Kannada Astrology

ಭಗವಂತನ ಅನುಗ್ರಹ ಬೇಕೆಂದರೆ ಈ ಮೂರು ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸಿ.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ಹೂವನ್ನು ಮೂಡಿಸಲು ಕೆಲವೊಂದು ಗಿಡಗಳನ್ನು ಹಾಕಿಕೊಂಡಿರುತ್ತಾರೆ. ಹಾಗಾಗಿ ನಿಮ್ಮ ಮನೆಯ ಆವರಣದಲ್ಲಿ ಈ ಮೂರು ಗಿಡಗಳನ್ನು ಬೆಳೆಸಿದ್ದರೆ ಖಂಡಿತವಾಗಿಯೂ ಲಕ್ಷ್ಮೀನಾರಾಯಣ ಅನುಗ್ರಹವು ಪ್ರಾಪ್ತಿಯಾಗುತ್ತದೆ. ಹಾಗಾದರೆ ಯಾವ ಮೂರು ಗಿಡಗಳನ್ನು ಮನೆಯಲ್ಲಿ ಬೆಳೆಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮನೆಯಲ್ಲಿ ತುಳಸಿ ಗಿಡವು ಇದ್ದರೆ ತುಂಬಾ ಒಳ್ಳೆಯದು. ತುಳಸಿ ಗಿಡವು ಇರುವುದರಿಂದ ಮನೆಗೆ ಯಾವ ದುಷ್ಟ ಶಕ್ತಿಯು ಪ್ರವೇಶ ಮಾಡದಂತೆ ತಡೆಯುತ್ತದೆ. ವಿಷ್ಣು ಸ್ವರೂಪವಾದ ನಾರಾಯಣ ದೇವರು ನಲ್ಲಿಕಾಯಿ ಗಿಡದಲ್ಲಿ ಇರುವುದರಿಂದ ನಲ್ಲಿಕಾಯಿ ಗಿಡವನ್ನು ಬೆಳೆಸುವುದು ಒಳ್ಳೆಯದು. ಬಿಲ್ಪತ್ರೆ ಗಿಡದಲ್ಲಿ ಲಕ್ಷ್ಮೀದೇವಿ ಇರುವುದರಿಂದ ಬಿಲ್ಪತ್ರೆ ಗಿಡವನ್ನು ಮನೆಯಂಗಳದಲ್ಲಿ ಬೆಳೆಸುವುದು ಉತ್ತಮ. ಹಾಗಾಗಿ ಮನೆಯ ಅಂಗಳದಲ್ಲಿ ಈ ಮೂರು ಗಿಡಗಳು ಇದ್ದರೆ ನಾವು ಅದೃಷ್ಟವಂತರು ಎಂದು ತಿಳಿದುಕೊಳ್ಳಬಹುದು.

ಲಕ್ಷ್ಮೀದೇವಿಗೆ ತುಂಬಾ ಪ್ರಿಯವಾದ ಹೂವೆಂದರೆ ಸಂಪಿಗೆ ಹಾಗೂ ಮಲ್ಲಿಗೆ. ಆದ್ದರಿಂದ ಮಲ್ಲಿಗೆ ಹೂವಿಗೆ ಮನೆಯಲ್ಲಿ ಗಂಧವನ್ನು ತೇಯ್ದು ಹೂವಿಗೆ ಹಚ್ಚಿ ಲಕ್ಷ್ಮಿ ದೇವಿಗೆ ಮುಡಿಸುವುದರಿಂದ ಲಕ್ಷ್ಮೀದೇವಿ ಶಾಶ್ವತವಾಗಿ ಮನೆಯಲ್ಲಿ ನೆಳೆಸುತ್ತಾಳೆ. ಲಕ್ಷ್ಮೀದೇವಿಯು ಭೂದೇವಿಗೆ ದಾಳಿಂಬೆ ಗಿಡವನ್ನು ಯಾರ ಮನೆಯಲ್ಲಿ ಬೆಳೆಸುತ್ತಾರೋ ಅಂಥವರ ಮನೆಯಲ್ಲಿ ಸಂತಾನ ಪ್ರಾಪ್ತಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡುವುದಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ದಾಳಿಂಬೆ ಗಿಡವನ್ನು ಬೆಳೆಸುವುದು ಒಳ್ಳೆಯದು.ಆಂಜನೇಯನಿಗೆ ಪ್ರಿಯವಾದ ಬಾಳೆಹಣ್ಣಿನ ಗಿಡವನ್ನು ಮನೆಯ ಆವರಣದಲ್ಲಿ ಹಾಕುವುದರಿಂದ ಆಂಜನೇಯಸ್ವಾಮಿಯ ರಕ್ಷಣೆಯೂ ಸಹ ದೊರೆಯುತ್ತದೆ. ಲಕ್ಷ್ಮೀದೇವಿ ಬಿಲ್ವಪತ್ರದ ಗಿಡದ ಕೆಳಗೆ ಕುಳಿತುಕೊಂಡು ಸಹಸ್ರಾರು ವರ್ಷಗಳ ಕಾಲ ತಪಸ್ಸನ್ನು ಮಾಡಿ ಅಲ್ಲಿಯೇ ಐಕ್ಯವಾಗಿರುವುದರಿಂದ ಬಿಲ್ವಪತ್ರದ ಗಿಡವು ತುಂಬಾ ಶ್ರೇಷ್ಠವಾಗಿದೆ.

ಆದ್ದರಿಂದ ಮೇಲೆ ಹೇಳಿರುವ ಗಿಡಗಳನ್ನು ಮನೆಯ ಅಂಗಳದಲ್ಲಿ ಬೆಳೆಸುವುದರಿಂದ ಭಗವಂತನ ಅನುಗ್ರಹವು ಪ್ರಾಪ್ತಿಯಾಗುತ್ತದೆ ಹಾಗೂ ಸುಖ,ಶಾಂತಿ, ನೆಮ್ಮದಿಯಿಂದ ಜೀವನವನ್ನು ನಡೆಸಲು ಸಹಾಯಕವಾಗುತ್ತದೆ.