ಮಾಟ-ಮಂತ್ರ ಮಾಡುವಾಗ ನಿಂಬೆ ಹಣ್ಣನ್ನು ಯಾವ ಕಾರಣಕ್ಕೆ ಉಪಯೋಗಿಸುತ್ತಾರೆ ಎಂಬುದು ತಿಳಿದಿದೆಯೇ ನಿಮಗೆ ?

ಜ್ಯೋತಿಷ್ಯ

ಮಾಟ-ಮಂತ್ರ ಮಾಡುವಾಗ ನಿಂಬೆ ಹಣ್ಣನ್ನು ಯಾವ ಕಾರಣಕ್ಕೆ ಉಪಯೋಗಿಸುತ್ತಾರೆ ಎಂಬುದು ತಿಳಿದಿದೆಯೇ ನಿಮಗೆ..ಸಾಮಾನ್ಯವಾಗಿ ಕೆಡುಕನ್ನು ಉಂಟು ಮಾಡಲು ತಾಂತ್ರಿಕರು ಬಳಸುವ ವಿಧಾನದಲ್ಲಿ ಮೊದಲು ವ್ಯಕ್ತಿಗೆ ಮಾಡುವ ಕೆಡುಕನ್ನು ಶಕ್ತಿಯ ರೂಪದಲ್ಲಿ ಇರಿಸಿ ನಿಂಬೆಹಣ್ಣಿನಲ್ಲಿ ಸಂಗ್ರಹವಾಗುವಂತೆ ಮಾಡುತ್ತಾರೆ. ತದನಂತರ ನಿಂಬೆಹಣ್ಣಿನ ಮೂಲಕ ಶಕ್ತಿಯು ವ್ಯಕ್ತಿಯ ಹತ್ತಿರ ನಾಟುವಂತೆ ಮಾಡುತ್ತಾರೆ. ಇದೇ ವಿಧಾನವನ್ನು ಜನಸಾಮಾನ್ಯರು ಮಾಟ ಮಂತ್ರ ಮಾಡುವುದು ಎಂದು ಹೇಳುತ್ತಾರೆ. ಇದೇ ವಿಷಯವನ್ನು ಮಾಂತ್ರಿಕರು ನಿಂಬೆಹಣ್ಣನ್ನು ದಾಟಿದರೆ ಮಾಟ-ಮಂತ್ರ ವ್ಯಕ್ತಿಗೆ ಪ್ರಯೋಗವಾಗುತ್ತದೆ ಎಂಬುದನ್ನು ಹೇಳುತ್ತಾರೆ.

ನಿಂಬೆಹಣ್ಣಿನಲ್ಲಿ ಅಲೌಕಿಕ ಶಕ್ತಿ ಇರುವ ಕಾರಣ ಮಾಟ ಮಂತ್ರ ಮಾಡುವ ಕಾರ್ಯಗಳಿಗೆ ಬಳಸಲಾಗುತ್ತದೆ. ಅದೇ ರೀತಿ ಜನಸಾಮಾನ್ಯರಿಂದ ಕೆಟ್ಟದೃಷ್ಟಿ ಬಿದ್ದರೆ ವಿಮುಕ್ತಿಯನ್ನು ಪಡೆದುಕೊಳ್ಳಲು ಸಹ ಇದೇ ನಿಂಬೆಹಣ್ಣನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕಾಗಿ ಹೊಸ ಮನೆ , ಹೊಸ ವಾಹನವನ್ನು ಖರೀದಿ ಮಾಡಿದಾಗ ನಿಂಬೆಹಣ್ಣನ್ನು ಉಪಯೋಗಿಸಲಾಗುತ್ತದೆ ಅಥವಾ ವಾಹನಗಳಿಗೆ ಕಟ್ಟಲಾಗುತ್ತದೆ.

ನಿಂಬೆಹಣ್ಣು ಎಲ್ಲಾ ಕಾಲದಲ್ಲಿಯೂ ಸಿಗುವುದರಿಂದ ತಾಂತ್ರಿಕರು ಮಾಟ ಮಂತ್ರ ಪ್ರಯೋಗಕ್ಕೆ ನಿಂಬೆಹಣ್ಣನ್ನು ಬಳಸುತ್ತಾರೆ. ಇಷ್ಟೇ ಅಲ್ಲದೆ ನಿಂಬೆಹಣ್ಣು ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ತಾಂತ್ರಿಕರು ಯಾವಾಗಲೂ ನಿಂಬೆಹಣ್ಣು ಅವರ ಬಳಿ ಇರುವ ಹಾಗೆ ಇಟ್ಟುಕೊಳ್ಳುತ್ತಾರೆ.

Leave a Reply

Your email address will not be published. Required fields are marked *