Kannada Astrology

ಕೊಡಗಿನ ಸೋಮವಾರಪೇಟೆಯ ಹೊನ್ನಮ್ಮನ ಕೆರೆಯ ಬಗ್ಗೆ ನಿಮಗೆ ಗೊತ್ತಿಲ್ಲದ ನಿಗೂಢ ವಿಚಾರಗಳು

ಕರ್ನಾಟಕ ರಾಜ್ಯವನ್ನು ಕೆರೆಗಳ ನಾಡು ಎಂದು ಉಲ್ಲೇಖಿಸಿದರೂ ಸಹ ತಪ್ಪಾಗಲಾರದು, ಏಕೆಂದರೆ ನಮ್ಮ ರಾಜ್ಯದಲ್ಲಿ ನೂರಾರು ಕೆರೆಗಳು ಹಾಗೂ ಸರೋವರಗಳಿವೆ. ಕೆಲವೊಂದು ಕೆರೆಗಳ ಬಗ್ಗೆ ಮಾಹಿತಿ ಎಲ್ಲರಿಗೂ ಸರಿಯಾಗಿ ತಿಳಿಯದೆ ಕೇವಲ ಸ್ಥಳೀಯರಿಗೆ ಮಾತ್ರ ಅದರ ಬಗ್ಗೆ ತಿಳಿದಿರುತ್ತದೆ. ಹಾಗಾದರೆ ಕೊಡಗಿನ ಸೋಮವಾರಪೇಟೆಯ ಹೊನ್ನಮ್ಮನ ಕೆರೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸುದರ್ಶನ್ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663953893 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663953892. 

ಹೊನ್ನಮ್ಮನ ಕೆರೆಯು ಕೊಡಗಿನ ಸೋಮವಾರ ಪೇಟೆಯಿಂದ 6 ಕಿಲೋಮೀಟರ್ ದೂರದಲ್ಲಿದೆ. ಹೊನ್ನಮ್ಮನ ಕೆರೆಯು ಕೊಡಗಿನಲ್ಲಿ ಅತಿ ದೊಡ್ಡ ಕೆರೆ ಎಂದು ಅನಿಸಿಕೊಂಡಿದೆ. ನೂರಾರು ವರ್ಷಗಳ ಹಿಂದೆ ಈ ಭಾಗದಲ್ಲಿ ಭೀಕರ ಬರಗಾಲ ಒದಗಿಬಂದಿತ್ತು, ಇದರಿಂದ ಕುಡಿಯುವ ನೀರಿಗೆ ತೊಂದರೆಯಾಗಿ ಪಕ್ಷಿಗಳು,ಜಾನುವಾರುಗಳು ಮತ್ತು ಮನುಷ್ಯರು ನೀರಿಲ್ಲದೆ ಸಾಯುತ್ತಿದ್ದರಂತೆ, ಆಗ ಆ ಊರಿನ ಪಟೇಲರಾಗಿದ್ದ ಮಲ್ಲೇಗೌಡ ಎಂಬುವವರು ಊರಿಗೆ ಒಳಿತಾಗಲೆಂದು ಒಂದು ಕೆರೆಯನ್ನು ನಿರ್ಮಿಸಿದರಂತೆ. ಆ ಕೆರೆಯ ಹೆಸರೇ ಹೊನ್ನಮ್ಮನ ಕೆರೆ, ಹೀಗೆ ಕೆರೆಯನ್ನು ನಿರ್ಮಿಸಿದ ನಂತರವೂ ನೀರಿಲ್ಲದೆ ಹೋದಾಗ ಮಲ್ಲೇಗೌಡರು ಚಿಂತಿಸಲು ಮುಂದಾಗುತ್ತಾರೆ ಆಗ ಅಶರೀರವಾಣಿ ಕೇಳಿಸುತ್ತದೆ.

ಆಗ ಮಲ್ಲೇಗೌಡರಿಗೆ ಅಶರೀರವಾಣಿ ಹೇಳುತ್ತದೆ, ಒಬ್ಬ ಮುತ್ತೈದೆ ಹೆಣ್ಣು ಮಗಳನ್ನು ಕೆರೆಗೆ ಹಾಹಾರವಾಗಿ ಅರ್ಪಿಸಿದರೆ ಕೆರೆಗೆ ನೀರು ಬರುತ್ತದೆ ಎಂದು ತಿಳಿಸುತ್ತದೆ. ಆಗ ಕೆರೆಗೆ ಹಾಹಾರವಾಗಿ ಯಾರನ್ನು ಅರ್ಪಿಸುವುದು ಎಂದು ಚಿಂತಿಸುತ್ತಿದ್ದಾಗ ಅವರ ಕಿರಿಯ ಸೊಸೆ ಹೊನ್ನಮ್ಮ ಮುಂದೆ ಬರುತ್ತಾರೆ.

ಹೊನ್ನಮ್ಮ ಕೆರೆಗೆ ಪೂಜೆಯನ್ನು ಸಲ್ಲಿಸಿ ಮೆಟ್ಟಿಲನ್ನು ಹತ್ತಿಕೊಂಡು ಬರುತ್ತಿರುವಾಗ ನೀರು ಉಕ್ಕಿ ಬಂದು ಹೊನ್ನಮ್ಮ ನೀರಿನಲ್ಲಿಯೇ ಐಕ್ಯ ಆಗುತ್ತಾರೆ. ಹೊನ್ನಮ್ಮ ಮಾಡಿದ ತ್ಯಾಗದ ಪ್ರತಿಫಲವಾಗಿ ಕೆರೆಯಲ್ಲಿ ನೀರು ತುಂಬಿ ಬಂದಿದ್ದರಿಂದ ಕೆರೆಯು ಹೊನ್ನಮ್ಮನಕೆರೆ ಎಂದು ಪ್ರಸಿದ್ಧಿಯನ್ನು ಪಡೆದು ಕೊಳ್ಳುತ್ತದೆ. ಅಂದಿನಿಂದ ಇಂದಿನವರೆಗೂ ಹೊನ್ನಮ್ಮನ ಕೆರೆ ನೀರು ಬತ್ತಿಲ್ಲ.

ಇದಾದ ನಂತರ ತನ್ನ ಸೊಸೆ ಮಾಡಿದ ಒಳ್ಳೆಯ ಕೆಲಸದಿಂದ ಕೆರೆಯ ಹತ್ತಿರದಲ್ಲಿ ಹೊನ್ನಮ್ಮನ ದೇವಾಲಯವನ್ನು ನಿರ್ಮಿಸಿ ಅಲ್ಲಿ ಬಸವೇಶ್ವರ, ಗಣಪತಿ ಹಾಗೂ ಹೊನ್ನಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುತ್ತಾರೆ. ಆ ಗುಡಿಯು ಇಂದು ಸ್ವರ್ಣಗೌರಿ ಕ್ಷೇತ್ರವಾಗಿ ಹೊರಹೊಮ್ಮಿ ನಿಂತಿದೆ. ಕೊಡಗು ಭಾಗದ ಜನರಿಗೆ ಹೊನ್ನಮ್ಮ ಆರಾಧ್ಯದೈವ ಆಗಿದ್ದಾರೆ. ಹೊನ್ನಮನ ಕೆರೆಯು ಸರಿ ಸುಮಾರು 16 ಎಕರೆ ವಿಸ್ತೀರ್ಣವನ್ನು ಹೊಂದಿದೆ.

ನವದಂಪತಿಗಳು ಗೌರಿ ಹಬ್ಬದ ದಿನ ಒಟ್ಟಿಗೆ ಬಂದು ಹೊನ್ನಮ್ಮನ ಕೆರೆಗೆ ಬಾಗಿನವನ್ನು ಅರ್ಪಿಸುವುದು ವಿಶೇಷವಾಗಿದೆ. ಈ ರೀತಿಯಾಗಿ ಬಾಗಿನವನ್ನು ಅರ್ಪಿಸಿ ಹೊನ್ನಮ್ಮನಿಗೆ ಪೂಜೆಯನ್ನು ಮಾಡಿಸಿದರೆ ದಾಂಪತ್ಯವು ಚೆನ್ನಾಗಿರುತ್ತದೆ ಎಂಬ ನಂಬಿಕೆ ಆ ಭಾಗದ ಜನರಲ್ಲಿ ಇದೆ.

ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ಪಂಡಿತ್ ಸೋಮನಾಥ ಭಟ್ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9663218892 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9663218892.