ಸಂಕ್ರಾಂತಿ ಹಬ್ಬದ ದಿನ ಬೆಳ್ಳುಳ್ಳಿಯಿಂದ ಈ ಉಪಾಯ ಮಾಡಿದರೆ ಬಡತನ ದೂರವಾಗುವುದು ಖಚಿತ.

ಜ್ಯೋತಿಷ್ಯ

ಬಡತನ ಎಂಬುದು ಸಾಕಷ್ಟು ಮನೆಯ ಜನರಲ್ಲಿರುತ್ತದೆ, ಈ ಬಡತನವನ್ನು ಮನೆಯಿಂದ ಹೊರಗೆ ಹಾಕಬೇಕೆಂಬ ಇಚ್ಛೆ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾದರೆ ಸಂಕ್ರಾಂತಿ ಹಬ್ಬದ ದಿನದಂದು ಒಂದು ಬೆಳ್ಳುಳ್ಳಿಯಿಂದ ಯಾವ ರೀತಿ ಬಡತನವನ್ನು ದೂರ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಇರಬೇಕು ಎಂದು ಇಚ್ಛೆ ಇರುತ್ತದೆ, ಆದರೆ ಕೆಲವೊಂದು ಬಾರಿ ನಾವು ಪಡುವ ಕಷ್ಟಕ್ಕೆ ತಕ್ಕದಾದ ಪ್ರತಿಫಲ ದೊರೆಯುತ್ತಿರುವುದಿಲ್ಲ, ಇದಕ್ಕೆ ಪ್ರಮುಖ ಕಾರಣವೆಂದರೆ ನಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಎಂದರೆ ತಪ್ಪಾಗಲಾರದು.

ಈ ರೀತಿಯ ನಕಾರಾತ್ಮಕ ಶಕ್ತಿ ಗಳನ್ನು ಮನೆಯಿಂದ ಹೊರಗೆ ಹಾಕಬೇಕೆಂದರೆ ಬೆಳ್ಳುಳ್ಳಿ ಅನ್ನು ಪ್ರಮುಖ ಅಸ್ತ್ರವಾಗಿ ಬಳಸಬೇಕು. ಬೆಳ್ಳುಳ್ಳಿಯಲ್ಲಿ ಕೇತುವಿನ ಅಂಶವಿರುತ್ತದೆ, ಕೇತು ಅಸುರರ ಗುಂಪಿಗೆ ಸೇರಿದವನಾಗಿರುತ್ತಾನೆ, ಆದ್ದರಿಂದ ವಿಶೇಷವಾಗಿ ಈ ದಿನ ಬೆಳ್ಳುಳ್ಳಿಯನ್ನು ನಿಮ್ಮ ಮನೆಯ ಹೊಸ್ತಿಲಿನ ಮೇಲೆ ಇಟ್ಟು ಅದರ ಅಕ್ಕ ಪಕ್ಕ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.ಈ ರೀತಿ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಷ್ಟೇ ಬಲಿಷ್ಠವಾಗಿದ್ದರೂ ದೂರವಾಗುತ್ತದೆ ಎಂದರೆ ತಪ್ಪಾಗಲಾರದು.

Leave a Reply

Your email address will not be published. Required fields are marked *