹಾರದಲ್ಲಿ ಅಧಿಕ ಲಾಭವನ್ನು ಪಡೆಯಬೇಕೆಂದರೆ ದೇವಸ್ಥಾನದಲ್ಲಿ ದೀಪವನ್ನು ಹಚ್ಚುವುದಕ್ಕೆ ಎಣ್ಣೆಯನ್ನು ದಾನವಾಗಿ ಕೊಡಬೇಕು. ಹಾಗೆಯೆ ಕುಂಬಳಕಾಯಿಯನ್ನು ದಾನವಾಗಿ ಕೊಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.
ಹಾವುಗಳು ಕನಸಿನಲ್ಲಿ ಕಂಡರೆ ಶುಭವೋ ಅಥವಾ ಅಶುಭವೋ ಎಂಬುದು ತಿಳಿದಿದೆಯೇ ನಿಮಗೆ..
ಹಾವುಗಳು ಕನಸಿನಲ್ಲಿ ಕಂಡರೆ ಶುಭವೋ ಅಥವಾ ಅಶುಭವೋ ಎಂಬುದು ತಿಳಿದಿದೆಯೇ ನಿಮಗೆ..ಹಾವುಗಳು ಕನಸಿನಲ್ಲಿ ಕಂಡರೆ ಸಾಮಾನ್ಯವಾಗಿ ಜನರು ಹೆದರಿಕೊಳ್ಳುತ್ತಾರೆ, ಆದರೆ ಕೆಲವೊಂದು ಹಾವುಗಳು ಕನಸಿನಲ್ಲಿ ಬರುವುದರಿಂದ ರಾಜಯೋಗವನ್ನು ತಂದುಕೊಡುತ್ತದೆ. ಶ್ವೇತ ನಾಗ ಸರ್ಪ ಕನಸಿನಲ್ಲಿ ಕಂಡರೆ ವಿಶೇಷವಾಗಿ ರಾಜಯೋಗ ಪ್ರಾಪ್ತಿಯಾಗುತ್ತದೆ. ಕನಸಿನಲ್ಲಿ ಕಪ್ಪು ಹಾವು ಕಂಡರೆ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸಹ ಸೂಚಿಸುತ್ತದೆ.
ಒಂದು ವೇಳೆ ಕನಸಿನಲ್ಲಿ ಹಾವು ಮರವನ್ನು ಏರುತ್ತಿರುವ ಹಾಗೆ ಕಂಡರೆ ನಿಮ್ಮ ಜೀವನದಲ್ಲಿ ಕಷ್ಟಗಳು ಕಡಿಮೆಯಾಗಿ ಏಳಿಗೆ ಎಂಬುದು ಪ್ರಾರಂಭಿಸುತ್ತದೆ. ಕ್ರಮೇಣವಾಗಿ ಧನ ಸಂಪತ್ತು ನಿಮ್ಮ ಹತ್ತಿರ ವೃದ್ಧಿಯಾಗುತ್ತಾ ಹೋಗುತ್ತದೆ. ಸಮಾಜದಲ್ಲಿ ಎಲ್ಲರೂ ಗುರುತಿಸುವಂತೆ ಕೀರ್ತಿಯನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಅದೇ ಹಾವು ಕನಸಿನಲ್ಲಿ ಮರದಿಂದ ಕೆಳಗೆ ಇಳಿಯುತ್ತಿರುವ ಹಾಗೆ ಕಂಡರೆ ನಿಮ್ಮ ಜೀವನದಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಹಾಗೂ ಕಷ್ಟಪಟ್ಟು ದುಡಿದ ಹಣ ಕ್ರಮೇಣವಾಗಿ ನಾಶವಾಗುತ್ತಾ ಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಎರಡು ಹಾವುಗಳು ಜಗಳ ಆಡುವ ಹಾಗೆ ಕನಸು ಕಂಡರೆ ಆ ವ್ಯಕ್ತಿಯು ಸಮಾಜದ ಒಳಿತಿಗಾಗಿ ಕಷ್ಟಪಡುತ್ತಾರೆ ಎಂಬುದನ್ನು ಸೂಚಿಸುತ್ತದೆ. ದೇವಾಲಯದಲ್ಲಿರುವ ಹಾವುಗಳು ಕನಸಿನಲ್ಲಿ ಕಂಡರೆ ದೇವರ ಅನುಗ್ರಹದಿಂದ ಧನ ಪ್ರಾಪ್ತಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ಕನಸಿನಲ್ಲಿ ಹಾವುಗಳು ಹುತ್ತದ ಒಳಗೆ ಹೋಗುತ್ತಿದ್ದರೆ ಧನ ಪ್ರಾಪ್ತಿಯಾಗುತ್ತದೆ ಹಾಗೂ ಅದೇ ಹಾವು ಹುತ್ತದಿಂದ ಹೊರ ಬರುತ್ತಿದ್ದರೆ ಧನ ಸಂಪತ್ತು ನಾಶವಾಗುತ್ತದೆ ಎಂಬುದನ್ನು ಸೂಚಿಸುತ್ತದೆ.
ಒಂದು ವೇಳೆ ಕನಸಿನಲ್ಲಿ ಸಾಕಷ್ಟು ಹಾವುಗಳು ಒಂದೇ ಸಲ ಕಂಡು ಬಂದರೆ ಪ್ರತಿ ಮಂಗಳವಾರದ ದಿನದಂದು ಸುಬ್ರಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ಮುಂದಿನ ದಿನದಲ್ಲಿ ಬರುವ ಸಂಕಷ್ಟಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ವೇಳೆ ಸತ್ತುಹೋದ ಹಾವು ಕನಸಿನಲ್ಲಿ ಕಂಡರೆ ಯಾವುದೋ ದೋಷವು ಆ ವ್ಯಕ್ತಿಗೆ ಕಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯ ಸಂದರ್ಭದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕವನ್ನು ಮಾಡಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ.
ಒಂದು ವೇಳೆ ಹಾವು ಮೇಲಿಂದ ಕೆಳಗೆ ಬೀಳುವ ಹಾಗೆ ಕಾಣಿಸುತ್ತಿದ್ದರೆ ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಈ ರೀತಿಯಾದಾಗ ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕವನ್ನೂ ಮಾಡಿಸಿ ಮತ್ತು ಮೃತ್ಯುಂಜಯ ಹೋಮವನ್ನು ಮಾಡಿಸುವುದರಿಂದ ಮುಂದಿನ ದಿನಗಳಲ್ಲಿ ಬರುವ ಗಂಡಾಂತರಗಳಿಂದ ಅಥವಾ ಕಂಟಕಗಳಿಂದ ಪಾರಾಗಬಹುದು.
ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ.
ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ..ಮನೆಯಿಂದ ಹೊರಗೆ ಹೊರಟಾಗ ಆಕಸ್ಮಿಕವಾಗಿ ಕಪ್ಪು ನಾಯಿ ಕಂಡರೆ ಅದರ ದರ್ಶನವನ್ನು ಪಡೆದುಕೊಳ್ಳುವುದು ತುಂಬಾ ಒಳ್ಳೆಯದು. ಕಪ್ಪು ನಾಯಿಯನ್ನು ನೋಡಿದರೆ ಮನಸ್ಸಿನಲ್ಲಿ ಅಂದುಕೊಂಡು ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ. ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಹಲ್ಲಿಯು ಲೊಚ್ಚುಗುಡುವ ಶಬ್ದವು ಹೆಚ್ಚಾಗಿ ಎಡ ಭಾಗದಿಂದ ಕೇಳಿದರೆ ವಿಶೇಷವಾಗಿ ತುಂಬಾ ಒಳ್ಳೆಯದಾಗುತ್ತದೆ. ಮನೆಯಿಂದ ಹೊರಟಾಗ ಆಕಸ್ಮಿಕವಾಗಿ ಸಮಸಂಖ್ಯೆಯಲ್ಲಿ ಬ್ರಾಹ್ಮಣರು ಸಿಕ್ಕಿದರೆ ತುಂಬಾ ಒಳ್ಳೆಯದು. ಸಮ ಸಂಖ್ಯೆ ಎಂದರೆ 2,4,6,8 ಹೀಗೆ ಬ್ರಾಹ್ಮಣರು ಏನಾದರೂ ಆಕಸ್ಮಿಕವಾಗಿ ಸಿಕ್ಕರೆ ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣವಾಗುತ್ತದೆ.
ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಎಲ್ಲಿಯಾದರೂ ಬಟ್ಟೆ ಸಿಕ್ಕಿಹಾಕಿಕೊಂಡು ಹರಿದು ಹೋದರೆ, ನೀವು ಅಂದುಕೊಂಡಂತ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲಿಯು ಗಣಪತಿಯ ವಾಹನ ವಾಗಿರುವುದರಿಂದ ಇಲಿಯು ಮನೆಯಲ್ಲಿದ್ದರೆ ಗಣಪತಿಯ ಅನುಗ್ರಹವು ಸದಾ ಕಾಲ ಆ ಮನೆಗೆ ಇರುತ್ತದೆ.
ಕಂಚು ಮತ್ತು ಲೋಹದ ವಸ್ತುಗಳನ್ನು ಯಾವುದಾದರೂ ಮುಖ್ಯ ಕೆಲಸದ ಮೇಲೆ ಹೊರ ಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿ ಹೋದರೆ ಕೆಲಸಕಾರ್ಯಗಳಲ್ಲಿ ಯಾವುದೇ ರೀತಿಯ ವಿಘ್ನಗಳು ಆಗದೆ, ಅಡೆತಡೆಗಳು ಆಗದೆ, ಅಂದುಕೊಂಡಂತೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣವಾಗುತ್ತದೆ. ಕೆಲವೊಂದು ಬಾರಿ ಮನೆಯಿಂದ ಹೊರಹೋಗುವಾಗ ಕೆಲವು ಪ್ರಾಣಿ ಪಕ್ಷಿಗಳು ಅಡ್ಡಬಂದರೆ ಅಪಶಕುನ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಬೆಕ್ಕು, ಕಾಗೆ ಅಡ್ಡ ಬಂದಾಗ ಒಂದೆರಡು ನಿಮಿಷ ಅಲ್ಲೇ ನಿಂತು ಗಣಪತಿಯ ಓಂ ಗಂ ಗಣಪತಿಯೇ ನಮಃ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಅಲ್ಲಿಂದ ಹೊರಟರೆ ಯಾವುದೇ ರೀತಿಯ ಅಡೆತಡೆಗಳು, ವಿಘ್ನಗಳು ಉಂಟಾಗುವುದಿಲ್ಲ.
ಓಂ ಭಗವತೇ ನಮಃ ಎಂಬ ದೇವಿಯ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಆ ಜಾಗದಿಂದ ಹೊರಡುವುದರಿಂದ ಮನಸ್ಸಿನಲ್ಲಿ ಅಂದುಕೊಂಡಂತ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಗಳಾಗದೆ ನಿರ್ವಿಘ್ನವಾಗಿ ನೆರವೇರುತ್ತದೆ.
ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ.
ಮನೆಯಿಂದ ಹೊರಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿದರೆ ಅಂದುಕೊಂಡಂತ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ..ಮನೆಯಿಂದ ಹೊರಗೆ ಹೊರಟಾಗ ಆಕಸ್ಮಿಕವಾಗಿ ಕಪ್ಪು ನಾಯಿ ಕಂಡರೆ ಅದರ ದರ್ಶನವನ್ನು ಪಡೆದುಕೊಳ್ಳುವುದು ತುಂಬಾ ಒಳ್ಳೆಯದು. ಕಪ್ಪು ನಾಯಿಯನ್ನು ನೋಡಿದರೆ ಮನಸ್ಸಿನಲ್ಲಿ ಅಂದುಕೊಂಡು ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ. ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಹಲ್ಲಿಯು ಲೊಚ್ಚುಗುಡುವ ಶಬ್ದವು ಹೆಚ್ಚಾಗಿ ಎಡ ಭಾಗದಿಂದ ಕೇಳಿದರೆ ವಿಶೇಷವಾಗಿ ತುಂಬಾ ಒಳ್ಳೆಯದಾಗುತ್ತದೆ. ಮನೆಯಿಂದ ಹೊರಟಾಗ ಆಕಸ್ಮಿಕವಾಗಿ ಸಮಸಂಖ್ಯೆಯಲ್ಲಿ ಬ್ರಾಹ್ಮಣರು ಸಿಕ್ಕಿದರೆ ತುಂಬಾ ಒಳ್ಳೆಯದು. ಸಮ ಸಂಖ್ಯೆ ಎಂದರೆ 2,4,6,8 ಹೀಗೆ ಬ್ರಾಹ್ಮಣರು ಏನಾದರೂ ಆಕಸ್ಮಿಕವಾಗಿ ಸಿಕ್ಕರೆ ಅಂದುಕೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗಿ ಪೂರ್ಣವಾಗುತ್ತದೆ.
ಯಾವುದಾದರೂ ಮುಖ್ಯ ಕೆಲಸದ ಮೇಲೆ ಮನೆಯಿಂದ ಹೊರಟಾಗ ಎಲ್ಲಿಯಾದರೂ ಬಟ್ಟೆ ಸಿಕ್ಕಿಹಾಕಿಕೊಂಡು ಹರಿದು ಹೋದರೆ, ನೀವು ಅಂದುಕೊಂಡಂತ ಕೆಲಸ ಕಾರ್ಯಗಳು ಅಡೆತಡೆಯಿಲ್ಲದೆ ಯಶಸ್ವಿಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇಲಿಯು ಗಣಪತಿಯ ವಾಹನ ವಾಗಿರುವುದರಿಂದ ಇಲಿಯು ಮನೆಯಲ್ಲಿದ್ದರೆ ಗಣಪತಿಯ ಅನುಗ್ರಹವು ಸದಾ ಕಾಲ ಆ ಮನೆಗೆ ಇರುತ್ತದೆ.
ಕಂಚು ಮತ್ತು ಲೋಹದ ವಸ್ತುಗಳನ್ನು ಯಾವುದಾದರೂ ಮುಖ್ಯ ಕೆಲಸದ ಮೇಲೆ ಹೊರ ಹೋಗುವಾಗ ಈ ಎರಡು ವಸ್ತುಗಳನ್ನು ಸ್ಪರ್ಶಿಸಿ ಹೋದರೆ ಕೆಲಸಕಾರ್ಯಗಳಲ್ಲಿ ಯಾವುದೇ ರೀತಿಯ ವಿಘ್ನಗಳು ಆಗದೆ, ಅಡೆತಡೆಗಳು ಆಗದೆ, ಅಂದುಕೊಂಡಂತೆ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣವಾಗುತ್ತದೆ. ಕೆಲವೊಂದು ಬಾರಿ ಮನೆಯಿಂದ ಹೊರಹೋಗುವಾಗ ಕೆಲವು ಪ್ರಾಣಿ ಪಕ್ಷಿಗಳು ಅಡ್ಡಬಂದರೆ ಅಪಶಕುನ ಎಂದು ಹೇಳಲಾಗುತ್ತದೆ. ಉದಾಹರಣೆಗೆ ಬೆಕ್ಕು, ಕಾಗೆ ಅಡ್ಡ ಬಂದಾಗ ಒಂದೆರಡು ನಿಮಿಷ ಅಲ್ಲೇ ನಿಂತು ಗಣಪತಿಯ ಓಂ ಗಂ ಗಣಪತಿಯೇ ನಮಃ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಅಲ್ಲಿಂದ ಹೊರಟರೆ ಯಾವುದೇ ರೀತಿಯ ಅಡೆತಡೆಗಳು, ವಿಘ್ನಗಳು ಉಂಟಾಗುವುದಿಲ್ಲ.
ಓಂ ಭಗವತೇ ನಮಃ ಎಂಬ ದೇವಿಯ ಮಂತ್ರವನ್ನು 11 ಬಾರಿ ಸ್ಮರಣೆಯನ್ನು ಮಾಡಿಕೊಂಡು ನಂತರ ಆ ಜಾಗದಿಂದ ಹೊರಡುವುದರಿಂದ ಮನಸ್ಸಿನಲ್ಲಿ ಅಂದುಕೊಂಡಂತ ಕೆಲಸ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಗಳಾಗದೆ ನಿರ್ವಿಘ್ನವಾಗಿ ನೆರವೇರುತ್ತದೆ.
ಈ 5 ವಸ್ತುಗಳು ಮನೆಯಲ್ಲಿದ್ದರೆ ಬಡತನ ಎಂಬುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ.
ಈ 5 ವಸ್ತುಗಳು ಮನೆಯಲ್ಲಿದ್ದರೆ ಬಡತನ ಎಂಬುದು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..ಎಷ್ಟೋ ಜನ ಕಡುಬಡವರು ಈ 5 ವಸ್ತುಗಳನ್ನು ಅವರ ಬಳಿ ಇಟ್ಟುಕೊಂಡು ಶ್ರೀಮಂತರಾಗಿದ್ದಾರೆ. ನಂಬಿಕೆಯಿಂದಲೇ ಈ ಜಗತ್ತು ನಡೆಯುವುದು ಹಾಗೂ ನಂಬಿಕೆಯೇ ಎಲ್ಲರ ಶಕ್ತಿಯಾಗಿದೆ. ಈಗಿನ ಪ್ರಪಂಚದಲ್ಲಿ ಕೆಲವರು ಐಷಾರಾಮಿ ಜೀವನವನ್ನು ಇನ್ನೂ ಕೆಲವರು ಸಾಧಾರಣ ಜನಜೀವನವನ್ನು ಹಾಗೂ ಮತ್ತೆ ಕೆಲವರು ಬಡವರಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಕೆಲವೊಂದು ಬಾರಿ ವಾಸ್ತುದೋಷದ ಪರಿಣಾಮವಾಗಿ ಶ್ರೀಮಂತರಾಗಿದ್ದವರು ಕಡುಬಡವರಾಗಿ ಜೀವನವನ್ನು ನಡೆಸಬೇಕಾಗುತ್ತದೆ. ಬಡವರಾಗಿದ್ದವರು ಶ್ರೀಮಂತರಾಗಬೇಕು ಎಂದರೆ ಯಾವ 5 ವಸ್ತುಗಳನ್ನು ಅವರ ಮನೆಯಲ್ಲಿ ಇಟ್ಟುಕೊಳ್ಳಬೇಕು. ಹಾಗಾದರೆ ಆ 5 ವಸ್ತುಗಳು ಯಾವುವು ಎಂದು ತಿಳಿದುಕೊಳ್ಳೋಣ ಬನ್ನಿ.
ಯಾರಿಗೆ ಭಗವಂತನಾದ ಗಣೇಶನ ಮೇಲೆ ನಂಬಿಕೆ ಇರುತ್ತದೆಯೋ ಅಂಥವರ ಜೀವನದಲ್ಲಿ ಯಾವುದೇ ರೀತಿಯ ಅಡೆತಡೆಗಳು, ತೊಂದರೆಗಳು, ವಿಘ್ನಗಳು ಬರುವುದಿಲ್ಲ. ಹಾಗಾಗಿ ಗಣೇಶನನ್ನು ವಿಘ್ನವಿನಾಶಕ ಎಂದು ಕರೆಯುತ್ತಾರೆ. ಧನ ಸಂಪತ್ತಿನ ಕಷ್ಟವನ್ನು ದೂರಮಾಡಲು ನೃತ್ಯ ಮಾಡುತ್ತಿರುವ ಗಣಪತಿಯ ಮೂರ್ತಿಯನ್ನು ತೆಗೆದುಕೊಂಡು ಬಂದು ಮನೆಯ ಮುಖ್ಯದ್ವಾರದ ಕಡೆ ದೃಷ್ಟಿ ಇರುವಂತೆ ಇಡಬೇಕು. ಮುಂಜಾನೆ ಎದ್ದ ತಕ್ಷಣ ಗಣೇಶನ ಮೂರ್ತಿಗೆ ನಮಸ್ಕಾರವನ್ನು ಮಾಡಬೇಕು. ಈ ರೀತಿಯಾಗಿ ಮಾಡುವುದರಿಂದ ನಿಂತುಹೋದ ಕೆಲಸಗಳು ಪರಿಪೂರ್ಣವಾಗುತ್ತದೆ ಹಾಗೂ ಧನ ಸಂಪತ್ತು ವೃದ್ಧಿಯಾಗುತ್ತದೆ.
ವಾಸ್ತುವಿನ ದೋಷವನ್ನು ನಿವಾರಣೆ ಮಾಡಲು ಕೊಳಲು ತುಂಬಾ ಸಹಾಯಕಾರಿಯಾಗಿದೆ. ಆರ್ಥಿಕ ಪರಿಸ್ಥಿತಿಯನ್ನು ನೀವು ಸುಸ್ಥಿತಿಗೆ ತರಲು ಚಿಕ್ಕದಾದ ಬೆಳ್ಳಿಯ ಕೊಳಲನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಕೊಳಲು ಮನೆಯಲ್ಲಿದ್ದರೆ ಸಾಕ್ಷಾತ್ ಲಕ್ಷ್ಮೀದೇವಿ ವಾಸವಾಗಿರುತ್ತಾರೆ. ಇದರಿಂದ ವಾಸ್ತುದೋಷ ನಿವಾರಣೆಯಾಗಿ ಧನಸಂಪತ್ತು ಎಂಬುದು ವೃದ್ಧಿಯಾಗಲು ಶುರುವಾಗುತ್ತದೆ.
ಶಂಖವು ವಾಸ್ತುದೋಷವನ್ನು ನಿವಾರಣೆ ಮಾಡುವ ಅದ್ಭುತ ಶಕ್ತಿಯನ್ನು ಹೊಂದಿದೆ.ಯಾರ ಮನೆಯಲ್ಲಿ ಶಂಖವನ್ನು ಕೈಯಲ್ಲಿ ಹಿಡಿದುಕೊಂಡಿರುವ ಲಕ್ಷ್ಮೀದೇವಿ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸವಾಗಿರುತ್ತಾರೆ ಹಾಗೂ ದುಡ್ಡಿಗೆ ಯಾವುದೇ ಕಾರಣಕ್ಕೂ ತೊಂದರೆ ಆಗುವುದಿಲ್ಲ.
ಧನ ಸಂಪತ್ತು ವೃದ್ಧಿ ಆಗಲು ತಾಯಿ ಲಕ್ಷ್ಮೀದೇವಿಯ ಜೊತೆಗೆ ಕುಬೇರ ದೇವರ ಫೋಟೋ ಅಥವಾ ವಿಗ್ರಹವಿದ್ದರೆ ತುಂಬಾ ಒಳ್ಳೆಯದು. ಕುಬೇರ ದೇವರು ಉತ್ತರದಿಕ್ಕಿಗೆ ಮಹಾರಾಜರಾಗಿದ್ದಾರೆ, ಆದ್ದರಿಂದ ಕುಬೇರ ದೇವರನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು. ವಾಸ್ತು ದೋಷವನ್ನು ನಿವಾರಣೆ ಮಾಡಲು ಪ್ರತಿನಿತ್ಯ ಒಂದು ಕರ್ಪೂರವನ್ನು ನಿಯಮಿತವಾಗಿ ಹಚ್ಚುವುದರಿಂದ ಕೆಟ್ಟ ಶಕ್ತಿಗಳು ನಾಶವಾಗುತ್ತದೆ ಹಾಗೂ ವಾಸ್ತು ದೋಷವು ನಿವಾರಣೆಯಾಗುತ್ತದೆ.ಶ್ರೀ ಗುರುರಾಘವೇಂದ್ರರ ಜನ್ಮದ ಹಿಂದಿನ ರಹಸ್ಯಗಳು ಏನು ಎಂಬುದು ತಿಳಿದಿದೆಯೇ ?
ಶ್ರೀ ಗುರುರಾಘವೇಂದ್ರರ ಜನ್ಮದ ಹಿಂದಿನ ರಹಸ್ಯಗಳು ಏನು ಎಂಬುದು ತಿಳಿದಿದೆಯೇ..ಪವಾಡ ಮಾಡಿದವರೆಲ್ಲಾ ಮಹಾಮಹಿಮರು ಆಗುವುದಿಲ್ಲ, ಯಾರು ದೈವಾಂಶಸಂಭೂತರಾಗಿ ಜನಿಸಿ ಜನರ ಕಷ್ಟ ಕಾರ್ಪಣ್ಯಗಳನ್ನು ನೀಗಿಸುತ್ತಾರೋ ಅಂತವರು ಮಾತ್ರ ಮಹಾಮಹಿಮರಾಗುವುದು. ಅಂತಹವರಲ್ಲಿ ಗುರುರಾಘವೇಂದ್ರರರೆ ಅಗ್ರ ಗಣ್ಯರು. ಗುರು ರಾಘವೇಂದ್ರರು ದೈವಾಂಶ ಸಂಭೂತರಾಗಿರುವುದರಿಂದ ಗುರು ರಾಘವೇಂದ್ರರನ್ನು ಕಲಿಯುಗದ ಕಾಮಧೇನು ಎಂದು ಕರೆಯಲಾಗುತ್ತದೆ. ಹೀಗೆ ಜನರ ಕಷ್ಟಗಳನ್ನು ನಿವಾರಿಸುತ್ತಾ ಪ್ರತಿಯೊಬ್ಬರ ಮನೆಯಲ್ಲೂ ನೆಲೆಸಿದ್ದಾರೆ. ರಾಘವೇಂದ್ರ ಸ್ವಾಮಿಗಳಾಗಿ ಅವತಾರವನ್ನು ತಾಳುವುದಕ್ಕೆ ಮೊದಲು ಯಾವ ಯಾವ ಅವತಾರವನ್ನು ತಾಳಿದ್ದರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಗುರುರಾಘವೇಂದ್ರರು ಮಾಡಿದ ಪವಾಡಗಳು ಬಹಳಷ್ಟಿವೆ ಹಾಗೂ ಇಂದಿಗೂ ಬೃಂದಾವನದಲ್ಲಿ ಗುರುರಾಯರ ಬೆಳಕಿದೆ. ಭಕ್ತರ ಕೋರಿಕೆಗಳನ್ನು ಈಡೇರಿಸುವ ಶಕ್ತಿಯು ಇದೆ.ರಾಯರು ಎಂಬ ಹೆಸರಿನಲ್ಲಿ ಬಹಳಷ್ಟು ಶಕ್ತಿ ಇದೆ. ಆದ್ದರಿಂದ ಭಕ್ತಿಯಿಂದ ಗುರು ರಾಯರನ್ನು ಸ್ಮರಿಸಿಕೊಂಡರೆ ಕಷ್ಟಗಳೆಲ್ಲ ದೂರವಾಗುತ್ತದೆ. ಮಂತ್ರಾಲಯದಲ್ಲಿ ಇದ್ದ ಗುರು ರಾಯರೇ ನರಸಿಂಹನ ಅವತಾರಕ್ಕೆ ಕಾರಣಕರ್ತರಾದ ಪ್ರಹ್ಲಾದರು ಎಂಬ ನಂಬಿಕೆ ಇದೆ. ಪೂರ್ವಕಾಲದಲ್ಲಿ ಸೃಷ್ಟಿಕರ್ತನಾದ ಬ್ರಹ್ಮ ದೇವರ ದೇವಗಣದಲ್ಲಿ ಶಂಕುಕರ್ಣರಾಗಿದ್ದ ರಾಯರು ಬ್ರಹ್ಮ ದೇವರ ಆಶೀರ್ವಾದದಿಂದ ಭೂಲೋಕದಲ್ಲಿ ಪ್ರಹ್ಲಾದನಾಗಿ ಜನ್ಮವನ್ನು ತಾಳಿದ್ದರು. ಹಿರಣ್ಯ ಕಶುಪಿನ ಸಂಹಾರಕ್ಕೆ ಕಾರಣಕರ್ತರಾದ ರಾಯರು ಲೋಕ ಕಲ್ಯಾಣದ ನಂತರ ಮುಂದಿನ ಜನ್ಮದಲ್ಲಿ ವ್ಯಾಸರಾಗಿ ಹುಟ್ಟುತ್ತಾರೆ. ವ್ಯಾಸರ ಅವತಾರದ ಬಳಿಕ ಶ್ರೀ ರಾಘವೇಂದ್ರ ತೀರ್ಥ ಯತಿರಾಜರಾಗಿ ಮಂತ್ರಾಲಯದಲ್ಲಿ ನೆಲೆಸುತ್ತಾರೆ.
ಗುರು ರಾಘವೇಂದ್ರರ ಜನನವಾಗಿದ್ದು 16ನೇ ಶತಮಾನದಲ್ಲಿ. ತಿರುಪತಿ ದೇವರ ಅನುಗ್ರಹದಿಂದ ಜನಿಸಿದ ಮಗುವೇ ರಾಘವೇಂದ್ರ ತೀರ್ಥರು.ರಾಘವೇಂದ್ರ ತೀರ್ಥರು ಹಲವಾರು ಕೃತಿಗಳನ್ನು ಸಹ ಬರೆದಿದ್ದಾರೆ. ಮಹಾಭಾರತ ಹಾಗೂ ಇನ್ನಿತರ ಕೃತಿಗಳಿಗೆ ಅರ್ಥ ವಿವರಣೆ ಹಾಗೂ ಭಾಷೆಯಲ್ಲೂ ಕೂಡ ಬರೆದಿದ್ದಾರೆ. ಕಷ್ಟಗಳನ್ನು ಮೆಟ್ಟಿ ನಿಂತ ರಾಯರು ಎಂದಿಗೂ ಇನ್ನೊಬ್ಬರ ಬಳಿ ಕೈಚಾಚಿ ನಿಂತಿದ್ದವರಲ್ಲ. ದೇವರು ಕೊಡುವ ಸಂಪತ್ತು ಬೇಕು ಆದರೆ ದೇವರು ಕೊಡುವ ಬಡತನ ಬೇಡವಾ ಎಂದು ಸಾರಿದವರು ರಾಘವೇಂದ್ರ ತೀರ್ಥರು.