Your cart is currently empty!
ಆರ್ಥಿಕ ಸಮಸ್ಯೆಗೆ, ಹಣದ ಸಮಸ್ಯೆಗೆ ಸೂಕ್ತ ಪರಿಹಾರ ಕರಿಮೆಣಸಿನ ಕಾಳು.
ಸಾಲಬಾಧೆ, ಹಣದ ಸಮಸ್ಯೆ,ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿ ಅದರಿಂದ ಹೊರಬರಬೇಕೆಂದರೆ ಕರಿಮೆಣಸಿನ ಕಾಳಿನಿಂದ ಈ ಉಪಾಯವನ್ನು ಮಾಡುವುದರಿಂದ ಆದಷ್ಟು ಬೇಗ ನಿಮ್ಮ ಆರ್ಥಿಕ ಸಂಕಷ್ಟದಿಂದ ಹಾಗೂ ಇನ್ನಿತರ ಕಷ್ಟಗಳಿಂದ ಹೊರಬರಬಹುದು. ಹಾಗಾದರೆ ಈ ಕರಿಮೆಣಸಿನ ಕಾಳಿನಿಂದ ಯಾವ ರೀತಿ ಉಪಾಯವನ್ನು ಮಾಡಬೇಕು ಎಂದು ತಿಳಿದುಕೊಳ್ಳೋಣ ಬನ್ನಿ.ಈ ಉಪಾಯವನ್ನು 5 ಭಾನುವಾರಗಳ ಕಾಲ ಮಾಡುವುದರಿಂದ ಸಾಲಬಾಧೆ,ಆರ್ಥಿಕ ಸಂಕಷ್ಟ, ಹಣದ ಸಮಸ್ಯೆಯಿಂದ ಮುಕ್ತರಾಗಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಒಂದು ವೇಳೆ 5 ಭಾನುವಾರಗಳ ಕಾಲ ಮಾಡಲು ಸಾಧ್ಯವಾಗದಿದ್ದರೆ ಒಂದು ಅಮಾವಾಸ್ಯೆ ದಿನ ಮಾಡುವುದರಿಂದ ಐದು ಭಾನುವಾರಗಳ ಕಾಲ ಮಾಡಿದ ಫಲವು ಲಭಿಸುತ್ತದೆ ಎಂದು ತಾಂತ್ರಿಕ ಭಾಗದಲ್ಲಿ ಹೇಳಲಾಗಿದೆ.ಕರಿಮೆಣಸಿನ ಕಾಳು ಪ್ರಕೃತಿಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಿ ಸಕಾರಾತ್ಮಕ ಶಕ್ತಿಯ ಸಂಚಲನಕ್ಕೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿದೆ.
ಮೊದಲಿಗೆ 9 ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಮನೆಯಿಂದ ಹೊರಭಾಗಕ್ಕೆ ಬರಬೇಕು. ಬಲ ಕೈಯಲ್ಲಿ ಇರುವ ಕರಿ ಮೆಣಸಿನ ಕಾಳನ್ನು ಎಡ ಕೈಯಿಗೆ ಹಾಕಿಕೊಳ್ಳಬೇಕು, ನಂತರ ಒಂದೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಓಂ ಎಂದು ಹೇಳಿ ಪೂರ್ವ ದಿಕ್ಕಿನ ಕಡೆಗೆ ಎಸೆಯಬೇಕು ನಂತರ ಮತ್ತೊಂದು ಕರಿ ಮೆಣಸಿನ ಕಾಳನ್ನು ತೆಗೆದುಕೊಂಡು ಪಕ್ಷಿಮ ದಿಕ್ಕಿನ ಕಡೆಗೆ ಎಸೆಯಬೇಕು. ಹಾಗೆಯೇ ಮತ್ತೊಂದು ಕರಿ ಮೆಣಸಿನ ಕಾಳನ್ನು ಉತ್ತರದಿಕ್ಕಿಗೆ ಹಾಗೂ ಇನ್ನೊಂದು ಕರಿಮೆಣಸಿನ ಕಾಳನ್ನು ದಕ್ಷಿಣ ದಿಕ್ಕಿಗೆ ಎಸೆಯಬೇಕು. ಅದೇ ರೀತಿ ಈಶಾನ್ಯ, ವಾಯುವ್ಯ, ಆಗ್ನೇಯ ಹಾಗೂ ನೈಋತ್ಯ ದಿಕ್ಕಿಗೆ ಓಂ ಎಂದು ಹೇಳಿ ಒಂದೊಂದು ಕರಿ ಮೆಣಸಿನ ಕಾಳನ್ನು ಎಸೆಯಬೇಕು. ಎಲ್ಲಾ ದಿಕ್ಕಿಗೂ ಹಾಕಿದ ನಂತರ ಉಳಿದ ಒಂದು ಕರಿ ಮೆಣಸಿನ ಕಾಳನ್ನು ಆಕಾಶವನ್ನು ನೋಡುತ್ತಾ ಓಂ ಎಂದು ಹೇಳಿ ಆಕಾಶದ ಕಡೆ ಎಸೆಯಬೇಕು.ಈ ಪರಿಹಾರವನ್ನು ಸಾಯಂಕಾಲ 6 ಘಂಟೆಯ ನಂತರ ಹಾಗೂ 9 ಘಂಟೆಯೊಲಗೆ ಮಾಡಬೇಕು. ಈ ರೀತಿಯಾಗಿ ಮಾಡಿದ ನಂತರ ಕೈಕಾಲುಗಳನ್ನು ತೊಳೆದುಕೊಂಡು ನಂತರ ಮನೆಗೆ ಪ್ರವೇಶವನ್ನು ಪಡೆಯಬೇಕು. ಇದರಿಂದ ಸಾಲಬಾಧೆ, ಹಣದ ಸಮಸ್ಯೆ, ಆರ್ಥಿಕ ಸಂಕಷ್ಟವು ನಿವಾರಣೆಯಾಗಿ ಸುಖಕರವಾಗಿ ಜೀವನವನ್ನು ನಡೆಸಬಹುದು.
ಒಂದು ವೇಳೆ ಕೆಲಸ ಮಾಡುವ ಜಾಗದಲ್ಲಿ ಯಾರೂ ಕೂಡ ನಿಮ್ಮ ಮಾತನ್ನು ಕೇಳುತ್ತಿಲ್ಲ ಎಂದರೆ ಮನೆಯಿಂದ ಹೊರಗೆ ಹೋಗುವಾಗ 9 ಕರಿ ಮೆಣಸಿನ ಕಾಳನ್ನು ಬಾಯಲ್ಲಿ ಹಾಕಿಕೊಂಡು ಅಗಿಯುತ್ತಾ ಹೋಗುವುದರಿಂದ ನಿಮ್ಮ ಸುತ್ತಮುತ್ತಲಿನಲ್ಲಿರುವವರು ಬದಲಾವಣೆಯಾಗಿ ನಿಮ್ಮ ಮಾತನ್ನು ಕೇಳುವ ಹಾಗೆ ಆಗುತ್ತಾರೆ.
ಒಂದು ವೇಳೆ ವಿಪರೀತವಾಗಿ ಶತ್ರುಗಳ ಕಾಟ ಜಾಸ್ತಿಯಿದ್ದರೆ ಮನೆಯಿಂದ ಹೊರಹೋಗುವಾಗ ಅವರ ಹೆಸರನ್ನು ಹೇಳಿ 9 ಕರಿ ಮೆಣಸಿನ ಕಾಳನ್ನು ಅಗ್ನಿಯಲ್ಲಿ ದಹಿಸಿ ಅದರಿಂದ ಬಂದ ಬೂದಿಯನ್ನು ಕಸದ ಬುಟ್ಟಿಗೆ ಹಾಕಿ ಹೋಗುವುದರಿಂದ ಶತ್ರು ಕಾಟ ನಿವಾರಣೆಯಾಗುತ್ತದೆ.