ಭೂತವು ಮನುಷ್ಯನನ್ನು ಪ್ರವೇಶ ಮಾಡಿದರೆ ಗೋಚರಿಸುವ ಲಕ್ಷಣಗಳು ಯಾವುವು ಎಂದು ತಿಳಿದಿದೆಯೇ ?

ಜ್ಯೋತಿಷ್ಯ

ದೈವ ಇರುವುದು ಎಷ್ಟು ಸತ್ಯವೋ ಅಷ್ಟೇ ಆತ್ಮವು ಇರುವುದು ಸತ್ಯ. ದೇವರು ನಮ್ಮ ಮೇಲೆ ದೃಷ್ಟಿಯನ್ನು ಇಟ್ಟು ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬುದು ನಂಬಿಕೆ. ಅದೇ ರೀತಿ ಒಬ್ಬ ವ್ಯಕ್ತಿ ಬದುಕಿದ್ದಾಗ ಅವರನ್ನು ತುಂಬಾ ಆತ್ಮೀಯತೆಯಿಂದ ಪ್ರೀತಿಸುತ್ತೇವೆ, ಆದರೆ ಅದೇ ವ್ಯಕ್ತಿ ಸತ್ತ ಬಳಿಕ ಒಬ್ಬರ ಮೇಲೆ ಪ್ರವೇಶ ಪಡೆಯುತ್ತಿದ್ದಾನೆ ಎಂದರೆ ಈ ಕೆಲವೊಂದು ಗುಣ ಲಕ್ಷಣಗಳು ಗೋಚರಿಸುತ್ತವೆ. ಈ ರೀತಿಯಾಗಿ ಲಕ್ಷಣಗಳು ಕಂಡುಬಂದರೆ ಭೂತವು ಪ್ರವೇಶವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ ಅಥವಾ ಪ್ರೇತಾತ್ಮ ಯಾವುದೋ ಒಂದು ಉದ್ದೇಶವನ್ನು ಇಟ್ಟುಕೊಂಡು ನಿಮ್ಮನ್ನು ಪ್ರವೇಶ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ.

ಭೂತ ಪ್ರೇತಗಳು ಆವರಿಸಿದರೆ ವ್ಯಕ್ತಿಯು ಹೇಗಿರುತ್ತಾನೆ ಎಂದರೆ ಏಕಾಂತವಾಗಿ ಕೋಣೆಯಲ್ಲಿ ಒಬ್ಬರೇ ಇರುತ್ತಾರೆ, ಒಬ್ಬರೇ ಕುಳಿತುಕೊಂಡು ನರಳುತ್ತಿರುತ್ತಾರೆ ಅಥವಾ ದುಃಖ ಪಡುತ್ತಿರುತ್ತಾರೆ, ಯಾರೊಂದಿಗೂ ಸೇರುವುದಿಲ್ಲ, ಯಾರೊಬ್ಬರ ಜೊತೆ ಮಾತನಾಡುವಾಗ ಆಕಸ್ಮಿಕವಾಗಿ ಸಿಟ್ಟುಗೊಳ್ಳುತ್ತಾರೆ, ಏನು ಮಾತನಾಡುತ್ತಿರುತ್ತೇನೆ ಎಂಬುದು ಅರಿವಿರುವುದಿಲ್ಲ, ನಗುನಗುತ್ತಾ ಅಳುತ್ತಿರುತ್ತಾರೆ, ಆತ್ಮ ವ್ಯಕ್ತಿಯನ್ನು ನೋಡಿ ಹೆದರುತ್ತದೆ, ಒಂದು ವೇಳೆ ಆತ್ಮವು ವ್ಯಕ್ತಿಯನ್ನು ಪ್ರವೇಶ ಮಾಡುತ್ತಿದೆ ಎಂದರೆ ತನ್ನ ರಕ್ಷಣೆಗಾಗಿ ಪ್ರವೇಶ ಮಾಡುತ್ತದೆ.ಕೆಲವು ಆತ್ಮಗಳು ರಕ್ಷಣೆಗಾಗಿ ಬಂದು ಸೇರುತ್ತವೆ, ಮತ್ತೆ ಕೆಲವು ಆತ್ಮಗಳು ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಬಂದು ಸೇರುತ್ತವೆ, ಮತ್ತೆ ಇನ್ನು ಕೆಲವು ಆತ್ಮಗಳು ಶತ್ರು ದೃಷ್ಟಿಯಿಟ್ಟುಕೊಂಡು ಬಂದು ಸೇರುತ್ತವೆ. ಆತ್ಮವು ಒಬ್ಬ ವ್ಯಕ್ತಿಯನ್ನು ಪ್ರವೇಶ ಮಾಡಿದಾಗ ಆತನು ಎಲ್ಲರಿಂದ ದೂರ ಇರಲು ಇಚ್ಛಿಸುತ್ತಾನೆ, ಊಟದ ಸಮಯದಲ್ಲಿ ಏನಾದರೂ ಕಿರಿಕಿರಿ ಮಾಡುತ್ತಾರೆ, ಇಷ್ಟವಾದ ಊಟವನ್ನು ಬಹಳಷ್ಟು ಇಚ್ಚೆ ಪಡುತ್ತಾನೆ, ಊಟವನ್ನು ಸೇವಿಸಬೇಕಾದಾಗ ರಾಕ್ಷಸರ ರೀತಿ ಸೇವಿಸುತ್ತಾನೇ, ಯಾವುದೇ ಕೆಲಸ ಕಾರ್ಯಕ್ಕೂ ಹೋಗದೆ ಯಾವಾಗಲೂ ಮನೆಯಲ್ಲಿ ಕೂತಿರುತ್ತಾರೆ, ಪ್ರತಿನಿತ್ಯ ಸ್ನಾನ ಮಾಡಬೇಕು ಎಂದು ಅನಿಸುವುದಿಲ್ಲ, ಬಟ್ಟೆಯನ್ನು ಬದಲಾಯಿಸಬೇಕು ಎಂದು ಅನಿಸುವುದಿಲ್ಲ, ರಾತ್ರಿಯ ಸಮಯದಲ್ಲಿ ಒಬ್ಬರೇ ಮಾತನಾಡಿಕೊಳ್ಳುತ್ತಿರುತ್ತಾರೆ ಅಥವಾ ಅಳುತ್ತಿರುತ್ತಾರೆ ಈ ರೀತಿಯ ಸಮಸ್ಯೆ ಇದ್ದಾಗ ಪ್ರೇತ ಉಚ್ಚಾಟನೆಯನ್ನು ಮಾಡಬೇಕು.

Leave a Reply

Your email address will not be published. Required fields are marked *