ಆರೋಗ್ಯವಂತ ವ್ಯಕ್ತಿ ಆಗಬೇಕೆಂದರೆ ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡಬೇಕು.

ಜ್ಯೋತಿಷ್ಯ

ಆರೋಗ್ಯವಂತ ವ್ಯಕ್ತಿ ಆಗಬೇಕೆಂದರೆ ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡಬೇಕು..ಮನೆಯಲ್ಲಿ ಕೆಲವೊಂದು ವಸ್ತುಗಳನ್ನು ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವೊಂದು ಸಲ ಮನೆಯಲ್ಲಿ ನಾವು ಇಟ್ಟುಕೊಳ್ಳುವ ಉಪಯೋಗಿಸದ ವಸ್ತುಗಳು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಆದ್ದರಿಂದ ಉಪಯೋಗಿಸದ ವಸ್ತುಗಳನ್ನು ಮನೆಯಿಂದ ಹೊರ ಹಾಕುವುದರಿಂದ ಮನೆಯು ಶಾಂತವಾಗುತ್ತದೆ ಹಾಗೂ ಮನಸ್ಸು ಶಾಂತವಾಗುತ್ತದೆ ಮತ್ತು ವಾಸ್ತು ದೋಷವು ನಿವಾರಣೆಯಾಗುತ್ತದೆ.ಆಗ್ನೇಯ ದಿಕ್ಕಿನಲ್ಲಿ ಅಡುಗೆ ಕೋಣೆಯನ್ನು ಕಟ್ಟಿಸಿ ಅಡುಗೆಯನ್ನು ಮಾಡಿ ಅಲ್ಲಿಯೇ ಎಲ್ಲರೂ ಕುಳಿತುಕೊಂಡು ಊಟ ಮಾಡುವುದು ತುಂಬಾ ಉತ್ತಮವಾದದ್ದು. ಅಡುಗೆ ಕೋಣೆಯಲ್ಲಿ ಕುಳಿತುಕೊಂಡು ಊಟ ಮಾಡುವುದರಿಂದ ಆಯಸ್ಸು ಹೆಚ್ಚಾಗುತ್ತದೆ ಹಾಗೂ ವ್ಯಕ್ತಿಯು ಅಭಿವೃದ್ಧಿಯನ್ನು ಕಾಣುತ್ತಾನೆ.ಅಡುಗೆ ಕೋಣೆಯಲ್ಲಿ ಮನೆಯ ಯಜಮಾನ ಕುಳಿತುಕೊಂಡ ಊಟ ಮಾಡುವುದರಿಂದ ಕೀರ್ತಿವಂತನು ಹಾಗೂ ಧನ ಸಂಪತ್ತನ್ನು ಗಳಿಸುವಂತಹವನಾಗುತ್ತಾನೆ. ಹಾಗೆಯೇ ಮಲಗುವ ಕೋಣೆಯನ್ನು ಸಹ ಶುದ್ಧವಾಗಿಟ್ಟುಕೊಳ್ಳಬೇಕು. ಪೂರ್ವ ಹಾಗೂ ದಕ್ಷಿಣದ ಕಡೆ ತಲೆಯನ್ನು ಹಾಕಿಕೊಂಡು ಮಲಗುವುದು ತುಂಬಾ ಉತ್ತಮ ಮತ್ತು ಉತ್ತರ ಹಾಗೂ ಪಶ್ಚಿಮ ದಿಕ್ಕಿನ ಕಡೆ ತಲೆ ಹಾಕಿಕೊಂಡು ಮಲಗಬಾರದು ಇದರಿಂದ ಅನೇಕ ರೀತಿಯ ಕಷ್ಟಗಳನ್ನು ನಾವೇ ತಂದುಕೊಳ್ಳುವಂತ ಪರಿಸ್ಥಿತಿ ಬರುತ್ತದೆ.ಪ್ರತಿಯೊಬ್ಬರ ಮನೆಯಲ್ಲೂ ಸ್ಪಟಿಕ ಮಣಿ ಇದ್ದರೆ ತುಂಬಾ ಒಳ್ಳೆಯದು ಏಕೆಂದರೆ ಯಾವುದೇ ರೀತಿಯ ವಾಸ್ತು ದೋಷವು ನಿಮ್ಮ ಮನೆಯಲ್ಲಿ ಉಂಟಾಗುವುದಿಲ್ಲ. ಪ್ರತಿನಿತ್ಯ ಮನೆಯಲ್ಲಿ ಶ್ಲೋಕವನ್ನು ಹೇಳುವುದು, ಭಕ್ತಿಗೀತೆಗಳನ್ನು ಹಾಡುವುದು ಅಥವಾ ಒಂದು ವೇಳೆ ಹಾಡಲು ಬರುವುದಿಲ್ಲವೆಂದರೆ ಮೊಬೈಲ್ ಅಲ್ಲಿ ಭಕ್ತಿಗೀತೆಗಳನ್ನು ಹಾಕಿಕೊಂಡು ಮುಂಜಾನೆ ಎದ್ದ ತಕ್ಷಣ ಕೇಳುವುದರಿಂದ ತುಂಬಾ ಒಳ್ಳೆಯದು. ಈ ರೀತಿ ಮಾಡುವುದರಿಂದ ಮಾಡುವ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.

Leave a Reply

Your email address will not be published. Required fields are marked *