Home / ಜ್ಯೋತಿಷ್ಯ / ಈ ಒಂದು ವಸ್ತುವನ್ನು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆ ಮಾಡಿದರೆ ಹಣದ ಸಮಸ್ಯೆಗಳೆಲ್ಲ ದೂರವಾಗುತ್ತದೆ.

ಈ ಒಂದು ವಸ್ತುವನ್ನು ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆ ಮಾಡಿದರೆ ಹಣದ ಸಮಸ್ಯೆಗಳೆಲ್ಲ ದೂರವಾಗುತ್ತದೆ.

ನಮಗೆ ಬರಬೇಕಾಗಿರುವ ಬಾಕಿ ಹಣವು ಬರಬೇಕಾದರೆ ಹಾಗೂ ಆರ್ಥಿಕ ಸಂಕಷ್ಟವು ದೂರವಾಗಿ ಸದೃಢರಾಗಬೇಕು ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದರೆ ಯಾವ ರೀತಿ ಏಲಕ್ಕಿಯ ಕಾಯಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಏಲಕ್ಕಿ ಕಾಯಿ ನವಗ್ರಹದಲ್ಲಿ ಶುಕ್ರಗ್ರಹಕ್ಕೆ ತುಂಬ ಪ್ರಿಯವಾದದ್ದು. ಶುಕ್ರನಿಗೆ ಅಧಿಪತ್ಯ ದೇವತೆ ಯಾರೆಂದರೆ ಲಕ್ಷ್ಮಿ. ಆದ್ದರಿಂದ ದೊಡ್ಡದಾದ ಏಲಕ್ಕಿ ಕಾಯನ್ನು, ಕೆಂಪು ದಾರವನ್ನು ಹಾಗೂ ಕೆಂಪು ವಸ್ತ್ರವನ್ನು ತೆಗೆದುಕೊಂಡು ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಬೇಕು.ಮೊದಲಿಗೆ ಶುಕ್ರವಾರ ದಿನ ಏಲಕ್ಕಿ ಕಾಯಿ ಪೌಡರ್ ಅನ್ನು ಸ್ನಾನ ಮಾಡುವ ನೀರಿಗೆ ಹಾಕಿ ಐದು ನಿಮಿಷಗಳ ಕಾಲ ಬಿಟ್ಟು ನಂತರ ಸ್ನಾನ ಮಾಡಬೇಕು. ನಂತರ ಒಂದು ಏಲಕ್ಕಿ ಕಾಯನ್ನು ತೆಗೆದುಕೊಂಡು ಕೆಂಪು ದಾರದಲ್ಲಿ ಗಂಟನ್ನು ಹಾಕಿಕೊಳ್ಳಬೇಕು. ಒಂದು ಏಳಕ್ಕಿಯ ಕಾಯಿಯನ್ನು ಕಟ್ಟಿದ ನಂತರ ಮೂರು ಗಂಟನ್ನು ಹಾಕಿ ನಂತರ ಇದೇ ರೀತಿ ಉಳಿದ 4 ಏಲಕ್ಕಿಯ ಕಾಯಿಯನ್ನು ಕಟ್ಟಬೇಕು. ಈ ರೀತಿಯಾಗಿ ಏಲಕ್ಕಿಯ ಕಾಯನ್ನು ಕಟ್ಟಿದ ನಂತರ ಲಕ್ಷ್ಮೀದೇವಿ ಚಿತ್ರಪಟದ ಮುಂದೆ ಇರುವ ಕೆಂಪು ವಸ್ತ್ರದ ಮೇಲೆ ಇಟ್ಟು ತುಪ್ಪದಿಂದ ಅಥವಾ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.

ಪೂಜೆಯನ್ನು ಮಾಡಿದ ನಂತರ ಕೆಂಪು ವಸ್ತ್ರವನ್ನು ಗಂಟುಕಟ್ಟಿ ಮನೆಯ ಬೀರುವಿನ ಒಳಗೆ ಇಟ್ಟುಕೊಳ್ಳಬೇಕು. ಇದರಿಂದ ಲಕ್ಷ್ಮೀದೇವಿ ಅನುಗ್ರಹವು ಪ್ರಾಪ್ತಿಯಾಗಿ ನಿಮಗಿರುವ ಸಾಲಬಾಧೆ, ಹಣದ ಸಮಸ್ಯೆ ಹಾಗೂ ಬೇರೆಯವರಿಗೆ ಕೊಟ್ಟಿರುವ ದುಡ್ಡು ಹಿಂತಿರುಗಿ ಬರುತ್ತದೆ. ಪ್ರತಿ ಶುಕ್ರವಾರ ಬೀರುವಿನಲ್ಲಿ ಇಟ್ಟಿರುವ ಕೆಂಪು ವಸ್ತ್ರದ ಗಂಟನ್ನು ತೆಗೆದು ದೇವರ ಕೋಣೆಯಲ್ಲಿ ಲಕ್ಷ್ಮೀದೇವಿ ಚಿತ್ರಪಟದ ಮುಂದೆ ಇಟ್ಟು ಧೂಪದಿಂದ ಪೂಜೆಯನ್ನು ಮಾಡಿ ನಂತರ ಮತ್ತೆ ಬೀರುವಿನ ಒಳಗೆ ಇಡಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಸಂಕಷ್ಟವು ದೂರವಾಗಿ ಜೀವನದಲ್ಲಿ ಸದೃಢರಾಗಬಹುದು.

Leave a Reply

Your email address will not be published. Required fields are marked *