Kannada Astrology

Author: 53721pwpadmin

  • ಮನೆಯಲ್ಲಿ ಈ ವಸ್ತು ಹೆಚ್ಚಾಗಿದ್ದರೆ ದರಿದ್ರತನ ಬರುವುದು ಕಟ್ಟಿಟ್ಟಬುತ್ತಿ.

    ಒಂದು ವೇಳೆ ಮನೆಯಲ್ಲಿ ಈ ವಸ್ತುವು ಹೆಚ್ಚಾಗಿದ್ದರೆ ನೀವು ಎಷ್ಟೇ ಕಷ್ಟಪಟ್ಟು ಹಣವನ್ನು ಸಂಪಾದನೆ ಮಾಡಿದರು ಅದು ನಿಮ್ಮ ಹತ್ತಿರ ನಿಲ್ಲುವುದಿಲ್ಲ ಹಾಗೂ ಲಕ್ಷ್ಮೀದೇವಿಯು ಮನೆಯಲ್ಲಿ ಸ್ಥಿರವಾಗಿ ಅಥವಾ ಶಾಶ್ವತವಾಗಿ ನೆಳೆಸುವುದಿಲ್ಲ ಹಾಗೂ ದರಿದ್ರತನ ಎಂಬುದು ಈ ಒಂದು ವಸ್ತು ನಿಂದ ನಿಮ್ಮ ಮನೆಗೆ ಬರುತ್ತದೆ. ಹಾಗಾದರೆ ಯಾವ ಆ ಒಂದು ವಸ್ತುವಿನಿಂದ ಮನೆಯಲ್ಲಿ ದರಿದ್ರತನ ಎಂಬುದು ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.ಸಾಮಾನ್ಯವಾಗಿ ಎಷ್ಟೋ ಜನರ ಮನೆಯಲ್ಲಿ ಮಾನಸಿಕ ಕಿರಿ ಕಿರಿಗಳು, ಪತಿ-ಪತ್ನಿಯರ ನಡುವೆ ಕಲಹಗಳು, ಅತ್ತೆ-ಸೊಸೆ ಮಧ್ಯ ಜಗಳ, ಮಕ್ಕಳೊಂದಿಗೆ ಜಗಳ ಹೀಗೆ ಪ್ರತಿನಿತ್ಯವೂ ಕಲಹಗಳಲ್ಲಿ ದಿನವು ಮುಗಿದುಹೋಗುತ್ತದೆ. ಎಷ್ಟು ಸಂಪಾದನೆ ಮಾಡಿದರು ಸಾಲ ಮಾಡುವ ಪರಿಸ್ಥಿತಿಗೆ ಬರುತ್ತದೆ ಹಾಗೂ ಮನೆಯಲ್ಲಿ ಖರ್ಚು ಜಾಸ್ತಿಯಾಗುವುದು ಈ ಒಂದು ವಸ್ತುವಿನಿಂದ ಅದೇ ತಲೆ ಕೂದಲು. ಯಾರ ಮನೆಯಲ್ಲಿ ತಲೆ ಕೂದಲು ಹೆಚ್ಚಾಗಿ ಬಿದ್ದಿರುತ್ತದೆಯೋ ಅಥವಾ ಮನೆಯ ಎಲ್ಲ ಮೂಲೆಗಳಲ್ಲೂ ಕೂದಲು ಕಾಣಿಸಿಕೊಳ್ಳುತ್ತಿರುತ್ತದೆಯೋ ಅಂಥವರ ಮನೆಯಲ್ಲಿ ಲಕ್ಷ್ಮೀದೇವಿಯು ಸ್ಥಿರವಾಗಿ ನೆಳೆಸುವುದಿಲ್ಲ.ಮನೆಯಲ್ಲಿ ಹೆಣ್ಣು ಮಕ್ಕಳು ಅಥವಾ ಹೆಂಗಸರು ಇದ್ದರೆ ಕೂದಲು ಉದುರುವುದು ಸಹಜ, ಆದರೆ ಮನೆಯಲ್ಲಿ ಅತಿಯಾಗಿ ಕೂದಲು ಸಿಗುವುದು, ಊಟದಲ್ಲಿ ಕೂದಲು ಸಿಗುವುದು, ಪೊರಕೆಯಲ್ಲಿ ಕಸವನ್ನು ಗುಡಿಸುವಾಗ ಗಂಟು ಗಂಟಾಗಿ ಕೂದಲು ಸಿಗುತ್ತಿದ್ದರೆ ಆ ಮನೆಯಲ್ಲಿ ಲಕ್ಷ್ಮೀದೇವಿಯು ನೆಳೆಸುವುದಿಲ್ಲ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ , ಆದ್ದರಿಂದ ಮನೆಯಲ್ಲಿ ತಲೆಯನ್ನು ಬಾಚಿದ ಮೇಲೆ ಉದುರಿದ ಕೂದಲನ್ನು ಕಸದ ಡಬ್ಬಿಗೆ ಹಾಕುವುದಕ್ಕೂ ಮುಂಚೆ ಈ ಚಿಕ್ಕ ಕೆಲಸವನ್ನು ಮಾಡಬೇಕು.

    ಮನೆಯಲ್ಲಿ ಉದುರಿದ ಕೂದಲನ್ನು ಒಟ್ಟಾಗಿ ಸೇರಿಸಿ ಗಂಟನ್ನು ಹಾಕಿ ಒಂದು ಖಾಲಿ ಹಾಳೆಯಲ್ಲಿ ಅದನ್ನು ಸುತ್ತಿ ನಂತರ ಕಸದ ಡಬ್ಬಿಗೆ ಅಥವಾ ಹೊರಗಡೆ ಎಲ್ಲಾದರೂ ಎಸೆಯಬೇಕು. ಒಂದು ವೇಳೆ ಯಾರಾದರೂ ಮನೆಗೆ ಬಂದು ಹೋದಾಗ ಅಥವಾ ಗಾಳಿ ಬಿಸಿ ಆಕಸ್ಮಿಕವಾಗಿ ಕೂದಲು ಮನೆಯೊಳಗೆ ಬರುತ್ತಿದ್ದಾಗ ಸ್ವಲ್ಪ ಎಚ್ಚರದಿಂದ ಇರಬೇಕು. ಇದರಿಂದ ಮನೆಯಲ್ಲಿ ಹಣಕಾಸಿನ ಖರ್ಚು ಹಾಗೂ ಕಷ್ಟಪಟ್ಟು ದುಡಿದ ಹಣವು ಖರ್ಚಾಗುವುದನ್ನು ತಪ್ಪಿಸಬಹುದು.

  • ದ್ವಾಪರ ಯುಗದಲ್ಲಿಅ ರ್ಜುನನು ಪ್ರತಿಷ್ಠಾಪಿಸಿದ ಮುಕ್ತೀಶ್ವರ ಶಿವಲಿಂಗದ ಬಗ್ಗೆ ಕಿರು ಪರಿಚಯ.

    ಮುಕ್ತಿ ಎಂದರೆ ವಿಮೋಚನೆ ಎಂದರ್ಥ, ದ್ವಾಪರ ಯುಗದಲ್ಲಿ ಅರ್ಜುನನು ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ ಅನೇಕ ಸ್ಥಳಗಳನ್ನು ಸಂಚರಿಸುತ್ತ ಸಾಕಷ್ಟು ಶಿವಲಿಂಗಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಆ ಶಿವಲಿಂಗಗಳಲ್ಲಿ ಮುರುಗಮಲೆಯ ಮುಕ್ತೀಶ್ವರ ಶಿವಲಿಂಗ ಪ್ರಮುಖವಾದದ್ದು ಆಗಿದೆ. ಅರ್ಜುನನ ಬ್ರಹ್ಮಹತ್ಯ ದೋಷವನ್ನು ನಿವಾರಣೆ ಮಾಡಿದ ಕಾರಣದಿಂದಾಗಿ ಮುಕ್ತೀಶ್ವರ ಎಂಬ ಹೆಸರು ಬಂದಿದೆ.ಅರ್ಜುನನ್ನು ಪ್ರತಿಷ್ಠಾಪಿಸಿದ ಈ ಶಿವಲಿಂಗಕ್ಕೆ ಸಾವಿರಾರು ವರ್ಷಗಳ ಹಿಂದೆ ಭಾರದ್ವಾಜ ಮುನಿಗಳು ಪೂಜಿಸಿದ್ದಾರೆ. ಆದ್ದರಿಂದ ಈ ಕ್ಷೇತ್ರಕ್ಕೆ ಭಾರದ್ವಾಜ ಕ್ಷೇತ್ರ ಎಂದು ಕರೆಯಲಾಗುತ್ತದೆ. ದೇವಾಲಯದ ಕೆಳಗಡೆ ಒಂದು ಗುಹೆಯಿದೆ ಹಾಗೂ ಆ ಗುಹೆಯಲ್ಲಿ ಬಹಳಷ್ಟು ಮಂದಿ ಋಷಿಗಳು ತಪಸ್ಸನ್ನು ಮಾಡಿ ಮುಕ್ತಿಯನ್ನು ಪಡೆದುಕೊಂಡಿದ್ದಾರೆ. ಒಮ್ಮೆ ಭಾರದ್ವಾಜ ಮುನಿಗಳ ಹೆತ್ತವರು ಅನಾರೋಗ್ಯಕ್ಕೆ ಪೀಡಿತರಾದಾಗ ಕಾಶಿಗೆ ಹೋಗಲು ಸಾಧ್ಯವಾಗಲಿಲ್ಲ, ಆಗ ಅವರ ಕಷ್ಟವನ್ನು ಅರಿತ ಗಂಗಾಮಾತೆಯು ಭಾರದ್ವಾಜ ಮುನಿಗಳು ತಪಸ್ಸು ಮಾಡುತ್ತಿದ್ದ ಜಾಗದಲ್ಲಿ ಉದ್ಭವಿಸುತ್ತಾರೆ. ಬಳಿಕ ಈ ನೀರನ್ನು ತಮ್ಮ ಸ್ನಾನ, ಸಂಧ್ಯಾವಂದನೆಗೆ ಉಪಯೋಗಿಸಲು ಪ್ರಾರಂಭ ಮಾಡುತ್ತಾರೆ. ಇಂದಿಗೂ ಆ ನೀರು ಕಾಶಿಯಿಂದ ಹರಿದು ಬರುತ್ತದೆ ಎಂಬುದು ಜನರ ನಂಬಿಕೆ. ಈ ನೀರನ್ನು ಸರ್ವ ರೋಗ ನಿವಾರಣೆ ಎಂದು ಕೂಡ ಕರೆಯಲಾಗುತ್ತದೆ.

    ಈ ಕುಂಡಿಕೆಯಲ್ಲಿ ಇರುವ ನೀರು ಯಾವ ಕಾಲದಲ್ಲೂ ಬತ್ತಿ ಹೋಗುವುದಿಲ್ಲ, ಸಾವಿರಾರು ವರ್ಷಗಳಿಂದ ಈ ನೀರನ್ನು ಸೇವಿಸಿದವರು ಅನಾರೋಗ್ಯದಿಂದ ಗುಣಮುಖರಾಗಿದ್ದಾರೆ. ಭಾರದ್ವಾಜ ಮುನಿಗಳು ಇದ್ದಾಗ ಈ ದೇವಾಲಯದಲ್ಲಿ ಸಪ್ತಮಾತೃಕೆಯರನ್ನು ಸಹ ಪ್ರತಿಷ್ಠಾಪನೆ ಮಾಡಿದ್ದರು ಹಾಗೂ ಭಕ್ತಾದಿಗಳು ಇಂದಿಗೂ ಸಪ್ತಮಾತೃಕೆಯರ ಪೂಜೆಯನ್ನು ಮಾಡುತ್ತಾರೆ. ಮಾಟ ಮಂತ್ರ ಪ್ರಯೋಗಕ್ಕೆ ಒಳಗಾಗಿದ್ದವರು ಸಪ್ತಮಾತೃಕೆಯರ ಮುಂದೆ ಸಣ್ಣದಾದ ಕಪ್ಪು ಬಳೆಯನ್ನು ಇಟ್ಟು ಪೂಜೆ ಮಾಡಿದರೆ ಮಾಟಮಂತ್ರದ ಪ್ರಯೋಗವು ನಿವಾರಣೆಯಾಗುತ್ತದೆ ಎಂಬ ಅಚಲವಾದ ನಂಬಿಕೆ ಇದೆ.ಅರ್ಜುನನು ಶಿವಲಿಂಗದ ಜೊತೆಗೆ ಪಾರ್ವತಿ, ಗಣೇಶ ಹಾಗೂ ಸುಬ್ರಮಣ್ಯ ಸ್ವಾಮಿಯ ಪ್ರಾಣಪ್ರತಿಷ್ಠಾಪನೆಯನ್ನು ಕೂಡ ಮಾಡಿದ್ದಾರೆ. ಎಲ್ಲಾ ಶಿವನ ದೇವಾಲಯದಲ್ಲಿ 1 ನಂದಿ ಇದ್ದರೆ, ಮುಕ್ತೀಶ್ವರ ದೇವಾಲಯದಲ್ಲಿ ಎರಡು ನಂದಿ ಇದೆ. ಇಲ್ಲಿರುವ ಹತ್ತಿ ಮರಕ್ಕೆ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಬಟ್ಟೆಯನ್ನು ಕಟ್ಟುತ್ತಾರೆ. ಇದಕ್ಕಾಗಿ ಮುಕ್ತೀಶ್ವರ ಸ್ವಾಮಿಯ ಆಲಯದಲ್ಲಿ ಕೆಂಪು ಬಣ್ಣದ ಹರಕೆಯ ಬಟ್ಟೆಯನ್ನು ಪಡೆದು 11 ರೂಪಾಯಿ ಕಾಣಿಕೆಯನ್ನು ಹರಕೆಯ ಬಟ್ಟೆಯೊಳಗೆ ಇಟ್ಟು ಮುಕ್ತೀಶ್ವರ ಸ್ವಾಮಿಯನ್ನು ಸ್ಮರಿಸಿಕೊಂಡು ಹತ್ತಿ ಮರಕ್ಕೆ ಮೂರು ಪ್ರದಕ್ಷಿಣೆಯನ್ನು ಹಾಕಿ ನಂತರ ಕಟ್ಟಲಾಗುತ್ತದೆ. ಸಂತಾನ ಪ್ರಾಪ್ತಿಗಾಗಿ,ಕಂಕಣ ಭಾಗ್ಯಕ್ಕಾಗಿ,ಉದ್ಯೋಗ ಸಮಸ್ಯೆಗಾಗಿ ಹಾಗೂ ಇತರೆ ಕಾರಣಗಳಿಗೆ ಹರಕೆಯನ್ನು ಕಟ್ಟುವುದರಿಂದ ಫಲವು ದೊರೆಯುತ್ತದೆ.ಈ ಮುರುಗಮಲೆ ಕ್ಷೇತ್ರವು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಿಂದ 9 ಕಿಲೋಮೀಟರ್ ದೂರದಲ್ಲಿದೆ.

  • ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ ಆಷಾಡ ಕಳೆಯುತ್ತಲೇ ಈ ರಾಶಿಗಳಿಗೆ ರಾಜಯೋಗ ಪ್ರಾರಂಭ ದಿನಭವಿಷ್ಯ.

    ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನ ವಶ, ಜನ ವಶ, ಶತ್ರು ನಾಶ, ಸ್ತ್ರೀ– ಪುರುಷ ವಶೀ ಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892.

    ಮೇಷ:- ನಿಮ್ಮಲ್ಲಿನ ಆತ್ಮವಿಶ್ವಾಸ ಮತ್ತು ನಿಮ್ಮ ಬಗೆಗಿನ ನಂಬಿಕೆ ಸ್ಥೈರ್ಯ ಧೈರ್ಯಗಳು ನಿಮಗೆ ಅನುಕೂಲವಾಗುವವು. ನೀವು ನಡೆಯುವ ದಾರಿಯಲ್ಲಿ ಯಾವುದೇಅಡೆತಡೆಗಳು ಕಂಡುಬರುವುದಿಲ್ಲ. ನಿಮ್ಮ ಸಹಾಯಕ್ಕೆ ಸ್ನೇಹಿತರು ನಿಮ್ಮೊಂದಿಗೆ ಹೆಜ್ಜೆ ಹಾಕುವರು.

    ವೃಷಭ:- ನಿಮ್ಮ ಮನಸ್ಸಿಗೆ ಸಂತೋಷ ಎನಿಸುವ ಕಾರ್ಯವು ಪೂರ್ಣಗೊಳ್ಳುವುದು. ಮಕ್ಕಳು ವಿದ್ಯಾಕಲಿಕೆಯಲ್ಲಿಪ್ರಗತಿ ತೋರಿ ನಿಮಗೆ ಹರ್ಷವನ್ನುಂಟು ಮಾಡುವರು. ಹಿರಿಯರ ಆಶೀರ್ವಾದವು ಬೇಗನೆ ದೊರೆಯುವುದು.ಮಿಥುನ:- ಬಹು ನಿರೀಕ್ಷಿತವಾದ ದೂರ ಪ್ರವಾಸ ಕುರಿತು ಮಾಹಿತಿ ಲಭ್ಯವಾಗುವುದು. ಆ ಮೂಲಕ ನಿಮ್ಮ ಬಹುದಿನದಕನಸು ನನಸಾಗುವುದು. ಹಣಕಾಸಿನ ಪರಿಸ್ಥಿತಿಯು ಅದಕ್ಕೆ ಪೂರಕವಾಗಿ ಲಭ್ಯವಾಗುವುದರಿಂದ ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ.

    ಕಟಕ:- ಪರೋಪಕಾರಾರ್ಥಂ ಇದಂ ಶರೀರಂ ಎಂದು ಭಾವಿಸಿರುವ ನೀವು ಅನೇಕ ಜನರಿಗೆ ಸಹಾಯ ಹಸ್ತ ನೀಡುವಿರಿ. ಈ ನಿಮ್ಮಮನೋಭಾವನೆಯು ಸರ್ವ ಜನರಿಂದ ಮೆಚ್ಚುಗೆಗೆ ಪಾತ್ರವಾಗುವುದು. ಆದರೆ ಮಾತಿನಲ್ಲಿ ನಯ, ವಿನಯ ಇರಲಿ.

    ಸಿಂಹ:- ದೈಹಿಕ ಬಲದ ಜೊತೆಗೆ ಬುದ್ಧಿಯ ತೇಜಸ್ಸು ಹರಿತವಾದ್ದರಿಂದ ನಿಮ್ಮ ಊಹೆ ತರ್ಕಗಳು ಸರಿ ಎನಿಸುವುದು. ಇದರಿಂದನಿಮ್ಮ ಆಪ್ತರಿಂದ ಮೆಚ್ಚುಗೆಯನ್ನು ಪಡೆಯುವಿರಿ. ಆದರೆ ಕುಟುಂಬದ ಸದಸ್ಯರಿಂದ ಮೂದಲಿಕೆಗೆ ಗುರಿ ಆಗುವಿರಿ.ಕನ್ಯಾ:- ಎಷ್ಟೇ ಬುದ್ಧಿಶಾಲಿಯಾದರೂ ಎಲ್ಲಾ ವಿಷಯಗಳಲ್ಲೂ ಅಥವಾ ಎಲ್ಲಾ ರಂಗದಲ್ಲೂ ನೀವೇನುಸರ್ವಜ್ಞರಲ್ಲ. ಹಾಗಾಗಿ ಅನ್ಯರ ಅನುಭವ ಮತ್ತು ಹಿತವಚನಗಳನ್ನು ಆಲಿಸಿದಲ್ಲಿ ನಿಮಗೆ ಒಳಿತಾಗುವುದು. ಆದಾಗ್ಯೂ ಜನರಲ್ಲಿ ನಿಮ್ಮ ಬಗ್ಗೆ ಗೌರವವಿರುತ್ತದೆ.

    ತುಲಾ:- ಹೊಸ ಜನರ ಪರಿಚಯದೊಂದಿಗೆ ಹೊಸದಾದ ಜವಾಬ್ದಾರಿ ನಿಮ್ಮ ಹೆಗಲೇರುವ ಸಾಧ್ಯತೆ ಇದೆ. ರಾಜಕೀಯ ಇಲ್ಲವೆ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ಸಂಪರ್ಕದೊರೆತು ಅದರಿಂದ ನಿಮ್ಮ ವ್ಯಾಪಾರ, ವ್ಯವಹಾರಗಳಿಗೆ ಹೆಚ್ಚಿನ ಅನುಕೂಲವಾಗುವವು.

    ವೃಶ್ಚಿಕ:- ನಿಮ್ಮ ಮಕ್ಕಳು ನಿಮಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದರ ಹಿಂದೆ ಯಾವುದೋಮಹತ್ತರ ಬಯಕೆ ಈಡೇರಿಸಿಕೊಳ್ಳುವ ಇರಾದೆ ಇರುತ್ತದೆ. ಈ ಬಗ್ಗೆ ಸೂಕ್ಷ ್ಮವಾಗಿ ಗಮನಿಸಿ ಅವರಿಗೆ ಸಹಾಯ ಮಾಡಿ. ಅವರೂ ಖುಷಿ ಪಡುವರು.

    ಧನುಸ್ಸು:- ನಿಮ್ಮ ಸಮಸ್ಯೆಗಳೇ ಸಾಕಷ್ಟು ಇರುವಾಗ ಪರರ ಸಂಕಷ್ಟಗಳಿಗೆ ಮರುಗಿ ಸಹಾಯ ಮಾಡಲು ಹೋಗಿ ನೀವೇಸಿಕ್ಕಿಹಾಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯ ಪ್ರವೃತ್ತರಾಗಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ.

    ಮಕರ:- ಸರಿದಾರಿಯಲ್ಲಿದ್ದರೂ ಆಪ್ತರಿಂದ ಸಲಹೆ ಸೂಚನೆ ಪಡೆಯಿರಿ. ನಿಮ್ಮ ಆಂತರಿಕತುಮುಲಗಳ ನಿವಾರಣೆಗಾಗಿ ಮನೋನಿಯಾಮಕ ರುದ್ರದೇವರಲ್ಲಿ ಪ್ರಾರ್ಥಿಸಿಕೊಳ್ಳಿ. ನಿರುದ್ಯೋಗಿಗಳಿಗೆ ಸಣ್ಣಪುಟ್ಟ ನೌಕರಿ ದೊರೆಯುವ ಸಂಭವವಿರುತ್ತದೆ.

    ಕುಂಭ:- ಕ್ಷಲ್ಲಕರನ್ನು ನೀವು ದೂರವಿಡುವುದೇ ಒಳ್ಳೆಯದು. ನಿಮ್ಮ ಪ್ರಗತಿಯನ್ನು ಕಂಡು ಕುರುಬುವ ವ್ಯಕ್ತಿಗಳು ನಿಮ್ಮಸುತ್ತಮುತ್ತಲಿನಲ್ಲಿಯೇ ಇರುತ್ತಾರೆ. ಅವರನ್ನು ಉದಾಸೀನ ಮಾಡುವುದೇ ಲೇಸು. ಈ ಹಿಂದೆ ಬರೆದ ಪರೀಕ್ಷೆ ಫಲಿತಾಂಶವು ಶೀಘ್ರದಲ್ಲಿ ಬರುವುದು.

    ಮೀನ:- ನಿಮಗೆ ನೀವೇ ಗುರುವಾಗಿ ನಿಮ್ಮ ಇತಿಮಿತಿಯ ಬಗ್ಗೆ ತಿಳಿಯಿರಿ. ಇದರಿಂದ ಸಮಾಜದಲ್ಲಿ ನಿಮಗೆ ಗೌರವದೊರೆಯುವುದು. ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿರುವುದಿಲ್ಲ. ಹಾಗಾಗಿ ಹಣ ಖರ್ಚಿನ ಬಗ್ಗೆ ಕೈಬಿಗಿ ಹಿಡಿತವಿರಲಿ.

  • ಈ ವಸ್ತುವನ್ನು ಬೇರೆಯವರಿಗೆ ಕೊಟ್ಟರೆ ದರಿದ್ರತನ ಬರುವುದು ಖಚಿತ

    ಈ ಒಂದು ವಸ್ತುವನ್ನು ಮನೆಗೆ ಯಾರಾದರೂ ಬಂದಾಗ ಯಾವುದೇ ಕಾರಣಕ್ಕೂ ನೀಡಬಾರದು. ಒಂದು ವೇಳೆ ಈ ವಸ್ತುವನ್ನು ಕೊಟ್ಟಿದ್ದೆ ಆದಲ್ಲಿ ಕಷ್ಟದ ದಿನಗಳು ಪ್ರಾರಂಭವಾಗುತ್ತದೆ ಹಾಗೂ ಜೀವನಪರ್ಯಂತ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಮನೆಯಲ್ಲಿರುವ ಯಾವ ಒಂದು ವಸ್ತುವನ್ನು ಬೇರೆಯವರಿಗೆ ನೀಡಬಾರದು ಎಂದು ತಿಳಿದುಕೊಳ್ಳೋಣ ಬನ್ನಿ.ಜೀವನದಲ್ಲಿ ಮನುಷ್ಯನು ಶ್ರೀಮಂತನಾಗಬೇಕು ಎಂದರೆ ತಾಯಿ ಮಹಾಲಕ್ಷ್ಮಿ ಆಶೀರ್ವಾದ ಮುಖ್ಯವಾಗಿರುತ್ತದೆ. ಲಕ್ಷ್ಮೀದೇವಿಗೆ ಶುಚಿ ಎಂದರೆ ಬಹಳ ಇಷ್ಟ, ಆದ್ದರಿಂದ ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಲಕ್ಷ್ಮಿ ದೇವಿಗೆ ಸಂಬಂಧಿಸಿದಂತಹ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಲಕ್ಷ್ಮಿ ದೇವಿಗೆ ಸಂಬಂಧಿಸಿದ ವಸ್ತುಗಳೆಂದರೆ ರುಬ್ಬುವ ಕಲ್ಲು, ಪೊರಕೆ, ಮನೆಯ ಮುಖ್ಯದ್ವಾರದ ಹೊಸ್ತಿಲು ಈ ರೀತಿಯಾದ ವಸ್ತುಗಳನ್ನು ಕಾಲಿನಿಂದ ತುಳಿಯುವುದು ಆಗಲಿ ಅಥವಾ ಕುಳಿತುಕೊಳ್ಳುವುದು ಆಗಲಿ ಅದರ ಮೇಲೆ ಮಾಡಬಾರದು. ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಗೆ ರಕ್ಷಣೆಯೂ ದೊರೆಯುತ್ತದೆ ಹಾಗೂ ಹೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗುತ್ತದೆ.

    ಮಲಗುವ ಕೋಣೆಯ ಹಾಸಿಗೆಯ ಮೇಲೆ ಯಾವುದೇ ಕಾರಣಕ್ಕೂ ಹಣವನ್ನು ಮತ್ತು ಚಿನ್ನಾಭರಣವನ್ನು ಇಡಬಾರದು. ಒಂದು ವೇಳೆ ಮಲಗುವ ಹಾಸಿಗೆಯ ಮೇಲೆ ಹಣವನ್ನು ಅಥವಾ ಆಭರಣವನ್ನು ಇಟ್ಟಿದ್ದೆ ಆದಲ್ಲಿ ದರಿದ್ರತನ ಎಂಬುದು ಪ್ರಾರಂಭವಾಗುತ್ತದೆ ಹಾಗೂ ಕಷ್ಟಗಳು ದಿನೇದಿನೇ ಹೆಚ್ಚಾಗುತ್ತದೆ. ಸುಮಂಗಲಿಯರು, ಮುತ್ತೈದೆಯರು ಅಥವಾ ಹೆಣ್ಣು ಮಕ್ಕಳು ಮನೆಯಲ್ಲಿ ಉಪಯೋಗಿಸುವ ಕೊಬ್ಬರಿ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು.ಒಂದು ವೇಳೆ ನಿಮ್ಮ ಮನೆಗೆ ಬಂಧು ಮಿತ್ರರು ಅಥವಾ ಸ್ನೇಹಿತರು ಬಂದರೆ ಅವರಿಗೆ ಹೊಸದಾದ ಒಂದು ಕೊಬ್ಬರಿಎಣ್ಣೆಯ ಡಬ್ಬವನ್ನು ಕೊಡಬೇಕು ಹಾಗೂ ಯಾವುದೇ ಕಾರಣಕ್ಕೂ ಮನೆಯಲ್ಲಿ ಉಪಯೋಗಿಸಿದ ಕೊಬ್ಬರಿ ಎಣ್ಣೆಯನ್ನು ಕೊಡಬೇಡಿ. ಒಂದು ವೇಳೆ ನೀವೇನಾದರೂ ಕೊಬ್ಬರಿ ಎಣ್ಣೆಯನ್ನು ಕೊಟ್ಟಿದ್ದೆ ಆದಲ್ಲಿ ಲಕ್ಷ್ಮೀದೇವಿಯು ನಿಮ್ಮ ಮನೆಯಲ್ಲಿ ನೆಳೆಸುವುದಿಲ್ಲ ಮತ್ತು ನೀವು ಯಾರಿಗೆ ಕೊಬ್ಬರಿ ಎಣ್ಣೆಯನ್ನು ಕೊಡುತ್ತಿರೋ ಅವರ ಮನೆಗೆ ಲಕ್ಷ್ಮೀದೇವಿಯು ಹೊರಟು ಹೋಗುತ್ತಾಳೆ. ಇದರಿಂದ ಮನೆಯಲ್ಲಿ ಹಣಕಾಸಿನ ಸಮಸ್ಯೆ ಶುರುವಾಗಿ ಸಾಲ ಮಾಡುವ ಸ್ಥಿತಿಗೆ ಬರಬೇಕಾಗುತ್ತದೆ. ಕೊಬ್ಬರಿ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಚೆಲ್ಲಬೇಡಿ ಹಾಗೂ ಅದನ್ನು ತುಳಿಯಬೇಡಿ ಇದರಿಂದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ.

  • ಆಕಸ್ಮಿಕವಾಗಿ ತಿಳಿದೋ ಅಥವಾ ತಿಳಿಯದೆ ಸರ್ಪಕ್ಕೆ ತೊಂದರೆಯಾದರೆ ಏನಾಗುತ್ತದೆ ಎಂಬುದು ತಿಳಿದಿದೆಯೇ ?

    ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ರೀತಿಯಲ್ಲಿ ದೇವರ ಆರಾಧನೆಯನ್ನು ಮಾಡುತ್ತಾರೆ. ಮುಖ್ಯವಾಗಿ ನಾಗದೇವರ ಆರಾಧನೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಪ್ರಾಣಿಯನ್ನು ದೈವ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಒಂದು ವೇಳೆ ಮನುಷ್ಯನಿಂದ ಆ ಪ್ರಾಣಿಗೆ ತೊಂದರೆಯಾದರೆ ಅವನು ಮುಂದಿನ ಪೀಳಿಗೆಗೆ ಅಥವಾ ಅವನಿಗೆ ಬಹಳಷ್ಟು ರೀತಿಯಲ್ಲಿ ತೊಂದರೆಯನ್ನು ಕೊಡುತ್ತದೆ. ವಿಶೇಷವಾಗಿ ಸರ್ಪಗಳಿಗೆ ಈ ರೀತಿ ತೊಂದರೆಯಾದಾಗ ಮುಂದಿನ ಪೀಳಿಗೆ ಏಳಿಗೆ ಆಗುವುದು ಬಹಳ ಕಷ್ಟ.ಮುಖ್ಯವಾಗಿ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಲು ಬಿಡುವುದಿಲ್ಲ ಮತ್ತು ಚರ್ಮದ ರೋಗಗಳು ಶುರುವಾಗಲು ಪ್ರಾರಂಭವಾಗುತ್ತದೆ. ಸರ್ಪವನ್ನು ದೇವರಾಗಿ ಪೂಜೆ ಮಾಡುತ್ತಿದ್ದೇವೆ, ಆಕಸ್ಮಿಕವಾಗಿ ನಮಗೆ ತಿಳಿಯದೆ ಸರ್ಪಕ್ಕೆ ತೊಂದರೆಯಾದಾಗ ಮತ್ತು ಅದಕ್ಕೆ ಮೋಕ್ಷ ಸಿಗದೆ ಇದ್ದಾಗ, ಮನುಷ್ಯನ ದೇಹದ ಮೇಲೆ ಅದರಲ್ಲೂ ಚರ್ಮದ ಸಮಸ್ಯೆಯಿಂದ ಬಳಲುವಂತೆ ಆಗುತ್ತದೆ.
    ಒಂದು ವೇಳೆ ದಾರಿಯಲ್ಲಿ ಹೋಗಬೇಕಾದರೆ ಆಕಸ್ಮಿಕವಾಗಿ ಸರ್ಪ ಕಂಡು ನಮಗೆ ತಿಳಿಯದೆ ಏನಾದರೂ ಅವಘಡ ಆಗಿದ್ದರೆ ನಾವು ಅದನ್ನು ಹಾಗೆ ಬಿಟ್ಟು ಹೋಗಬಾರದು ಅದಕ್ಕೆ ಸಂಸ್ಕಾರವನ್ನು ಮಾಡಬೇಕು. ಒಂದು ವೇಳೆ ಸರ್ಪಕ್ಕೆ ಮೋಕ್ಷ ಸಿಗದೆ ಇದ್ದಾಗ ದೇಹದ ಹಲವಾರು ಭಾಗದಲ್ಲಿ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ದೇಹದ ಚರ್ಮ ಕಪ್ಪಾಗುತ್ತ ಬರುತ್ತದೆ, ದೇಹದಿಂದ ಚರ್ಮವು ಎಡೆಯುತ್ತಾ ಬರುತ್ತದೆ.ಈ ರೀತಿಯ ಸಮಸ್ಯೆ ಇದ್ದಾಗ ಭಾನುವಾರದ ದಿನ ಹುತ್ತದ ಮಣ್ಣನ್ನು ತೆಗೆದುಕೊಂಡು ಮನೆಯಲ್ಲಿ ಶೇಖರಣೆ ಮಾಡಿ ಇಡಬೇಕು. ಸೋಮವಾರದ ದಿನ ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಮನೆಯಲ್ಲಿ ಶೇಖರಣೆ ಮಾಡಿದ ಹುತ್ತದ ಮಣ್ಣಿನಿಂದ ಶಿವಲಿಂಗವನ್ನು ಮಾಡಬೇಕು. ಶಿವಲಿಂಗವನ್ನು ಮಾಡಿದ ನಂತರ ಪ್ರತಿನಿತ್ಯ 108 ಬಿಲ್ವಪತ್ರೆಯನ್ನು ಇಟ್ಟು ಪೂಜೆಯನ್ನು ಮಾಡಬೇಕು. ಈ ರೀತಿಯ ಪೂಜೆಯನ್ನು 21 ದಿನಗಳ ಕಾಲ ಪ್ರತಿನಿತ್ಯವೂ ಮಾಡಬೇಕು. 22 ನೇ ದಿನ ಹರಿಯುವ ನದಿಯ ತೀರಕ್ಕೆ ಹೋಗಿ ಅಲ್ಲಿ ಕುಳಿತುಕೊಂಡು ಶಿವಲಿಂಗವನ್ನು ಕರಗಿಸಬೇಕು. ಶಿವಲಿಂಗವನ್ನು ಕರಗಿಸಿದ ನಂತರ ಆ ಮಣ್ಣನ್ನು ತೆಗೆದುಕೊಂಡು ದೇಹದ ಯಾವ ಭಾಗದಲ್ಲಿ ಸಮಸ್ಯೆ ಉದ್ಭವವಾಗಿ ಇರುತ್ತದೆಯೋ ಆ ಭಾಗಕ್ಕೆ ಲೇಪನ ಮಾಡಿಕೊಂಡು ನಂತರ ಸ್ನಾನ ಮಾಡುವುದರಿಂದ ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ.

  • ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಆಸಕ್ತಿಯಿಲ್ಲ ಎಂದರೆ ಈ ಉಪಾಯವನ್ನು ಮಾಡಿ ನೋಡಿ.

    ಕೋವಿಡ್ ಕಾರಣದಿಂದಾಗಿ ಇಡೀ ರಾಜ್ಯವೇ ಲಾಕ್ ಡೌನ್ ಆಗಿರುವುದರಿಂದ ಬಹಳಷ್ಟು ಮಂದಿಗೆ ತೊಂದರೆಯಾಗಿದೆ. ಅದರಲ್ಲೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಬಹಳ ತೊಂದರೆಯಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ತಂದೆ-ತಾಯಿಗಳು ಬಹಳಷ್ಟು ಕನಸನ್ನು ಪಟ್ಟಿರುತ್ತಾರೆ, ಆದರೆ ಈಗಿರುವ ಸಂದರ್ಭವನ್ನು ನೋಡಿದರೆ ಬುದ್ಧಿವಂತ ಮಕ್ಕಳು ಕೂಡ ಮಂದಹೀನ ಬುದ್ಧಿಯವರು ಆಗುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಶುರುವಾಗಿದೆ ಹಾಗೂ ಇದರಿಂದ ಜ್ಞಾಪಕ ಶಕ್ತಿಯೂ ಕಡಿಮೆಯಾಗುತ್ತಿದೆ. ಆದರೆ ಇದರಿಂದ ಮಕ್ಕಳ ಮೇಲೆ ಯಾವುದೇ ಕಾರಣಕ್ಕೂ ತಂದೆ-ತಾಯಂದಿರು ಒತ್ತಡವನ್ನು ಹಾಕಬಾರದು. ಈ ಕಾರಣಗಳಿಗಾಗಿಯೇ ವಿಶೇಷವಾದ ಹಯಗ್ರೀವ ಸ್ವಾಮಿಯ ಮೂಲ ಮಂತ್ರವನ್ನು ಜಪಿಸಬೇಕು.

    ಒಂದು ವೇಳೆ ಮಕ್ಕಳಿಗೆ ವಿದ್ಯಾಭ್ಯಾಸದ ಕೊರತೆ ಆಗುತ್ತಿದೆ ಅಥವಾ ಎಷ್ಟು ಓದಿದರೂ ಜ್ಞಾಪಕಶಕ್ತಿ ಇಲ್ಲ ಎನ್ನುವವರು ಹಯಗ್ರೀವ ಸ್ವಾಮಿಯ ಮಂತ್ರವನ್ನು ತಂದೆ-ತಾಯಿಯರು ತಮ್ಮ ಮಕ್ಕಳ ಕೈಯಲ್ಲಿ ಹೇಳಿಸಬೇಕು. ಈ ಮಂತ್ರವನ್ನು ಜಪಿಸಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ವಿದ್ಯೆಯಲ್ಲಿ ಏಳಿಗೆಯನ್ನು ಸಹ ಕಾಣಬಹುದು.

    ಹಯಗ್ರೀವ ಸ್ವಾಮಿಯ ಚಿತ್ರಪಟವನ್ನು ಮಗು ಎಲ್ಲಿ ವಿದ್ಯಾಭ್ಯಾಸ ಮಾಡುತ್ತದೆಯೋ ಅಲ್ಲಿ ಹಾಕಬೇಕು, ನಂತರ ಒಂದು ಲೋಟದಲ್ಲಿ ಹಾಲನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯನ್ನು ಹಾಕಬೇಕು. ಕಲ್ಲುಸಕ್ಕರೆ ಹಾಕಿದ ನಂತರ ಈ ಮಂತ್ರವನ್ನು ಜಪಿಸಿ ಪ್ರತಿನಿತ್ಯ ಮುಂಜಾನೆ ಹಾಗೂ ಸಾಯಂಕಾಲ ಈ ಹಾಲನ್ನು ಕುಡಿಸಬೇಕು.

    ‘ವಿದ್ಯಾನಂದಂ ಮಯಂ ದೇವಂ
    ನಿರ್ಮಲಂ ಸ್ಪಟಿಕಕೃತಿಂ ಆಧಾರಂ
    ಸರ್ವ ವಿದ್ಯಾನಾಂ ಹಯಗ್ರೀವಂ
    ಉಪಸ್ಮಹೆ’

    ಈ ಮಂತ್ರವನ್ನು 21 ಬಾರಿ ಜಪಿಸಿ ನಂತರ ಹಾಲನ್ನು ಕುಡಿಯುವುದರಿಂದ ವಿದ್ಯಾಪ್ರಾಪ್ತಿಯು ಆ ಮಗುವಿಗೆ ಆಗುತ್ತದೆ. ಇದರಿಂದ ಮಗುವಿನಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಓದಿನ ಕಡೆ ಆಸಕ್ತಿಯೂ ಬರುತ್ತದೆ.

  • ಮಂಗಳವಾರದ ದಿನ ಯಾವ ಐದು ನಿಯಮಗಳನ್ನು ಪಾಲಿಸಿದರೆ ಜೀವನ ಸುಖಕರವಾಗಿರುತ್ತದೆ ಎಂಬುದು ತಿಳಿದಿದೆಯೇ.

    ಮಂಗಳವಾರದ ದಿನದಂದು ಈ ಚಿಕ್ಕ ಕೆಲಸವನ್ನು ಮಾಡುವುದರಿಂದ ನಿಮ್ಮ ಜಾತಕದಲ್ಲಿರುವ ಕುಜ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಕುಜ ದೋಷದಿಂದ ಅನುಭವಿಸುವ ತೊಂದರೆಗಳಿಂದ ನಿವಾರಣೆ ಮಾಡಿಕೊಳ್ಳಬೇಕೆಂದರೆ ಮಂಗಳವಾರದ ದಿನದಂದು ಈ ಚಿಕ್ಕ ಕೆಲಸವನ್ನು ಮಾಡಬೇಕು.
    ಮಂಗಳವಾರ ಎಂಬುದು ಕುಜನ ವಾರವಾಗಿದೆ. ಆದ್ದರಿಂದ ಕುಜದೋಷ ಎಂಬುದು ಸ್ತ್ರೀಯರಿಗೆ ಆಗಲಿ ಅಥವಾ ಪುರುಷರಿಗಾಗಳಿ ಇದ್ದರೆ ವಿವಾಹದ ಕಾರ್ಯದಲ್ಲಿ ವಿಳಂಬವಾಗುತ್ತದೆ, ಒಂದು ವೇಳೆ ವಿವಾಹವಾದರು ನಂತರದ ದಿನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

    ಕುಜದೋಷವಿದ್ದರೆ ಸ್ತ್ರೀಯರಿಗೆ ಮಾಂಗಲ್ಯ ಕಂಠಕ ಇರುತ್ತದೆ, ಪುರುಷರಿಗೆ ಆದರೆ ಪೂರ್ಣ ಆಯಸ್ಸು ಸಿಗುವುದಿಲ್ಲ. ಹಾಗಾದರೆ ಮಂಗಳವಾರದ ದಿನದಂದು ಕುಜ ದೋಷ ಇದ್ದವರು ಯಾವ ರೀತಿಯ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಕುಜದೋಷ ಇದ್ದವರು ಮಂಗಳವಾರ ದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ತಲೆಗೆ ಸ್ನಾನವನ್ನು ಮಾಡಿ ಮಂಗಳನಿಗೆ ಪ್ರಿಯವಾದಂತ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬೇಕು. ಕೆಂಪು ಬಣ್ಣದ ವಸ್ತ್ರವನ್ನು ಧರಿಸಿಕೊಂಡು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನವನ್ನು ಪಡೆದುಕೊಳ್ಳಬೇಕು.
    ಓಂ ಸಂ ಶರವಣಭವಾಯ ನಮಃ ಎಂಬ ಮಂತ್ರವನ್ನು ಮಂಗಳವಾರ ದಿನದಂದು 108 ಬಾರಿ ಜಪಿಸುವುದರಿಂದ ಜೀವನದಲ್ಲಿ ಬಹಳಷ್ಟು ಒಳ್ಳೆಯದಾಗುತ್ತದೆ. ಮಂಗಳವಾರ ದಿನದಂದು ಸುಬ್ರಹ್ಮಣ್ಯಸ್ವಾಮಿಗೆ ತೊಗರಿಬೇಳೆ ಯಿಂದ ಮಾಡಿದ ವಸ್ತುವನ್ನು ನೈವೇದ್ಯವಾಗಿ ಇಡುವುದು ತುಂಬಾ ಒಳ್ಳೆಯದು. ಒಂದು ವೇಳೆ ಬ್ರಾಹ್ಮಣರು ಸಿಕ್ಕರೆ ಬ್ರಾಹ್ಮಣರಿಗೆ ತೊಗರಿಬೇಳೆಯನ್ನು ದಾನಮಾಡುವುದು ಶ್ರೇಷ್ಟಕರವಾಗಿರುತ್ತದೆ.

    ಯಾರ ಜಾತಕದಲ್ಲಿ ಕುಜದೋಷವಿರುತ್ತದೆಯೋ ಅಂಥವರು ಯಾವುದೇ ಕಾರಣಕ್ಕೂ ಮಂಗಳವಾರದ ದಿನದಂದು ಆಸ್ಪತ್ರೆಗೆ ಹೋಗಬಾರದು ಹಾಗೂ ಯಾವುದೇ ರೀತಿಯ ಆಪರೇಷನ್ ಅನ್ನು ಮಾಡಿಸಿಕೊಳ್ಳಬಾರದು. ಮಂಗಳವಾರದ ದಿನ ಮಾಡಿಸಿದರೆ ಪುನಹ ಅದೇ ರೀತಿಯ ಸಮಸ್ಯೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕುಜದೋಷವಿದ್ದವರು ಮಂಗಳವಾರದ ದಿನದಂದು ಯಾವುದೇ ಕಾರಣಕ್ಕೂ ಮಾಂಸಹಾರದ ಪದಾರ್ಥಗಳನ್ನು ಸೇವಿಸಬಾರದು. ಈ ಎಲ್ಲಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದಲ್ಲಿ ಕುಜದೋಷದ ಪ್ರಭಾವವು ಕಡಿಮೆಯಾಗುತ್ತದೆ ಎಂದರೆ ತಪ್ಪಾಗಲಾರದು.

  • ಶತ್ರುಗಳು ಮಿತ್ರರಾಗಬೇಕೆಂದರೆ ಏನು ಮಾಡಬೇಕೆಂಬುದು ತಿಳಿದಿದೆಯೇ ನಿಮಗೆ ?

    ಈಗಿನ ಕಾಲದಲ್ಲಿ ನಮ್ಮ ಸುತ್ತಮುತ್ತಲಿನಲ್ಲಿರುವವರೇ ಹಾಗೂ ನಮ್ಮ ಜೊತೆಯಲ್ಲಿ ಇರುವವರು ಶತ್ರುಗಳಾಗಿರುತ್ತಾರೆ, ಕೆಲವೊಮ್ಮೆ ನಮ್ಮ ಜೊತೆಯಲ್ಲೇ ಇದ್ದು ನಮ್ಮ ಬೆನ್ನಿಗೆ ಚೂರಿ ಹಾಕುವಂತ ಹಿತಶತ್ರುಗಳು ಸಹ ಇರುತ್ತಾರೆ. ಒಂದು ವೇಳೆ ಶತ್ರುಗಳ ಮನಪರಿವರ್ತನೆಯಾಗಬೇಕೆಂದರೆ ಶನಿವಾರ ಅಥವಾ ಭಾನುವಾರ ದಿನದಂದು ಈ ಕೆಲಸವನ್ನು ಮಾಡಬೇಕಾಗುತ್ತದೆ.ಶನಿವಾರ ಹಾಗೂ ಭಾನುವಾರದಂದು ಅರಳಿ ಮರದ ಕೆಳಗೆ ಬಿದ್ದಿರುವ ಅರಳಿ ಎಲೆಯನ್ನು ತೆಗೆದುಕೊಂಡು ಬರಬೇಕು. ಮನೆಗೆ ತಂದ ಅರಳಿ ಮರದ ಎಲೆಯನ್ನು ಶುದ್ಧವಾದ ನೀರಿನಿಂದ ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿ ಇಡಬೇಕು. ನಂತರ ದಾಳಿಂಬೆ ಗಿಡದ ಕಾಂಡದ ಕಡ್ಡಿಯನ್ನು ತೆಗೆದುಕೊಂಡು ಕುಂಕುಮವನ್ನು ಪೇಸ್ಟ್ ರೀತಿ ಮಾಡಿಕೊಂಡು ಅರಳಿ ಎಲೆಯ ಮೇಲೆ ನಿಮಗೆ ತೊಂದರೆಯನ್ನು ಕೊಡುತ್ತಿರುವ ಶತ್ರುಗಳ ಹೆಸರನ್ನು ದಾಳಿಂಬೆ ಕಡ್ಡಿಯಿಂದ ಕುಂಕುಮವನ್ನು ಅದ್ದಿ ಅರಳಿ ಎಲೆಯ ಮೇಲೆ ಬರೆಯಬೇಕು. ಹೆಸರನ್ನು ಬರೆದ ನಂತರ ಅರಳಿ ಎಲೆಯನ್ನು ಒಂದು ತಟ್ಟೆಯ ಮೇಲೆ ಮಡಚಿ ಇಡಬೇಕು, ನಂತರ ಉದ್ದರಣೆ ಇಂದ 11 ಬಾರಿ ನೀರನ್ನು ಹಾಕಬೇಕು.ಓಂ ರಿಹ್ಮ್ ಶ್ರೀಮ್ ಕ್ಲೀಮ್ ನಮಃ ಈ ಮೇಲಿನ ಮಂತ್ರವನ್ನು ಜಪಿಸುತ್ತಾ ಪಂಚಪಾತ್ರೆಯಲ್ಲಿ ಇರುವ ನೀರನ್ನು ಉದ್ದರಣೆ ಯಿಂದ 11 ಬಾರಿ ಅರಳಿ ಎಲೆಯ ಮೇಲೆ ಹಾಕಬೇಕು. ನಂತರ ಅರಳಿ ಎಲೆಯನ್ನು ಯಾರೂ ತುಳಿಯದ ಜಾಗದಲ್ಲಿ ಅಥವಾ ಯಾವುದಾದರೂ ಗಿಡದ ಬುಡದಲ್ಲಿ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರುಬಾಧೆ ಖಂಡಿತವಾಗಿಯೂ ದೂರವಾಗುತ್ತದೆ.

    ಒಂದು ವೇಳೆ ನಿಮ್ಮ ಸುತ್ತಮುತ್ತಲಿನಲ್ಲಿ ಸಾಕಷ್ಟು ಜನ ಶತ್ರುಗಳು ಇದ್ದಾರೆ ಎಂದರೆ ಭಾನುವಾರದ ದಿನ ಎರಡರಿಂದ ಮೂರು ಲವಂಗವನ್ನು ಕೈಯಲ್ಲಿಟ್ಟುಕೊಂಡು ನಿಮಗಿರುವ ಶತ್ರುಗಳು, ಹಿತಶತ್ರುಗಳು, ಸುತ್ತಮುತ್ತಲಿನಲ್ಲಿರುವ ಶತ್ರುಗಳ ಹೆಸರನ್ನು ಹೇಳಿಕೊಂಡು ಲವಂಗವನ್ನು ಅಗ್ನಿಯಲ್ಲಿ ಹಾಕಬೇಕು. ಈ ರೀತಿಯಾಗಿ ಮಾಡುವುದರಿಂದ ಶತ್ರುಗಳ ಬಾಧೆಯು ತುಂಬಾ ಜಾಸ್ತಿ ಇದ್ದರೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ.ಭಾನುವಾರ ದಿನದಂದು ಕೈಯಲ್ಲಿ ಸ್ವಲ್ಪ ನಾಣ್ಯವನ್ನು ತೆಗೆದುಕೊಂಡು ಹತ್ತಿರ ಇರುವ ಬಾವಿಯ ಒಳಗೆ ಹಾಕಿ ಹಿಂತಿರುಗಿ ನೋಡದೆ ಬರುವುದರಿಂದ ಶತ್ರು ಬಾಧೆಯು ದೂರವಾಗುತ್ತದೆ. ಭಾನುವಾರದ ದಿನ ಅರಿಶಿನದ ಕೊಂಬನ್ನು ತೆಗೆದುಕೊಂಡು ಶತ್ರುಗಳ ಹೆಸರನ್ನು ಹೇಳಿ ಹರಿಯುವ ನದಿಯಲ್ಲಿ ಬಿಡುವುದರಿಂದ ಶತ್ರುಗಳ ಕಾಟ ಕಡಿಮೆಯಾಗುತ್ತದೆ.

    ಓಂ ಹರಿ ಮರ್ಕಟ ಮರ್ಕಟಾಯ ನಮಃ ಎಂಬ ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಶತ್ರುಗಳು ಸಹ ಮಿತ್ರರಾಗುವ ಸಂಭವ ಹೆಚ್ಚಿರುತ್ತದೆ.

  • ಶತ್ರು ದೋಷವು ಸಂಪೂರ್ಣವಾಗಿ ನಿವಾರಣೆಯಾಗಬೇಕಾದರೆ ಏನು ಮಾಡಬೇಕೆಂದು ತಿಳಿದಿದೆಯೇ ನಿಮಗೆ ?

    ನರಸಿಂಹ ಸ್ವಾಮಿಯನ್ನು ಕೆಲವೊಂದು ವಿಧಾನಗಳಿಂದ ಪೂಜೆ ಮಾಡಿದ್ದೇ ಆದಲ್ಲಿ ಶತ್ರುಗಳ ಕಾಟದಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು. ಸಿರಿಸಂಪತ್ತಿನ ಜೀವನವನ್ನು ನಡೆಸಬೇಕೆಂದರೆ ಲಕ್ಷ್ಮೀನರಸಿಂಹಸ್ವಾಮಿ ಅನುಗ್ರಹವು ಮುಖ್ಯವಾಗಿರುತ್ತದೆ. ಹಾಗಾದರೆ ನರಸಿಂಹಸ್ವಾಮಿ ಯನ್ನು ಯಾವ ವಿಧವಾಗಿ ಪೂಜೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

    ನರಸಿಂಹಸ್ವಾಮಿಗೆ ತುಂಬಾ ಪ್ರಿಯವಾದ ವಾರವೆಂದರೆ ಮಂಗಳವಾರ, ಹಾಗಾಗಿ ಮಂಗಳವಾರದ ದಿನದಂದು ಮನೆಯಲ್ಲಿ ನರಸಿಂಹಸ್ವಾಮಿಯ ಚಿತ್ರಪಟ ಅಥವಾ ವಿಗ್ರಹವನ್ನು ಇಟ್ಟು ಪೂಜೆ ಮಾಡುವವರಿದ್ದರೆ ತುಂಬಾ ಒಳ್ಳೆಯದು. ಈ ವಿಧಾನವನ್ನು ಅನುಸರಿಸಿಕೊಂಡು ನರಸಿಂಹಸ್ವಾಮಿಯ ಪೂಜೆಯನ್ನು ಮಂಗಳವಾರದ ದಿನದಂದು ಮಾಡುವುದರಿಂದ ಸಂಪೂರ್ಣವಾಗಿ ಶತ್ರುಬಾಧೆ ಎಂಬುದು ನಿವಾರಣೆಯಾಗುತ್ತದೆ.ಮೊದಲಿಗೆ ಮಂಗಳವಾರದ ದಿನದಂದು ಮನೆಯನ್ನು ಶುಚಿ ಮಾಡಿ ನರಸಿಂಹಸ್ವಾಮಿಗೆ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ, ಕೆಂಪು ಅಕ್ಷತೆ ಯಿಂದ ಅರ್ಚನೆಯನ್ನು ಮಾಡಿ, ಕೆಂಪು ಹೂವುಗಳಿಂದ ಅಲಂಕಾರವನ್ನು ಮಾಡಿ ಪೂಜೆಯನ್ನು ಮಾಡಬೇಕು.

    ನರಸಿಂಹ ಸ್ವಾಮಿಗೆ ಪೂಜೆಯನ್ನು ಮಾಡಬೇಕಾದರೆ ಓಂ ನರಸಿಂಹಾಯ ನಮಃ ಎಂಬ ಮಂತ್ರವನ್ನು 108 ಬಾರಿ ಜಪ ಮಾಡಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ನರಸಿಂಹ ಸ್ವಾಮಿಗೆ ತುಂಬಾ ಪ್ರಿಯವಾಗಿರುವುದು ಹೆಸರುಬೇಳೆಯ ಪಾನಕ. ಆದ್ದರಿಂದ ಹೆಸರುಬೇಳೆಯ ಪಾನಕವನ್ನು ನೈವೇದ್ಯವಾಗಿ ಇಟ್ಟು, ನೈವೇದ್ಯ ಮಾಡಿದ ಪಾನಕವನ್ನು ಕಡು ಬಡವರಿಗೆ ಹಂಚಿ ಅದನ್ನು ನಂತರ ನೀವು ಸೇವಿಸುವುದರಿಂದ ನರಸಿಂಹಸ್ವಾಮಿಯ ಸಂಪೂರ್ಣ ಅನುಗ್ರಹವು ಪ್ರಾಪ್ತಿಯಾಗುತ್ತದೆ.ಸರ್ವ ಶತ್ರುವು ಸಂಪೂರ್ಣವಾಗಿ ನಿವಾರಣೆಯಾಗಬೇಕು ಎಂದರೆ ನರಸಿಂಹಸ್ವಾಮಿಯ ಸುದರ್ಶನ ಮಂತ್ರವನ್ನು ಹೇಳುವುದರಿಂದ ಸರ್ವ ಶತ್ರು ದೋಷಗಳು ನಿವಾರಣೆಯಾಗುತ್ತದೆ. ಈ ಪೂಜೆಯನ್ನು ಪ್ರತಿವಾರವೂ ಮಾಡುವುದರಿಂದ ಸಂಪೂರ್ಣವಾಗಿ ಶತ್ರು ದೋಷವು ನಿವಾರಣೆಯಾಗುತ್ತದೆ. ಮಂಗಳವಾರದ ದಿನದಂದು ಸುದರ್ಶನ ಮಂತ್ರದ ಜೊತೆಗೆ ನರಸಿಂಹ ಕರಾವಲಂಬ ಸ್ತೋತ್ರವನ್ನು ಹೇಳುವುದರಿಂದ ಯಾವುದೇ ದುಷ್ಟಶಕ್ತಿಗಳ ಪ್ರಭಾವವು ಬೀಳುವುದಿಲ್ಲ,ಇದರ ಜೊತೆಗೆ ನರದೃಷ್ಟಿ,ನರ ದೋಷ,ಶತ್ರು ದೋಷವೆಲ್ಲವು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

  • ಮಹಾವಿಷ್ಣು ಗರುಡನಿಗೆ ಹೇಳಿದ ಆರೋಗ್ಯದ ಮಂತ್ರ ಯಾವುದು ಎಂದು ತಿಳಿದಿದೆಯೇ ನಿಮಗೆ ?

    ಗರುಡನು ಶ್ರೀ ಮಹಾವಿಷ್ಣುವಿನ ಬಳಿ ಎಂತಹದೇ ಕಷ್ಟದ ಕಾಲದಲ್ಲಿ, ಎಂತಹ ಪರಿಸ್ಥಿತಿಯಲ್ಲೂ ಏನು ಆಗಬಾರದು ಅಂತಹ ಒಂದು ಮಂತ್ರವನ್ನು ತಿಳಿಸಿಕೊಡಿ ಎಂದು ಕೇಳಿದಾಗ, ಗರುಡನಿಗೆ ಮಹಾವಿಷ್ಣು ಈ ಮಂತ್ರವನ್ನು ಹೇಳುತ್ತಾರೆ. ಈ ಮಂತ್ರವನ್ನು ಗರುಡ ಪುರಾಣದಲ್ಲಿ ಹೇಳಲಾಗಿದೆ. ಗರುಡ ಪುರಾಣದಲ್ಲಿ ಉಲ್ಲೇಖವಾಗಿರುವ ಈ ಮಂತ್ರದ ಹೆಸರು ಏನಂದರೆ ಗಾರುಣಿ ಪರಾವಿದ್ಯ ಮಂತ್ರ. ಈ ಮಂತ್ರವನ್ನು ಪ್ರತಿನಿತ್ಯ ಹೇಳುವುದರಿಂದ ಆರೋಗ್ಯವು ವೃದ್ಧಿಯಾಗುತ್ತದೆ. ಈ ಮಂತ್ರದಿಂದ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ. ಈ ಮಂತ್ರವನ್ನು ಹೇಳಬೇಕಾದರೆ ಶ್ರದ್ಧಾಭಕ್ತಿಯಿಂದ ನಂಬಿಕೆಯನ್ನು ಇಟ್ಟು ಹೇಳಬೇಕು. ದೇವರನ್ನು ನಂಬಿ ಈ ಮಂತ್ರವನ್ನು ಹೇಳಿದರೆ ಎಲ್ಲವೂ ಒಳ್ಳೆಯದಾಗುತ್ತದೆ.

    ಓಂ ಯಕ್ಷಿ ಓಂ ಅಂ ಸ್ವಾಹಾ ಈ ಮಂತ್ರವನ್ನು ಪ್ರತಿನಿತ್ಯ ಮುಂಜಾನೆ ಸ್ನಾನ ಮಾಡಿದ ನಂತರ 108 ಬಾರಿ ಹೇಳುವುದರಿಂದ ಜೀವನದಲ್ಲಿ ತುಂಬಾ ಒಳ್ಳೆಯದಾಗುತ್ತದೆ. ಒಂದು ವೇಳೆ 108 ಬಾರಿ ಜಪಿಸುವುದಕ್ಕೆ ಸಮಯವಿಲ್ಲ ಎಂದರೆ ಕನಿಷ್ಠ 21 ಬಾರಿ ಜಪಿಸಬೇಕು. ಈ ಮಂತ್ರವನ್ನು ಸಮಯ ಸಿಕ್ಕಾಗಲೆಲ್ಲಾ ಯಾವುದೇ ಜಾಗದಲ್ಲಿ ಇದ್ದರು ಜಪಿಸಬಹುದು. ಒಂದು ವೇಳೆ ಯಾರಾದರೂ ಆರೋಗ್ಯದ ಸಮಸ್ಯೆ ಇಂದ ಹಾಸಿಗೆಯನ್ನು ಹಿಡಿದಿದ್ದರೆ ಅಂತವರು ಮಲಗಿಕೊಂಡೆ ಈ ಮಂತ್ರವನ್ನು ಜಪಿಸಬಹುದು. ಇದರಿಂದ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.

    ಗಾರುಣಿ ಪರಾವಿದ್ಯ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ಆರೋಗ್ಯ ಸ್ಥಿರವಾಗಿರುತ್ತದೆ ಹಾಗೂ ಯಾವುದೇ ರೀತಿಯ ಆರೋಗ್ಯದ ಸಮಸ್ಯೆಯೂ ಬರುವುದಿಲ್ಲ.ಗಾರುಣಿ ಪರಾವಿದ್ಯ ಮಂತ್ರವನ್ನು ಜಪಿಸುವ ದಿನ ಮುಂಜಾನೆ ಎದ್ದು, ಮನೆಯನ್ನು ಶುಚಿ ಮಾಡಿ, ದೇವರಿಗೆ ತುಪ್ಪದ ದೀಪವನ್ನು ಹಚ್ಚಿ ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ ಎಂದರೆ ತಪ್ಪಾಗಲಾರದು.